twitter
    For Quick Alerts
    ALLOW NOTIFICATIONS  
    For Daily Alerts

    ದಯಾಮರಣದ ಬಗ್ಗೆ ಲಂಬಾಣಿ ಚಿತ್ರ 'ಆಂಸು'

    By Rajendra
    |

    'ದಯಾಮರಣ' ಈಗ ಪ್ರಪಂಚದಾದ್ಯಂತ ಬಹು ಚರ್ಚಿತವಾಗುತ್ತಿರುವ ವಿಷಯ. ಇದೇ ಅಂಶವನ್ನಿಟ್ಟುಕೊಂಡು ಈಗ ಲಂಬಾಣಿ ಭಾಷೆಯಲ್ಲಿ 'ಆಂಸು' (ಕಣ್ಣೀರು) ಎಂಬ ಚಲನಚಿತ್ರವೊಂದು ನಿರ್ಮಾಣವಾಗುತ್ತಿದೆ.

    ಈ ಹಿಂದೆ ಓಂ ಪ್ರಕಾಶ್ ನಾಯಕ್ ಆಗಿ ಹಲವಾರು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದ ಪ್ರಕಾಶ್ ಕುಮಾರ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ತನ್ನ ಅಂತಿಮ ದಿನಗಳನ್ನು ಎದುರು ನೋಡುತ್ತಿರುವ ವೃದ್ಧ ತಂದೆಯ ನೋವು ವೇದನೆಯನ್ನು ನೋಡಲಾಗದೆ ತಳಮಳಿಸುವ ಮಗನ ಪಾತ್ರವನ್ನು ಪ್ರಕಾಶ್ ಕುಮಾರ್ ನಿರ್ವಹಿಸಿದ್ದಾರೆ. [ಓಂ 'ಢಿಶುಂ ಢಿಶುಂ' ತಪ್ಪು ಮಾಡಿದ್ರೆ ಹೊಡೀತೀನಿ]

    Lambani movie 'Aamsu' based on euthanasia

    ಹಿರಿಯ ವಿತರಕ 82 ವರ್ಷದ ಶಾಂತಾರಾಂ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಗಂಗಾವತಿ ಜಿಲ್ಲೆಯ ಚಿರ್ಚಿನಗುಡ್ಡ ತಾಂಡಾವೊಂದರಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.

    ಮಹದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಟಿ.ಲಲಿತಾ ನಾಯಕ್ ಅರ್ಪಿಸುವ ಈ ಚಿತ್ರಕ್ಕೆ ತರ್ಜುನ್, ಪ್ರಕಾಶ್ ಕುಮಾರ್, ಛಾಯಾಗ್ರಹಣ, ಕ್ರೇಜಿಬಾಯ್ಸ್ ತಂಡದ ಸಂಗೀತ ಸಂಯೋಜನೆ, ಶಿವಕುಮಾರ್ ಸ್ವಾಮಿ ಸಂಕಲನವಿದೆ.

    ಪ್ರಕಾಶ್ ಕುಮಾರ್, ಜ್ಯೋತಿ, ಶಾಂತರಾಂ, ಶಿವಕುಮಾರ್, ಸಂತೋಷ್ ಮೇದಪ್ಪ, ರೂಪಸಿಂಗ್ ಬಿಜಾಪುರ, ಮೋಹನ್, ಮಾ. ಅಬ್ದುಲ್ ತಾರಾಬಳಗದಲ್ಲಿದ್ದಾರೆ. ಈ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

    English summary
    A Lambani movie titled as 'Aamsu' (tears) based on euthanasia. The film being directed by Prakash Kumar (Om Prakash Niak). BT Lalith Naik presenting the movie.
    Wednesday, December 3, 2014, 13:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X