Don't Miss!
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- News Samsung: ಮಾರುಕಟ್ಟೆ ಗ್ರ್ಯಾಂಡ್ ಎಂಟ್ರಿ ನೀಡಿದೆ ನ್ಯೂ ಫೋನ್
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹೇಶ್ ಬಾಬು ಫ್ಯಾಮಿಲಿಯಿಂದ ಮತ್ತೊಬ್ಬ ನಟ
'ಹೃದಯಂ ಎಕ್ಕಡುನ್ನದಿ' ಎಂಬ ಚಿತ್ರದ ಮೂಲಕ ಟಾಲಿವುಡ್ ಗೆ ಅಡಿಯಿಡುತ್ತಿದ್ದಾರೆ. ಆಂಧ್ರದ ಸಚಿವೆ ಅರುಣಾ ಕುಮಾರಿ ಅವರಿಗೂ ಈತ ಹತ್ತಿರದ ಸಂಬಂಧಿಯಂತೆ. ಈ ಹಿಂದೆ ಮಹೇಶ್ ಬಾಬು ಕುಟುಂಬದಿಂದ ಇಬ್ಬರು ಹೀರೋಗಳು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ
'ಎಸ್ಎಂಎಸ್' ಎಂಬ ಚಿತ್ರದ ಮೂಲಕ ಸುಧೀರ್ ಬಾಬು ಎಂಬ ನಟ ಪರಿಚಯವಾಗಿದ್ದ. ಇನ್ನೊಬ್ಬ ಸಂಬಂಧಿ ಶಿವ ಎಂಬುವವರು 'ಜಗನ್' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಈಗ ಹೃದಯಂ ಎಕ್ಕಡುನ್ನದಿ ಚಿತ್ರದ ಮೂಲಕ ಕೃಷ್ಣ ಮಾಧವ್ ಪರಿಚಯವಾಗುತ್ತಿದ್ದಾರೆ.
ಈಗಾಗಲೆ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಆನಂದ್ ಎಂಬುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ವಾರಸತ್ವ ಒಂದು ಕಡೆಯಾದರೆ ಬಂಧು ಬಳಗದ ಆಗಮನ ಇನ್ನೊಂದು ಕಡೆ ಆಗುತ್ತಿದೆ. ಕುಟುಂಬದ ಹೆಸರು ಹೇಳಿಕೊಂಡು ಹೀರೋ ಆಗಲು ಹೊರಟವರು ಕಡೆಗೆ ಜೀರೋ ಆಗಿದ್ದುಂಟು. ಕಾಳು ಕಾಳೇ ಜೊಳ್ಳು ಜೊಳ್ಳೇ.