Don't Miss!
- News Heavy Rain Alert: ಮುಂದಿನ ನಾಲ್ಕು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಯ್ ವಿರುದ್ಧ ಖಳನಟ ಉದಯ್ ತಾಯಿ ಸಿಡಿಮಿಡಿ
'ಪುತ್ರ ಶೋಕಂ ನಿರಂತರಂ' ಎನ್ನುವ ಹಾಗೆ, ಬಾಳಿ ಬದುಕಬೇಕಾಗಿರುವ ಮಗ ಕಣ್ಣಮುಂದೆಯೇ ಸಾವನ್ನಪ್ಪಿದರೆ, ಹೆತ್ತ ತಾಯಿಗೆ, ಜನ್ಮ ಕೊಟ್ಟ ತಂದೆಗೆ ಆಗುವ ಆಘಾತ ಅಷ್ಟಿಷ್ಟಲ್ಲ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]
ಮಗನಿಗೆ ಮದುವೆ ಮಾಡಿ, ಮೊಮ್ಮಕ್ಕಳನ್ನ ಆಡಿಸುವ ತವಕದಲ್ಲಿದ್ದ 'ಮಾಸ್ತಿ ಗುಡಿ' ಚಿತ್ರದ ಖಳನಟ ಉದಯ್ ಪೋಷಕರು ಇಂದು ದುಃಖದ ಮಡುವಿನಲ್ಲಿದ್ದಾರೆ. ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಉದಯ್ ತಂದೆ ದುಃಖತಪ್ತ
''ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆ. ಯಾರದ್ದೋ ಸಂತೋಷಕ್ಕೆ ನಾವು ನಮ್ಮ ಮಗನನ್ನು ಕಳೆದುಕೊಂಡಿದ್ದೀವಿ'' ಎಂದು ಕಣ್ಣೀರಿಡುತ್ತಾರೆ ಉದಯ್ ತಂದೆ ವೆಂಕಟೇಶ್. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]
ದುನಿಯಾ ವಿಜಯ್ ವಿರುದ್ಧ ಉದಯ್ ತಾಯಿ ಆಕ್ರೋಶ
''ಉದಯ್ ನ 'ತಮ್ಮ' ಅಂತ ದುನಿಯಾ ವಿಜಯ್ ಕರೆಯುತ್ತಿದ್ದ. ಈಗ ತಮ್ಮನನ್ನೇ ನೀರಿಗೆ ತಳ್ಳಿ ಅವನು ಬದುಕಿ ಬಂದಿದ್ದಾನೆ'' ಅಂತ ಆಕ್ರೋಶ ವ್ಯಕ್ತಪಡಿಸುತ್ತಾರೆ ಉದಯ್ ತಾಯಿ ಕೌಸಲ್ಯ. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]
ಬಲವಂತವಾಗಿ ನೀರಿಗೆ ತಳ್ಳಿದ್ದಾರೆ
''ನನ್ನ ಮಗನಿಗೆ ಈಜು ಬರುತ್ತಿರಲಿಲ್ಲ. ತಲೆಗೆ ಪೆಟ್ಟು ಬಿದ್ದಿತ್ತು. ಆದರೂ ಬಲವಂತವಾಗಿ ನೀರಿಗೆ ತಳ್ಳಿದ್ದಾರೆ'' ಎನ್ನುತ್ತಾರೆ ಉದಯ್ ತಾಯಿ ಕೌಸಲ್ಯ. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]
ಮಾನವೀಯತೆ ಇಲ್ಲ.!
''ಮಾಸ್ತಿ ಗುಡಿ' ಚಿತ್ರತಂಡದವರಿಗೆ ಮಾನವೀಯತೆ ಇಲ್ಲ. ಯಾವಾಗಲೂ ದುನಿಯಾ ವಿಜಯ್ ಜೊತೆ ಉದಯ್ ಇರುತ್ತಿದ್ದ. ಆದರೂ ದುರ್ಘಟನೆ ನಡೆದ ಬಳಿಕ ಇಲ್ಲಿ ಬಂದು ಕುಟುಂಬಕ್ಕೆ ಸಾಂತ್ವನ ಹೇಳುವ ಮನಸ್ಸು ದುನಿಯಾ ವಿಜಯ್ ಗೆ ಇಲ್ಲ'' ಅಂತ ಉದಯ್ ಚಿಕ್ಕಪ್ಪ ಶ್ರೀನಿವಾಸ್ ಕಿಡಿಕಾರಿದ್ದಾರೆ.