twitter
    For Quick Alerts
    ALLOW NOTIFICATIONS  
    For Daily Alerts

    ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...

    By Bharath Kumar
    |

    'ಆ' ದುರ್ಘಟನೆ ನಡೆಯದೆ ಹೋಗಿದ್ದರೆ, ಇಷ್ಟೊತ್ತಿಗೆ ಅನಿಲ್ ಮತ್ತು ಉದಯ್ 'ಸೂಪರ್ ಹೀರೋ' ಆಗಿರುತ್ತಿದ್ದರು. ಆದ್ರೆ, ವಿಧಿ ಲಿಖಿತ ಬೇರೆ ಆಗಿತ್ತು.

    ಮೊದಲ ಬಾರಿಗೆ ಪ್ರಮುಖ ಖಳನಟರಾಗಿ ಅನಿಲ್ ಮತ್ತು ಉದಯ್ ಅಭಿನಯಿಸಿದ ಸಿನಿಮಾ 'ಮಾಸ್ತಿ ಗುಡಿ' ಆಗಿದ್ರಿಂದ, ಚಿತ್ರಕ್ಕಾಗಿ ಏನು ಬೇಕಾದರೂ ಮಾಡಲು ಇಬ್ಬರೂ ಸಿದ್ಧವಾಗಿದ್ದರು. ಶಿಸ್ತು ಬದ್ಧ ಡಯೆಟ್ ಫಾಲೋ ಮಾಡಿ ಸಿಕ್ಸ್ ಪ್ಯಾಕ್ ಬೇರೆ ಮಾಡಿಕೊಂಡು 'ಮಾಸ್ತಿ ಗುಡಿ' ಚಿತ್ರಕ್ಕಾಗಿ ಹಗಲಿರುಳು ಬೆವರು ಹರಿಸಿದ್ದ ಈ ಉದಯೋನ್ಮುಖ ನಟರು, ಇದೇ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಪಾಲ್ಗೊಂಡು ದುರಂತ ಸಾವಿಗೀಡಾಗಿದ್ದಾರೆ. ['ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು]

    ಹಾಗ್ನೋಡಿದ್ರೆ, ಅನಿಲ್ ಮತ್ತು ಉದಯ್...ಇಬ್ಬರ ಜೀವನಕ್ಕೂ 'ಮಾಸ್ತಿ ಗುಡಿ' ಸಿನಿಮಾ ಟರ್ನಿಂಗ್ ಪಾಯಿಂಟ್. ಆದ್ರೆ, ಇದೇ ಚಿತ್ರ ಇಬ್ಬರ ಜೀವನವನ್ನೇ ನುಂಗಿ ಹಾಕುತ್ತೆ ಅಂತ ಪಾಪ ಈ ಕಲಾವಿದರಿಗೆ ಗೊತ್ತೇ ಆಗಲಿಲ್ಲ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

    ಅಷ್ಟಕ್ಕೂ, 'ಮಾಸ್ತಿ ಗುಡಿ' ಚಿತ್ರದಲ್ಲಿ ಪ್ರಮುಖ ಕೇಡಿಯಾಗಿ ಕಾಣಿಸಿಕೊಂಡಿದ್ದ ಅನಿಲ್ ಯಾರು? ಅವರ ಹಿನ್ನೆಲೆ ಏನು? ಅನಿಲ್ ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಅವರು ಅಭಿನಯಿಸಿದ ಚಿತ್ರಗಳು ಯಾವುವು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ಓದಿ....

    ಅನಿಲ್ ಮೂಲತಃ ಎಲ್ಲಿಯವರು?

    ಅನಿಲ್ ಮೂಲತಃ ಎಲ್ಲಿಯವರು?

