Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲಯಾಳಂ ಸ್ಟಾರ್ ಮಮ್ಮುಟ್ಟಿ 'ನ್ಯೂಸ್ ಬ್ರೇಕರ್'
ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದ ಶಿಕಾರಿ, ಭಾರೀ ಪ್ರಚಾರ ಗಿಟ್ಟಿಸಿಕೊಂಡಿತ್ತು. ಆದರೆ ಚಿತ್ರ ನೋಡಿದವರು ಕಥೆ, ನಿರ್ದೇಶನ ಚೆನ್ನಾಗಿಲ್ಲ ಎಂದು ದೂರಿದ್ದರು. ಈ ಕಾರಣಕ್ಕೆ ಶಿಕಾರಿ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಬಿದ್ದುಹೋಯ್ತು. ಆದರೆ ಈ ಚಿತ್ರದ ಸೋಲಿಗೆ ಮಮ್ಮುಟ್ಟಿ ಕಾರಣವಲ್ಲ ಎಂದು ನಂಬಿರುವ ಅವರ ಅಭಿಮಾನಿ, ಸಹಾಯಕ ಎಸ್. ಜಾರ್ಜ್, ಈಗ ಮತ್ತೊಂದು ಚಿತ್ರದ ನಿರ್ಮಾಣಕ್ಕೆ ಕೈಹಾಕಿದ್ದಾರೆ.
ಜಾರ್ಜ್ ನಿರ್ಮಾಣದ 'ನ್ಯೂಸ್ ಬ್ರೇಕರ್' ಚಿತ್ರವನ್ನು ನಿರ್ದೇಶಿಸಲಿರುವವರು ದೀಪನ್. ವಿನೋದ್ ಗುರುವಾಯೂರ್ ಚಿತ್ರಕಥೆ ಬರೆಯುತ್ತಿದ್ದು ಈ ಚಿತ್ರವನ್ನು ಕನ್ನಡ ಮತ್ತು ಮಲಯಾಳಂಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಕನ್ನಡದಲ್ಲಿ ಚಿತ್ರಕಥೆ, ಸಂಭಾಷಣೆ ಬರೆಯುತ್ತಿರುವವರು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್.
ಮಮ್ಮುಟ್ಟಿ ನಾಯಕರಾಗಿರುವ ಮಲಯಾಳಂ, ಕನ್ನಡದ ನ್ಯೂಸ್ ಬ್ರೇಕರ್ ಚಿತ್ರಕ್ಕೆ ನಟಿ ನಿಕೇಶಾ ಪಟೇಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿರುವ 'ವರದನಾಯಕ' ಚಿತ್ರದಲ್ಲಿ ಚಿರಂಜೀವಿ ಸರ್ಜಾರಿಗೆ ನಾಯಕಿಯಾಗಿರುವ ನಿಕೇಶಾ, ಈ ಚಿತ್ರದ ಮೂಲಕ ಈಗ ಮಲಯಾಳಂಗೂ ಕಾಲಿಟ್ಟಂತಾಗಿದೆ.
ಒಟ್ಟಿನಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಈ ನ್ಯೂಸ್ ಬ್ರೇಕರ್ ಚಿತ್ರದ ಮೂಲಕವಾದರೂ ಕನ್ನಡಿಗರ ಮನಸ್ಸಿನಲ್ಲಿ ಮನೆಮಾಡಿಕೊಳ್ಳಬಹುದೇ ಎಂಬುದು ಸದ್ಯದ ಪ್ರಶ್ನೆ. ಶಿಕಾರಿ ಚಿತ್ರದಲ್ಲಿ ಪ್ರೇಕ್ಷಕರು ಅವರ ಅಭಿನಯ ಮೆಚ್ಚಿಕೊಂಡಿದ್ದರೂ ಅವರಿಗೆ ಗೊತ್ತಿಲ್ಲದ ಭಾಷೆ ಕನ್ನಡದಲ್ಲಿ ಅವರೇ ಸಂಭಾಷಣೆ ಹೇಳಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂದೇನೋ ಕಾದು ನೋಡಬೇಕಾಗಿದೆ...(ಒನ್ ಇಂಡಿಯಾ ಕನ್ನಡ)