Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಸ್ತಿ ಗುಡಿ' ಸಿನಿಮಾ ತಂಡಕ್ಕೆ 'ಕೇಳಬಾರದ' 20 ಪ್ರಶ್ನೆಗಳು.!
'ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗತ್ತೆ' ಎನ್ನುವುದು 'ಮಾಸ್ತಿಗುಡಿ' ಚಲನಚಿತ್ರ ತಂಡಕ್ಕೆ ಹೇಳಿ ಮಾಡಿಸಿದ ಗಾದೆ. ಇದು ಕೇವಲ ದುರಂತದ ಮಾತಷ್ಟೇ ಅಲ್ಲ. ಇಡೀ ಚಿತ್ರರಂಗಕ್ಕೆ ಈ ಪ್ರಕರಣ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. 'ಆಗಿದ್ದು ಆಗಿ ಹೋಯಿತು' ಎಂದು ಕಣ್ಣೀರು ಸುರಿಸಿ, ಕರ್ಚೀಫಿನಲ್ಲಿ ವರೆಸಿಕೊಳ್ಳುವ ದುರಂತ ಇದಲ್ಲ. ಈ ಮಧ್ಯೆ ನಮಗೆ ಹಲವಾರು ಅನುಮಾನಗಳು, ಪ್ರಶ್ನೆಗಳು, ಪ್ರಾಬ್ಲಮ್ಮುಗಳು ಎದುರಾಗುತ್ತವೆ. Questions are Twenty, Problems are Plenty ಎಂಬುದನ್ನು ಮರೆಯದಿರೋಣ. ಈ ಹಗರಣದ ಹಿನ್ನಲೆಯಲ್ಲಿ ನಮ್ಮ ವರದಿಗಾರ್ತಿ ಹರ್ಷಿತಾ ರಾಕೇಶ್ ಸುಮಾರು 20 ಅಂಶಗಳನ್ನು ಚಲನಚಿತ್ರರಂಗದ ಪಾದಾರವಿಂದಗಳಲ್ಲಿ ಅರ್ಪಿಸುತ್ತಿದ್ದಾರೆ. ಓದಿ - ಶಾಮ್, ಸಂಪಾದಕ.
1:
ತಿಪ್ಪಗೊಂಡನಹಳ್ಳಿ
ಜಲಾಶಯದ
ನಿಷೇಧಿತ
ಪ್ರದೇಶಗಳಲ್ಲಿ
ಚಿತ್ರೀಕರಿಸಬಾರದು
ಅಂತ
ಜಲಮಂಡಳಿ
ಷರತ್ತು
ವಿಧಿಸಿದ್ದರೂ,
ಉಲ್ಲಂಘಿಸಿದ್ದು
ಯಾಕೆ?
2:
ನೀರಿನಲ್ಲಿ
ಚಿತ್ರೀಕರಣ
ಮಾಡಬಾರದು
ಅಂತ
ಹೇಳಿದ್ದರೂ,
ಆ
ಕೆಲಸ
ಮಾಡಲು
ಅಂಥ
ಕಾರಣವೇನಿತ್ತು?
3:
ಭಾರತೀಯ
ಚಿತ್ರರಂಗದ
ಖ್ಯಾತ
ಸಾಹಸ
ನಿರ್ದೇಶಕ
ಅಂತ್ಹೇಳಿಕೊಳ್ಳುವ
ರವಿವರ್ಮ
ರವರಿಗೆ
'ನೀರಿನ
ಸ್ಟಂಟ್'
ಮತ್ತು
ಅದರಿಂದ
ಆಗಬಹುದಾದ
ಅಪಾಯದ
ಅರಿವಿರಲಿಲ್ಲವೇ?
4:
ಈಜು
ಬಾರದೇ
ಇರುವವರನ್ನು
100ಕ್ಕೂ
ಹೆಚ್ಚು
ಅಡಿ
ಎತ್ತರದಿಂದ
ಧುಮುಕಿಸಿದ್ದು
ಎಷ್ಟು
ಸರಿ?
5:
ಮೊದಲು
30-40
ಅಡಿ
ಅಂತ
ಕಲಾವಿದರಿಗೆ
ಹೇಳಿ,
ಸ್ಪಾಟ್
ಗೆ
ಬಂದ
ಮೇಲೆ
100
ಅಡಿ
ಎತ್ತರ
ಎಂದು
ಶಾಕ್
ಕೊಟ್ಟಿದ್ದು
ಯಾಕೆ?
6:
ಡ್ಯೂಪ್
ಬಳಕೆ
ಮಾಡಲಿಲ್ಲ.
ಕಾರಣ
ಏನು.?
7:
ಜ್ವರ
ಅಂತ
ಉದಯ್
ಹೇಳಿದ್ದರೂ,
ಪರ್ಯಾಯ
ವ್ಯವಸ್ಥೆ
ಏಕೆ
ಮಾಡಲಿಲ್ಲ?
8:
ಮೊದಲು
'ಡ್ಯೂಪ್'
ಅಂತ
ಹೇಳಿ,
ನಂತರ
'ನೀವೇ
ಮಾಡಬೇಕು'
ಅಂತ
ಅನಿಲ್
ಹಾಗೂ
ಉದಯ್
ಗೆ
ಬಲವಂತ
ಮಾಡಿದ್ದರ
ಹಿಂದಿನ
ಉದ್ದೇಶ?
9:
ಹೆಲಿಕಾಫ್ಟರ್
ನಿಂದ
ಜಿಗಿಯುವಂತೆ
ಅನಿಲ್
ಹಾಗೂ
ಉದಯ್
ಮೇಲೆ
ಒತ್ತಡ
ಹೇರಿದ್ದು
ಯಾಕೆ?