    ನಟ ಅನಿಲ್ ಕುಮಾರ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಬನಶಂಕರಿ ಬಳಿಯಿರುವ ಕದಿರೇನಹಳ್ಳಿಯ ನಿವಾಸಿ. ವೇಣುಗೋಪಾಲ್ ಹಾಗೂ ಸರಸ್ವತಿ ದಂಪತಿಯ ಮೂರನೇ ಮಗ ಅನಿಲ್. ಇವರಿಗೆ ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ತಂಗಿಯರಿದ್ದಾರೆ. ಭ್ರಮ್ಯ ರವರನ್ನ ಅನಿಲ್ ವಿವಾಹವಾಗಿದ್ದರು. ಅನಿಲ್-ಭ್ರಮ್ಯ ದಂಪತಿಗೆ 6 ವರ್ಷದ ಗಂಡು ಮಗು ಹಾಗೂ 3 ವರ್ಷದ ಒಂದು ಹೆಣ್ಣು ಮಗು ಇದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

    ಜಿಮ್ ಟ್ರೈನರ್ ಆಗಿದ್ದ ಅನಿಲ್

    ಜಿಮ್ ಟ್ರೈನರ್ ಆಗಿದ್ದ ಅನಿಲ್

    ಚಿತ್ರರಂಗದಲ್ಲಿ ಖಳನಟ ಆದ್ಮೇಲೆ ಅನಿಲ್, ಸ್ವಂತ ಜಿಮ್ ನಡೆಸುತ್ತಿದ್ದರು. ಹಲವು ಯುವ ಪ್ರತಿಭೆಗಳಿಗೆ ಟ್ರೈನಿಂಗ್ ನೀಡುತ್ತಿದ್ದರು. ಜೊತೆಗೆ, 'ಮಾಸ್ತಿ ಗುಡಿ' ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಲು ತಮ್ಮ ಮನೆಯಲ್ಲೇ ಪ್ರತಿ ನಿತ್ಯ ವರ್ಕೌಟ್ ಮಾಡುತ್ತಿದ್ದರು. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]

    ಬೀಡಾ ಅಂಗಡಿಯಲ್ಲಿ ಕೆಲಸ

    ಬೀಡಾ ಅಂಗಡಿಯಲ್ಲಿ ಕೆಲಸ

    ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ನಟ ಅನಿಲ್ ಕುಮಾರ್ ಅವರು ಬೀಡಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ 800 ರೂಪಾಯಿಗೆ ಟರ್ನರ್ ಕೆಲಸ ಕೂಡ ಮಾಡಿದ್ದರು. ಕೊನೆಗೆ ಗಾಡಿಗಳನ್ನು ಸೀಜ್ ಮಾಡುವ ಕೆಲಸಕ್ಕೆ ಕೈ ಹಾಕಿದರು. ಅಲ್ಲಿವರೆಗೂ ಸ್ಟಾರ್ ಗಳನ್ನು ಪರದೆ ಮೇಲೆ ನೋಡುತ್ತಿದ್ದ ಅನಿಲ್ ಗೆ ಅದೇ ಸ್ಟಾರ್ ಗಳು ಬರುಬರುತ್ತಾ ಹತ್ತಿರವಾದರು. [ದುನಿಯಾ ವಿಜಿ 'ಮಾಸ್ತಿ ಗುಡಿ' ವಿಲನ್ ಬಗ್ಗೆ ನಿಮಗೆಷ್ಟು ಗೊತ್ತು?]

    ಸಿನಿಮಾ ಬದುಕಿಗೆ ಎಂಟ್ರಿ ಆಕಸ್ಮಿಕ

    ಸಿನಿಮಾ ಬದುಕಿಗೆ ಎಂಟ್ರಿ ಆಕಸ್ಮಿಕ

    ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಅನಿಲ್ ಕುಮಾರ್ ಅವರು ಸಿನಿಮಾ ಜಗತ್ತಿನಲ್ಲಿ ಮಿಂಚುವ ಕನಸು ಕಂಡವರಲ್ಲ. ಆಕಸ್ಮಿಕವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅನಿಲ್ ಇಲ್ಲಿಯವರೆಗೂ 25 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

