Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರಂಜೀವಿ ಸರ್ಜಾ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್ "Strtn dubbin fr VaradhaNayaka frm today...Jus saw a run thru few days bk,,Chiru has done a grt job ..hope it does him gud..." ಎಂದಿದ್ದಾರೆ. ಡಬ್ಬಿಂಗ್ ಮಾಡುವ ಕಾಲಕ್ಕೆ ಚಿತ್ರದ ದೃಶ್ಯಗಳನ್ನು ನೋಡಿರುವ ಸುದೀಪ್ "ಚಿರಂಜೀವಿ ಸರ್ಜಾ 'ವರದನಾಯಕ' ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ, ಈ ಚಿತ್ರದಿಂದ ಚಿರುಗೆ ಒಳ್ಳೆಯದಾಗಲಿದೆ" ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸ್ವತಃ ಸುದೀಪ್ ಈ 'ವರದನಾಯಕ' ಚಿತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಅವರೀಗ 'ಸೌತ್ ಇಂಡಿಯಾ'ದ ಹೊಸ 'ಸೂಪರ್ ಸ್ಟಾರ್'. ಹೀಗಿರುವಾಗ ಸುದೀಪ್ ಮಾತಿಗೆ ಭಾರಿ ಬೆಲೆಯಿದೆ ಎಂಬುದು ವಾಸ್ತವ. ಚಿರು ಬಗ್ಗೆ ಸುದೀಪ್ ಹೇಳಿರುವ ಮಾತುಗಳು ಚಿರಂಜೀವಿ ಸರ್ಜಾ ಯಶಸ್ಸಿನ ಬಗ್ಗೆ ಚಿಂತೆಗೀಡಾಗಿದ್ದ ಅವರ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ 'ಗ್ರೇಟ್ ಟಾನಿಕ್' ಆಗುವುದರಲ್ಲಿ ಸಂದೇಹವೇ ಇಲ್ಲ.ಚ
ಕಿಚ್ಚ ಸುದೀಪ್ ಮಾತಿಗೆ ಚಿರಂಜೀವಿ ಸರ್ಜಾ ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು. "ಸುದೀಪ್ ನನಗೆ ಗಾಡ್ ಫಾದರ್ ಇದ್ದಂತೆ. ದೊಡ್ಡವರ ದೊಡ್ಡ ಮಾತು ನನಗೆ ಆಶೀರ್ವಾದವಾಗಿದೆ" ಎಂದು ಚಿರು ಸುದೀಪ್ ಹೇಳಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂಬುದು ಚಿರಂಜೀವಿ ಸರ್ಜಾರ ಆಪ್ತರ ಮಾತು. ಒಟ್ಟಿನಲ್ಲಿ 'ಅದ್ದೂರಿ' ಚಿತ್ರದ ನಂತರ ಚಿರು ತಮ್ಮ 'ಧ್ರುವ ಸರ್ಜಾ' ಪ್ರಕಾಶಿಸುತ್ತಿರುವ ಬೆನ್ನಲ್ಲೇ, 'ವರದನಾಯಕ' ಮೂಲಕ ಚಿರಂಜೀವಿ ಸರ್ಜಾ 'ಮಿಂಚಿಂಗ್' ಪ್ರಾರಂಭ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)