10:
ಹೆಲಿಕಾಫ್ಟರ್
ನಿಂದ
ಖಳನಟರು
ಹಾರಬೇಕಾದಾಗ
ರೋಪ್
(ಹಗ್ಗ)
ಬಳಕೆ
ಮಾಡಲಿಲ್ಲ.
ಇದು
ಸರಿಯೇ?
11:
ನೀರಿಗೆ
ಹಾರಲಿದ್ದಾರೆ
ಅಂತ
ಗೊತ್ತಿದ್ದರೂ,
ಲೈಫ್
ಜಾಕೆಟ್
ತೊಡಿಸಲಿಲ್ಲ.
ನಿಮಗೆ
ಜವಾಬ್ದಾರಿ
ಇಲ್ಲವೇ.?
12:
ಖಳನಟರಿಗೆ
ನೀವು
ಯಾವುದೇ
ರೀತಿಯ
ಟ್ರೈನಿಂಗ್
ಕೊಟ್ಟಿರಲಿಲ್ಲವೇಕೆ.?
13:
ಹೆಲಿಕಾಪ್ಟರ್
ನಿಂದ
ಹಾರುವ
ಜಾಗದ
ಕಡೆ
ಮೋಟರ್
ಬೋಟ್
ಇರಿಸದೆ
ದಡದಲ್ಲಿ
ಇರಿಸುವ
ಪ್ಲಾನ್
ಕೊಟ್ಟವರು
ಯಾರು?
14:
ಸ್ಪೀಡ್
ಬೋಟ್
ಅವಶ್ಯಕವಾಗಿತ್ತು.
ಆದರೂ
ಅದನ್ನ
ಇಟ್ಟುಕೊಂಡಿರಲಿಲ್ಲ.
ಯಾಕೆ?
15:
ಇಂತಹ
ದುಸ್ಸಾಹಸಕ್ಕೆ
ಕೈಹಾಕುವ
ಬದಲು
ಗ್ರಾಫಿಕ್ಸ್
ಮೂಲಕ
ಕೆಲಸ
ಮುಗಿಸಬಹುದಿತ್ತಲ್ಲವೇ?
16:
ಚಿತ್ರೀಕರಣ
ನಡೆಯುವಾಗ
ಯಾವುದೇ
ಸುರಕ್ಷತಾ
ಕ್ರಮಗಳನ್ನು
ಕೈಗೊಳ್ಳದೇ
ಇರುವುದು
ನಿಮ್ಮ
ಮೂರ್ಖತನ
ಎಂದು
ಭಾವಿಸಬಹುದೇ?
17:
ದುನಿಯಾ
ವಿಜಯ್
ರವರನ್ನ
ರಕ್ಷಿಸಿದ
ನೀವು,
ಖಳನಟರ
ಜೀವವನ್ನು
ನಿರ್ಲಕ್ಷ್ಯ
ಮಾಡಿದ್ದಕ್ಕೆ
ಕಾರಣ?
18:
ಉದಯೋನ್ಮುಖ
ನಟರ
ಜೀವ
ನಿಮಗೆ
ತೃಣ
ಸಮಾನವಾಯಿತೇ?
19:
ತಿಪ್ಪಗೊಂಡನಹಳ್ಳಿ
ಕೆರೆಯ
ಸ್ಥಿತಿ-ಗತಿ
ಬಗ್ಗೆ
ಅರಿವಿರಲಿಲ್ಲವೇ?
20:
ಅನಿಲ್
ಮತ್ತು
ಉದಯ್
ಸಾವಿಗೆ
ಹೊಣೆ
ಯಾರು?
'ಮಾಸ್ತಿ ಗುಡಿ' ದುರಂತಕ್ಕೆ ಸಂಬಂಧಿಸಿದ ಇತರೆ ಸುದ್ದಿಗಳು -
['ಮಾಸ್ತಿ
ಗುಡಿ'
ದುರಂತ
ಸಂಭವಿಸಲು
ಪ್ರಮುಖ
ಕಾರಣ
ಇದೇ.!]
['ಮಾಸ್ತಿ
ಗುಡಿ'
ಖಳನಟರ
ದುರಂತ
ಸಾವು:
ದುರ್ಘಟನೆಯ
ಸಂಪೂರ್ಣ
ವಿವರ]
[ಅನಿಲ್,
ಉದಯ್
ಕೊನೆಯ
ಮಾತಲ್ಲಿ
ಸಾವಿನ
ಮುನ್ಸೂಚನೆಯ
ಸುಳಿವು.!]
['ಮಾಸ್ತಿಗುಡಿ'
ಸಾಹಸ
ನಿರ್ದೇಶಕ
ರವಿವರ್ಮಗೆ
ಜಗ್ಗೇಶ್
ಛೀಮಾರಿ]
[ದುರಂತ
ಸಾವಿಗೀಡಾದ
ಅನಿಲ್
ಯಾರು.?
ನಿಜ
ಬದುಕಿನ
ಕಥೆ
ಇಲ್ಲಿದೆ...]
[ನಿಮಗೆಲ್ಲಾ
ಗೊತ್ತಿಲ್ಲದ
'ಮಾಸ್ತಿ
ಗುಡಿ'
ವಿಲನ್
ಉದಯ್
ಅಸಲಿ
ಕಹಾನಿ]
['ಮಸಣ'
ಗುಡಿ
ಸೇರುವ
ಮುನ್ನ
ಅನಿಲ್-ಉದಯ್
ಕೊನೆಯ
ಸೆಲ್ಫಿ]
['ಮಾಸ್ತಿ
ಗುಡಿ'
ದುರಂತ:
ನಿರ್ಮಾಪಕ
ಸುಂದರ್
ಗೌಡ
ಎ-1
ಆರೋಪಿ.!]