    ಅನಿಲ್ ಸಿನಿಮಾಗೆ ಬರಲು ಕಾರಣ ದುನಿಯಾ ವಿಜಿ

    ಅನಿಲ್ ಸಿನಿಮಾಗೆ ಬರಲು ಕಾರಣ ದುನಿಯಾ ವಿಜಿ

    ಅನಿಲ್ ಕುಮಾರ್ ಅವರು ಸಿನಿಮಾ ಕ್ಷೇತ್ರಕ್ಕೆ ಬರಲು ಮುಖ್ಯ ಕಾರಣ ನಟ ದುನಿಯಾ ವಿಜಯ್. ಒಮ್ಮೆ ಗಾಡಿಗಳನ್ನು ಸೀಜ್ ಮಾಡಲು ಅನಿಲ್ ಹೋಗಿದ್ದಾಗ, ಅಲ್ಲಿ ಸಿನಿಮಾದ ಫೈಟರ್ ಗಳನ್ನು ನೋಡಿ ಪರಿಚಯ ಮಾಡಿಕೊಂಡರು. ತದನಂತರ ಕೃಷ್ಣರಾವ್ ಪಾರ್ಕ್ ನಲ್ಲಿ ಫೈಟಿಂಗ್ ತರಬೇತಿ ಪಡೆಯಲು ಹೋದಾಗ, ಅಲ್ಲಿಗೆ ಬಂದಿದ್ದ ದುನಿಯಾ ವಿಜಯ್, ಅನಿಲ್ ಅವರನ್ನು ಪರಿಚಯ ಮಾಡಿಕೊಂಡರು.

    ವಿಜಯ್ ಅವರ ಎಲ್ಲಾ ಸಿನಿಮಾಗಳಲ್ಲಿ ಅನಿಲ್ ಖದರ್

    ವಿಜಯ್ ಅವರ ಎಲ್ಲಾ ಸಿನಿಮಾಗಳಲ್ಲಿ ಅನಿಲ್ ಖದರ್

    ವಿಜಯ್ ಅವರ ಪರಿಚಯ ಆಗುವಷ್ಟರಲ್ಲಿ ಕುಂಗ್ ಫು ಹಾಗೂ ಬಾಕ್ಸಿಂಗ್ ಕಲಿತಿದ್ದ ಅನಿಲ್ ಕುಮಾರ್, ವಿಜಯ್ ಅವರಿಗೆ ಇನ್ನಷ್ಟೂ ಹತ್ತಿರವಾದರು. ಅಷ್ಟೊತ್ತಿಗಾಗಲೇ ವಿಜಿ ಅವರ 'ದುನಿಯಾ' ಸಿನಿಮಾ ಸೆಟ್ಟೇರಿತ್ತು. ಅದರಲ್ಲಿ ಅನಿಲ್ ಗೆ ಪುಟ್ಟ ಅವಕಾಶ ಸಿಕ್ಕಿತು. ಹೀಗೆ 'ದುನಿಯಾ' ಚಿತ್ರದಿಂದ ಆರಂಭವಾದ ಇವರ ಸಿನಿಪಯಣ ಇದೀಗ 25 ಚಿತ್ರಗಳ ಗಡಿ ಮುಟ್ಟಿದೆ.[ಮಾಸ್ತಿಗುಡಿ ಚಿತ್ರದ ಗ್ಯಾಲರಿ]

    ನಿರ್ಮಾಪಕ ಆದ ಅನಿಲ್

    ನಿರ್ಮಾಪಕ ಆದ ಅನಿಲ್

    ಅನಿಲ್ ಬರೀ ಖಳನಟ ಮಾತ್ರವಲ್ಲದೆ ಒಂದು ಚಿತ್ರದ ನಿರ್ಮಾಪಕ ಕೂಡ ಹೌದು. ದುನಿಯಾ ವಿಜಯ್ ಅಭಿನಯಿಸಿದ್ದ 'ಜಾಕ್ಸನ್' ಚಿತ್ರದ ನಿರ್ಮಾಪಕರಲ್ಲಿ ಅನಿಲ್ ಕೂಡ ಒಬ್ಬರು.

