Don't Miss!
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರದನಾಯಕ ಪೋಸ್ಟರಿನಲ್ಲಿ 'ಒನ್ ಅಂಡ್ ಓನ್ಲಿ' ಸುದೀಪ್!
'ವರದನಾಯಕ'ಚಿತ್ರದಲ್ಲಿ ನಾಯಕ ಚಿರಂಜೀವಿ ಸರ್ಜಾರಿಗೆ ನಾಯಕಿಯಾಗಿ ನಿಕೇಶಾ ಪಟೇಲ್ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ದಕ್ಷಿಣ ಭಾರತದ ಹೆಸರಾಂತ ನಟಿ ಸಮೀರಾ ರೆಡ್ಡಿ ನಟಿಸಿದ್ದಾರೆ. ಆದರೆ 'ವರದನಾಯಕ' ಚಿತ್ರಕ್ಕೆ ಸುದೀಪ್ ಹಾಗೂ ಸಮೀರಾ ರೆಡ್ಡಿ ಅವರೇ ಪ್ರಚಾರ ಹಾಗೂ ಬಿಸಿನೆಸ್ ದೃಷ್ಟಿಯಿಂದ ಮುಖ್ಯ ಎಂಬುದು ಸತ್ಯ. ಸುದೀಪ್ ಅವರನ್ನೇ ಪ್ರಚಾರದಲ್ಲಿ ಬಳಸಿಕೊಂಡು ಚಿತ್ರ ತೆರೆಗೆ ಬರುತ್ತಿದೆ, ಯಶಸ್ಸಿಗಾಗಿ ಕಾಯುತ್ತಿದೆ.
ಸುದೀಪ್ ನಟಿಸಿರುವುದರಂತ ಚಿತ್ರಕ್ಕೆ ಬಿಡುಗಡೆಗೆ ಮೊದಲೇ ಸಾಕಷ್ಟು ಲಾಭವಾಗಿದೆ. ಈಗಾಗಲೇ ಚಿತ್ರದ ವಿತರಣೆ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಬಿಕೆಟಿ ವಲಯದಲ್ಲಿ ರು. 3.5 ಕೋಟಿಗೆ ಮಾರಾಟವಾಗಿರುವ 'ವರದನಾಯಕ', ಇನ್ನೂ ಕೆಲವು ಕಡೆಯ ವಿತರಣೆ ಹಕ್ಕುಗಳಿಂದ ಸುಮಾರು ರು. 5 ಕೋಟಿ ಗಳಿಸಿದೆ. ಇಷ್ಟೇ ಅಲ್ಲ, ಚಿತ್ರದ ಸ್ಯಾಟಲೈಟ್ ಹಕ್ಕುಗಳು ರು. 2.25 ಕೋಟಿಗೆ ಮಾರಾಟವಾಗಿದೆ.
ಅಂದರೆ ಸರಿಸುಮಾರು ರು. 11 ಕೋಟಿಗಳಷ್ಟು ಮೊತ್ತವನ್ನು ಬಿಡುಗಡೆಗೆ ಮೊದಲೇ 'ವರದನಾಯಕ' ಚಿತ್ರ ಬಾಚಿಕೊಂಡಿದೆ. ಇನ್ನೂ ಸಾಕಷ್ಟು ಏರಿಯಾಗಳ ವಿತರಣೆ ಹಕ್ಕನ್ನು ನಿರ್ಮಾಪಕ ಶಂಕರೇಗೌಡರು ಉಳಿಸಿಕೊಂಡಿದ್ದಾರೆ. ಅವು ಬಿಡುಗಡೆಗೆ ಮುನ್ನ ಅಥವಾ ಬಿಡುಗಡೆ ನಂತರ ಅವರ ಜೇಬು ತುಂಬಿಸುವುದು ಗ್ಯಾರಂಟಿ. ಈ ಎಲ್ಲಾ ಬೆಳವಣಿಗೆಗೆ ಕಾರಣ 'ಒನ್ ಅಂಡ್ ಓನ್ಲಿ' ಸುದೀಪ್ ಎಂಬುದು ಯಾರಿಗಾದರೂ ಅರ್ಥವಾಗುವ ಸಂಗತಿ. (ಒನ್ ಇಂಡಿಯಾ ಕನ್ನಡ)