Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಟ್ ನಿರ್ದೇಶಕನ ಜೊತೆ ಲೂಸ್ ಮಾದ ಹೊಸ ಚಿತ್ರ
ಅಂಬಾರಿ, ಅದ್ದೂರಿಯಂತಹ ಹಿಟ್ ಚಿತ್ರಗಳನ್ನು ಕೊಟ್ಟಂತಹ ಎ.ಪಿ.ಅರ್ಜುನ್ ಈ ಬಾರಿ ತಮ್ಮ ಚಿತ್ರಕ್ಕೆ ಯೋಗೇಶ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಚಿತ್ರ ಮುಂಬರುವ ಡಿಸೆಂಬರ್ ನಲ್ಲಿ ಅವರು ಘೋಷಿಸಲಿದ್ದಾರಂತೆ. ಅಲ್ಲಿಯವರೆಗೂ ರಾಟೆ ಸಂಭಾಷಣೆ ಹೆಣೆಯಲಿ ಬಿಜಿಯಾಗಿರುತ್ತಾರೆ. ಏಕೆಂದರೆ ಈಗಾಗಲೆ ಕಥೆ, ಚಿತ್ರಕಥೆ ಸಿದ್ಧವಾಗಿದೆಯಂತೆ.
ರಾಟೆ ಹೆಸರು ಕೇಳಿದರೆ ಇದೊಂದು ಪಕ್ಕ ಮಾಸ್ ಚಿತ್ರ ಎಂದು ಮೇಲ್ಮೋಟಕ್ಕೆ ಗೊತ್ತಾಗುತ್ತದೆ. ಹಾಗಂತ ಇದು ಔಟ್ ಅಂಡ್ ಔಟ್ ಮಾಸ್ ಚಿತ್ರವಲ್ಲ. ಒಂಚೂರು ಸೆಂಟಿಮೆಂಟ್, ಲವ್ ಅಂಶಗಳೂ ಮಿಳಿತವಾಗಿರುತ್ತವೆ.
ಈಗಾಗಲೆ ಕಥೆ ಕೇಳಿರುವ ಯೋಗೇಶ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರಂತೆ. ಈ ಚಿತ್ರವನ್ನು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ನಿರ್ಮಿಸುತ್ತಿದ್ದಾರೆ. ಸಂಗೀತ ಸಹ ಅವರದೇ. ನಾಯಕಿ ಸೇರಿದಂತೆ ಚಿತ್ರದ ಉಳಿದ ತಾರಾಬಳದ ಆಯ್ಕೆ ಪ್ರಗತಿಯಲ್ಲಿದೆ.
'ಅಂಬಾರಿ' ಚಿತ್ರದ ಬಳಿಕ 'ಅದ್ದೂರಿ' ಕೈಗೆತ್ತಿಕೊಳ್ಳಲು ಅರ್ಜುನ್ ಗೆ ಮೂರು ವರ್ಷ ಬೇಕಾಯಿತು. ಈಗ ಅದ್ದೂರಿ ಕೂಡ ಶತದಿನೋತ್ಸವ ಆಚರಿಸಿಕೊಂಡು ಮುನ್ನುಗ್ಗುತ್ತಿದೆ. ಈಗ ರಾಟೆ ಮೂಲಕ ಮತ್ತೊಮ್ಮೆ ಯೋಗಿ ಜೊತೆ ಕೈಜೋಡಿಸಿರುವುದು ಚಿತ್ರೋದ್ಯಮದಲ್ಲಿ ಕುತೂಹಲ ಮೂಡಿಸಿದೆ. (ಏಜೆನ್ಸೀಸ್)