    ಸಂಭಾವನೆ ಪಡೆಯದೆ ವಿಜಯ್ ನಟನೆ

    ಸಂಭಾವನೆ ಪಡೆಯದೆ ವಿಜಯ್ ನಟನೆ

    'ಜಾಕ್ಸನ್' ಚಿತ್ರದಲ್ಲಿ ದುನಿಯಾ ವಿಜಯ್ ಸಂಭಾವನೆ ಪಡೆಯದೆ ನಟಿಸಿದ್ದರು. ಇದಕ್ಕೆ ಕಾರಣ ತಮ್ಮ ಸ್ನೇಹಿತರಿಗೆ ಸಹಾಯವಾಗಲಿ ಎಂದು. 'ಜಾಕ್ಸನ್' ಚಿತ್ರವನ್ನ ಸುಂದರ್ ಹಾಗೂ ಅನಿಲ್ ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಸಿನಿಮಾ ತಕ್ಕ ಮಟ್ಟಿಗೆ ಯಶಸ್ಸು ಕೂಡ ಕಂಡಿತ್ತು.

    ಪಾನಿ ಪೂರಿ ಕಿಟ್ಟಿ ಟ್ರೈನ್ ಮಾಡಿದ್ದು

    ಪಾನಿ ಪೂರಿ ಕಿಟ್ಟಿ ಟ್ರೈನ್ ಮಾಡಿದ್ದು

    ಅನಿಲ್ ಅವರ ದೇಹ ಇಷ್ಟರಮಟ್ಟಿಗೆ ಫಿಟ್ ಆಗಲು ಕಾರಣ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ. ಪಾನಿಪೂರಿ ಕಿಟ್ಟಿ ಅವರು ದುನಿಯಾ ವಿಜಯ್ ಅವರಿಗೂ ಜಿಮ್ ಟ್ರೈನರ್ ಆಗಿದ್ದರು. ''ಕಟ್ಟುಮಸ್ತಾದ ದೇಹ ಬರಲು ದಿನಾ 7 ಘಂಟೆ ವ್ಯಾಯಾಮ ಮಾಡುತ್ತಿದ್ದೆ. ಪ್ರೊಟೀನ್ ಹಾಗೂ ತರಕಾರಿ ಹೆಚ್ಚಾಗಿ ತಿನ್ನುತ್ತಿದ್ದೆ. ದಿನಕ್ಕೆ 6 ಬಾರಿ ಊಟ ಮಾಡಬೇಕಿತ್ತು. ನನ್ನ ದೇಹ ಇಷ್ಟು ಕಟ್ಟುಮಸ್ತಾಗಿ ರೂಪಿಸಿದ್ದು ಪಾನಿಪೂರಿ ಕಿಟ್ಟಿ. ದುನಿಯಾ ವಿಜಯ್ ರಂತೆ ನನಗೂ ಫಿಟ್ನೆಸ್ ಪಾಠ ಹೇಳಿಕೊಟ್ಟರು'' ಎಂದು ಅನಿಲ್ ಕುಮಾರ್ ಹೇಳಿದ್ದರು.

    ಮೇನ್ ವಿಲನ್ ಆಗಿ ಅನಿಲ್

    ಮೇನ್ ವಿಲನ್ ಆಗಿ ಅನಿಲ್

    ಸುಮಾರು 25 ಚಿತ್ರಗಳನ್ನ ಮಾಡಿದ್ದರೂ, ದೃಶ್ಯವೊಂದರಲ್ಲಿ ಅಥವಾ ಮುಖ್ಯ ಖಳನಟರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿಲ್ ಗೆ, 'ಮಾಸ್ತಿಗುಡಿ' ಅವಕಾಶ ಸಿಕ್ಕಿತ್ತು. 'ಮಾಸ್ತಿ ಗುಡಿ' ಚಿತ್ರದಲ್ಲಿ ಇಬ್ಬರು ಮೇನ್ ವಿಲನ್ ಗಳಿದ್ದು, ಉದಯ್ ಹಾಗೂ ಅನಿಲ್ ಈ ಪಾತ್ರಗಳಿಗೆ ಆಯ್ಕೆಯಾಗಿದ್ದರು. ಹೀಗಾಗಿ, ಅನಿಲ್ ಅವರು, 'ಮಾಸ್ತಿಗುಡಿ' ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮೇನ್ ವಿಲನ್ ಆಗಿ ಮಿಂಚುವ ಹುಮ್ಮಸ್ಸಲಿದ್ದರು.

