Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ಹೊಸ 'ಭೀಷ್ಮ'ನಾಗಿ ಕಿಶೋರ್
ನಟ ಕಿಶೋರ್ ಅವರ ಮುಂದಿನ ಚಿತ್ರಕ್ಕೆ 'ಕರ್ಣ' ಎಂದು ಹೆಸರಿಡಲು ನಿರ್ಧರಿಸಲಾಗಿತ್ತು. ಆದರೆ ಈಗ ಅದು ಭೀಷ್ಮ ಎಂದಾಗಿದೆ. ಇದಕ್ಕೆ ಚಿತ್ರತಂಡ ಕೊಡುವ ಕಾರಣ 'ಕರ್ಣ' ಶೀರ್ಷಿಕೆ ಸಿಗಲಿಲ್ಲ ಎಂಬುದು. ಒಟ್ಟಾರೆಯಾಗಿ ಕರ್ಣನನ್ನು 'ಭೀಷ್ಮ' ಮಾಡಲಾಗಿದೆ.
ಉಳಿದಂತೆ ಚಿತ್ರತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. 'ತುಂಡೈಕ್ಳ ಸವಾಸ' ಚಿತ್ರದ ಬಳಿಕ ಕಿಶೋರ್ ಕನ್ನಡದಲ್ಲಿ ಅಭಿನಯಿಸುತ್ತಿರುವ ಚಿತ್ರವಿದು. ಪ್ರತಿಜ್ಞೆಗೆ ಹೆಸರಾದವನು, ಪಿತಾಮಹ ಎನ್ನಿಸಿಕೊಂಡವನು 'ಭೀಷ್ಮ'. ಆದರೆ ಈ ಭೀಷ್ಮ ಪೌರಣಿಕವೂ ಅಲ್ಲ ಐತಿಹಾಸಿಕವೂ ಅಲ್ಲವಂತೆ. ಆಧುನಿಕ 'ಭೀಷ್ಮ'ನಿವನು ಎನ್ನುತ್ತದೆ ಚಿತ್ರತಂಡ. [ಸ್ಯಾಂಡಲ್ ವುಡ್ ಕರ್ಣನಾಗಿ ಮಿಂಚಲಿರುವ ಕಿಶೋರ್]
ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರವಿರಾಜ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಅವರೇ ಹೆಣೆದಿದ್ದಾರೆ. ಚಿತ್ರದ ನಾಯಕಿ ಹಾರ್ದಿಕಾ ಶೆಟ್ಟಿ. ಚಿತ್ರದ ನಿರ್ಮಾಪಕ ರಾಮಚಂದ್ರನ್ ಅವರು ಗಮನಾರ್ಹ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ.
ಛಾಯಾಗ್ರಹಣ ದಯಾಳ್ ಓಶೋ, ಕಲೆ ಕೃಷ್ಣಮಾಚಾರಿ, ಸಂಕಲನ ದೇವರಾಜ್, ಚಿತ್ರದ ಉಳಿದ ತಾರಾಗಣದಲ್ಲಿ ಶ್ರೀ ಚಂದ್ರು, ಶೋಭರಾಜ್, ಜಿ.ಆರ್ ಮುಂತಾದವರು ಇದ್ದಾರೆ. ಇನ್ನುಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. (ಏಜೆನ್ಸೀಸ್)