Don't Miss!
- News Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಲವ್ ಆನ್ ಎನ್ಎಚ್ 4' ನಾಯಕಿಗೆ ಕೋಟಿ ಬಹುಮಾನ
'ಬಿಗ್ ಬಾಸ್' ಟೈಟಲ್ ಗೆದ್ದ ನಂತರ ಅಕುಲ್ ಬಾಲಾಜಿ ಮುಖ್ಯಭೂಮಿಕೆಯಲ್ಲಿರುವ ಚಿತ್ರಗಳಿಗೆ ಬಹಳ ಡಿಮ್ಯಾಂಡ್ ಸೃಷ್ಟಿಯಾಗಿದೆ. ಅಕುಲ್ ಅಭಿನಯಿಸುತ್ತಿರುವ ಲವ್ ಆನ್ ಎನ್ಎಚ್ 4 ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ.
ಈ
ಚಿತ್ರ
ಹಲವಾರು
ವಿಶೇಷಗಳಿಂದ
ಕೂಡಿದ್ದು
ಸ್ಯಾಂಡಲ್
ವುಡ್
ನಲ್ಲಿ
ನಿರೀಕ್ಷಿಸುವಂತಾಗಿದೆ.
ಮಾಜಿ
ಸಚಿವ
ಎಸ್
ಎ
ರಾಮದಾಸ್
ಮೇಲೆ
ಮದುವೆಯಾಗುವುದಾಗಿ
ನಂಬಿಸಿ
ದೈಹಿಕವಾಗಿ
ಬಳಸಿಕೊಂಡು
ಕೈಕೊಟ್ಟಿದ್ದಾರೆಂಬ
ಆರೋಪ
ಮಾಡಿರುವ
ಪ್ರೇಮಾಕುಮಾರಿ
ಈ
ಚಿತ್ರದಲ್ಲಿ
ಬಣ್ಣಹಚ್ಚಿರುವುದು
ಒಂದು
ವಿಶೇಷ.
[ಸ್ಯಾಂಡಲ್
ವುಡ್
ಚಿತ್ರಕ್ಕೆ
ಪ್ರೇಮಕುಮಾರಿ
ಎಂಟ್ರಿ]
ಶ್ರೀಗುರು ಮಂತ್ರಾಲಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲಯನ್ ಶೃಂಗಾರ್ ಎಂ.ಸಂಜೀವ್ ಶೆಟ್ಟಿ ಹಾಗೂ ಲಯನ್ ಎಸ್. ವೆಂಕಟೇಶ್ ಅವರು ನಿರ್ಮಿಸುತ್ತಿರುವ ಚಿತ್ರ ಇದು. ಈ ಚಿತ್ರದ ನಾಯಕಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲುತ್ತಾಳೆ. ಈ ಸನ್ನಿವೇಶವನ್ನು ರಾಕ್ ಲೈನ್ ಸ್ಟುಡಿಯೋದಲ್ಲಿ ಚಿತ್ರಿಸಿಕೊಳ್ಳಲಾಯಿತು.
ಅಕುಲ್ ಬಾಲಾಜಿ, ತಿಲಕ್, ಮಾಧುರಿ ಹಾಗೂ ಮಾಡಲ್ಸ್ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅತಿಥಿಪಾತ್ರದಲ್ಲಿ ಶ್ರೀನಗರ ಕಿಟ್ಟಿ, ವಿ.ಮನೋಹರ್, ಚಿತ್ರಾ ಶೆಣೈ ಅಭಿನಯಿಸಿದ್ದಾರೆ. ನಿರ್ಮಾಪಕ ಲಯನ್ ಎಂ.ಸಂಜೀವ ಶೆಟ್ಟಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹತ್ತು ದಿನಗಳ ಚಿತ್ರೀಕರಣ ಬಾಕಿಯಿದೆ. ಡಿಸಂಬರ್ 24ರಿಂದ 31ರವರೆಗೂ ಹೈದರಾಬಾದ್ ನ ರಾಮೋಜಿ ಫಿಲಂಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ.
ಪತ್ರಕರ್ತ ಪಿ.ಎನ್.ಶ್ರೀನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ನಿರ್ದೇಶನವಿದೆ. ನಿರಂಜನ್ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಫೈವ್ ಸ್ಟಾರ್ ಗಣೇಶ್, ಇಮ್ರಾನ್, ಕಪಿಲ್, ಜಗ್ಗಿ ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಕುಲ್ ಬಾಲಾಜಿ, ತಿಲಕ್, ಮಾಧುರಿ, ಬುಲೆಟ್ ಪ್ರಕಾಶ್, ಮಂಡ್ಯ ರಮೇಶ್, ನಯನಕೃಷ್ಣ, ನರ್ಸ್ ಜಯಲಕ್ಷ್ಮೀ, ಮೈತ್ರೇಯ ಗೌಡ, ರ್ಯಾಪಿಡ್ ರಶ್ಮಿ, ರಾಕ್ ಸ್ಟಾರ್ ರೋಹಿತ್ ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)