    10 ತಿಂಗಳಿಂದ ತಯಾರಿ

    10 ತಿಂಗಳಿಂದ ತಯಾರಿ

    'ಮಾಸ್ತಿ ಗುಡಿ' ಸಿನಿಮಾ ದುನಿಯಾ ವಿಜಯ್ ಅವರ ಸಿನಿ ಜರ್ನಿಯಲ್ಲಿ ಒಂದು ವಿಭಿನ್ನ ಸಿನಿಮಾವಾಗಲಿದೆ ಎನ್ನುವುದು ಮೊದಲಿನಿಂದಲೂ ಹೇಳಲಾಗುತ್ತಿದೆ. ಅದೇ ರೀತಿ ಈ ಸಿನಿಮಾ ಅನಿಲ್ ಅವರ ಜೀವನದಲ್ಲೂ ಟರ್ನಿಂಗ್ ಪಾಯಿಂಟ್ ಆಗಲಿದೆ ಎನ್ನುವುದು ಎಲ್ಲರ ಗಮನದಲ್ಲಿತ್ತು. ಹೀಗಾಗಿ, ಈ ಚಿತ್ರಕ್ಕಾಗಿ ಅನಿಲ್ ಅವರು ಸುಮಾರು 10 ತಿಂಗಳುಗಳಿಂದ ತನ್ನ ಸಮಯ, ಸಾಮರ್ಥ್ಯವನ್ನೆಲ್ಲ ಪಣಕ್ಕಿಟ್ಟು ಭರ್ಜರಿ ತಯಾರಿ ಕೂಡ ಮಾಡಿಕೊಂಡಿದ್ದರು.

    'ಮಾಸ್ತಿ ಗುಡಿ'ಗೆ ಅನಿಲ್ ಅವರ ಫಸ್ಟ್ ಲುಕ್

    'ಮಾಸ್ತಿ ಗುಡಿ'ಗೆ ಅನಿಲ್ ಅವರ ಫಸ್ಟ್ ಲುಕ್

    ಮಾಸ್ತಿಗುಡಿ ಚಿತ್ರದಲ್ಲಿ ದುನಿಯಾ ವಿಜಯ್ ಅವರ ಗೆಟಪ್ ಗಳು ಹೇಗೆ ನಿರೀಕ್ಷೆ ಹೆಚ್ಚಿಸ್ದವೋ, ಅದೇ ರೀತಿ ಅನಿಲ್ ಅವರ ಫಸ್ಟ್ ಲುಕ್ ಕೂಡ ಕುತೂಹಲ ಹುಟ್ಟಿಹಾಕಿತ್ತು. ಶ್ರೀಮುರಳಿ ಅವರ 'ಉಗ್ರಂ' ಮತ್ತು 'ರಥಾವರ' ಚಿತ್ರಕ್ಕೆ ಕ್ಯಾಮರಾ ಕೈಚಳಕ ತೋರಿದ್ದ ಛಾಯಾಗ್ರಾಹಕ ಭುವನ್ ಗೌಡ ಅವರು ಅನಿಲ್ ಕುಮಾರ್ ಅವರ ಫೋಟೋ ಶೂಟ್ ಮಾಡಿದ್ದರು. ಅನಿಲ್ ಕುಮಾರ್ ಅವರ ದೇಹದಂಡನೆಯ ಪ್ರತಿಯೊಂದು ಅಂಶಗಳು ಭುವನ್ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು.

    ವಿಜಯ್ ಜೊತೆ 'ದುನಿಯಾ'ದಿಂದ 'ಮಾಸ್ತಿಗುಡಿ'

    ವಿಜಯ್ ಜೊತೆ 'ದುನಿಯಾ'ದಿಂದ 'ಮಾಸ್ತಿಗುಡಿ'

    ದುನಿಯಾ ವಿಜಯ್ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಅನಿಲ್ ಕಾಣಿಸಿಕೊಂಡಿದ್ದಾರೆ. ದುನಿಯಾ ಚಿತ್ರದಿಂದ ಹಿಡಿದು, 'ಜಂಗ್ಲಿ', 'ವೀರಬಾಹು', 'ಜಾಕ್ಸನ್', ಕೊನೆಯದಾಗಿ 'ಮಾಸ್ತಿಗುಡಿ' ಚಿತ್ರದಲ್ಲೂ ವಿಜಯ್ ಜೊತೆಯಲ್ಲಿದ್ದರು.

