Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಯಾಮರಣದ ಬಗ್ಗೆ ಲಂಬಾಣಿ ಚಿತ್ರ 'ಆಂಸು'
'ದಯಾಮರಣ' ಈಗ ಪ್ರಪಂಚದಾದ್ಯಂತ ಬಹು ಚರ್ಚಿತವಾಗುತ್ತಿರುವ ವಿಷಯ. ಇದೇ ಅಂಶವನ್ನಿಟ್ಟುಕೊಂಡು ಈಗ ಲಂಬಾಣಿ ಭಾಷೆಯಲ್ಲಿ 'ಆಂಸು' (ಕಣ್ಣೀರು) ಎಂಬ ಚಲನಚಿತ್ರವೊಂದು ನಿರ್ಮಾಣವಾಗುತ್ತಿದೆ.
ಈ
ಹಿಂದೆ
ಓಂ
ಪ್ರಕಾಶ್
ನಾಯಕ್
ಆಗಿ
ಹಲವಾರು
ಚಿತ್ರಗಳನ್ನು
ನಿರ್ಮಿಸಿ
ನಿರ್ದೇಶಿಸಿದ್ದ
ಪ್ರಕಾಶ್
ಕುಮಾರ್
ಈ
ಚಿತ್ರದ
ಕಥೆ,
ಚಿತ್ರಕಥೆ,
ಸಂಭಾಷಣೆ
ಬರೆದು
ನಿರ್ಮಾಣ
ನಿರ್ದೇಶನದ
ಜವಾಬ್ದಾರಿಯನ್ನು
ಹೊತ್ತಿದ್ದಾರೆ.
ಕ್ಯಾನ್ಸರ್
ಖಾಯಿಲೆಗೆ
ತುತ್ತಾಗಿ
ತನ್ನ
ಅಂತಿಮ
ದಿನಗಳನ್ನು
ಎದುರು
ನೋಡುತ್ತಿರುವ
ವೃದ್ಧ
ತಂದೆಯ
ನೋವು
ವೇದನೆಯನ್ನು
ನೋಡಲಾಗದೆ
ತಳಮಳಿಸುವ
ಮಗನ
ಪಾತ್ರವನ್ನು
ಪ್ರಕಾಶ್
ಕುಮಾರ್
ನಿರ್ವಹಿಸಿದ್ದಾರೆ.
[ಓಂ
'ಢಿಶುಂ
ಢಿಶುಂ'
ತಪ್ಪು
ಮಾಡಿದ್ರೆ
ಹೊಡೀತೀನಿ]
ಹಿರಿಯ ವಿತರಕ 82 ವರ್ಷದ ಶಾಂತಾರಾಂ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಗಂಗಾವತಿ ಜಿಲ್ಲೆಯ ಚಿರ್ಚಿನಗುಡ್ಡ ತಾಂಡಾವೊಂದರಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.
ಮಹದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಟಿ.ಲಲಿತಾ ನಾಯಕ್ ಅರ್ಪಿಸುವ ಈ ಚಿತ್ರಕ್ಕೆ ತರ್ಜುನ್, ಪ್ರಕಾಶ್ ಕುಮಾರ್, ಛಾಯಾಗ್ರಹಣ, ಕ್ರೇಜಿಬಾಯ್ಸ್ ತಂಡದ ಸಂಗೀತ ಸಂಯೋಜನೆ, ಶಿವಕುಮಾರ್ ಸ್ವಾಮಿ ಸಂಕಲನವಿದೆ.
ಪ್ರಕಾಶ್ ಕುಮಾರ್, ಜ್ಯೋತಿ, ಶಾಂತರಾಂ, ಶಿವಕುಮಾರ್, ಸಂತೋಷ್ ಮೇದಪ್ಪ, ರೂಪಸಿಂಗ್ ಬಿಜಾಪುರ, ಮೋಹನ್, ಮಾ. ಅಬ್ದುಲ್ ತಾರಾಬಳಗದಲ್ಲಿದ್ದಾರೆ. ಈ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)