    ಯಶ್ ಜೊತೆ ಮೂರು ಸಿನಿಮಾಗಳು

    ಯಶ್ ಜೊತೆ ಮೂರು ಸಿನಿಮಾಗಳು

    ರಾಕಿಂಗ್ ಸ್ಟಾರ್ ಯಶ್ ಅವರ ಮೂರು ಚಿತ್ರಗಳಲ್ಲಿ ಅನಿಲ್ ಕಾಣಿಸಿಕೊಂಡಿದ್ದರು. ಚಿಕ್ಕ ಪಾತ್ರಗಳಾದರೂ, ಅದರಲ್ಲೇ ಅವರ ಖದರ್ ತೋರಿಸಿದ್ದರು. 'ಮಾಸ್ಟರ್ ಪೀಸ್', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ ಇತ್ತೀಚಿಗೆ ತೆರೆಕಂಡ 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರಗಳಲ್ಲಿ ಅನಿಲ್ ಹೀಗೆ ಬಂದು ಹಾಗೆ ಹೋಗಿದ್ದರು.

    ಸಿನಿಮಾಗಳಿಗೆ ಬರವಿರಲಿಲ್ಲ

    ಸಿನಿಮಾಗಳಿಗೆ ಬರವಿರಲಿಲ್ಲ

    ಇತ್ತೀಚಿಗೆ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರದ ಶೂಟಿಂಗ್ ಮುಗಿಸಿದ್ದ ಅನಿಲ್, ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಅದರ ಜೊತೆ ಸುದೀಪ್ ಅವರ 'ಹೆಬ್ಬುಲಿ' ಚಿತ್ರದಲ್ಲೂ ಅನಿಲ್ ಪಾತ್ರವಿತ್ತು. ಉಳಿದಂತೆ ದೊಡ್ಡ ಸ್ಟಾರ್ ಗಳ ಚಿತ್ರಗಳು ಸೇರಿದಂತೆ ಇನ್ನೂ ಹಲವು ಸಿನಿಮಾಗಳು ಅನಿಲ್ ಅವರ ಕೈಯಲ್ಲಿದ್ದವು.

    ಸ್ಯಾಂಡಲ್ ವುಡ್ ಗೆ ಖಡಕ್ ಖಳನಾಯಕನಾಗುವ ಸೂಚನೆ!

    ಸ್ಯಾಂಡಲ್ ವುಡ್ ಗೆ ಖಡಕ್ ಖಳನಾಯಕನಾಗುವ ಸೂಚನೆ!

    ಕನ್ನಡದಲ್ಲಿ ಖಳನಟರ ಕೊರತೆಯಿದೆ ಎಂಬ ಸಮಯದಲ್ಲಿ ಯುವ ಖಳನಟರು ಗುರುತಿಸಿಕೊಳ್ಳತೊಡಗಿದರು. ಖ್ಯಾತ ಖಳನಟ ರವಿಶಂಕರ್, 'ಭಜರಂಗಿ' ಲೋಕೇಶ್, ಉದಯ್ ಜೊತೆಯಲ್ಲಿ ಇದೀಗ ಅನಿಲ್ ಕೂಡ ಹೊಸ ಸೇರ್ಪಡೆಯಾಗುವ ಹಾದಿಯಲ್ಲಿದ್ದರು. ಆದ್ರೆ, ಅಷ್ಟರಲ್ಲೇ ದುರಂತ ಘಟನೆ ಸಂಭವಿಸಿತು.

    English summary
    Tragedy Strikes Kannada Movie 'Maasti Gudi'. 2 Actors (Anil and Uday) Drown in Tippagondanahalli Lake while shooting Climax scene. Here is complete details about background of Anil, Villain of 'Maasti Gudi'
    Tuesday, November 8, 2016, 14:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X