Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ 'ಚಾರ್ಲಿ' ಆದ ದಿಗಂತ್: 'ನ್ಯೂಜಿಲ್ಯಾಂಡ್'ನಿಂದ ಬಂದ್ರು ನಾಯಕಿ!
ಮಲಯಾಳಂ ಸೂಪರ್ ಹಿಟ್ ಚಿತ್ರದ ಕನ್ನಡಕ್ಕೆ ರೀಮೇಕ್ ನಲ್ಲಿ ದೂದ್ ಪೇಡ ದಿಗಂತ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯನ್ನ ಕೇಳೇ ಇರ್ತಿರಾ. ಇದೀಗ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ.
ಇನ್ನೂ ದಿಗಂತ್ ಗೆ ಈ ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೂ ಬ್ರೇಕ್ ಬಿದ್ದಿದೆ. ದಿಗಂತ್ ಜೊತೆ ನಟಿಸುವುದಕ್ಕಾಗಿ 'ನ್ಯೂಜಿಲ್ಯಾಂಡ್'ನಿಂದ ಹೀರೋಯಿನ್ ಬರ್ತಿದ್ದಾರಂತೆ.
ಅಷ್ಟಕ್ಕೂ, ಆ ಚಿತ್ರ ಯಾವುದು? ಕನ್ನಡದಲ್ಲಿ ಟೈಟಲ್ ಏನು? ನಾಯಕಿ ಯಾರು ಎಂಬುದನ್ನ ಮುಂದೆ ಓದಿ.....
'ಚಾರ್ಲಿ' ರೀಮೇಕ್ ನಲ್ಲಿ ದಿಗಂತ್
2015ರ ಮಲಯಾಳಂ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾ 'ಚಾರ್ಲಿ' ಕನ್ನಡದಲ್ಲಿ ರೀಮೇಕ್ ಅಗುತ್ತಿದೆ. ದುಲ್ಕರ್ ಸಲ್ಮಾನ್ ಈ ಚಿತ್ರದ ನಾಯಕನಾಗಿದ್ದು, ಕನ್ನಡದಲ್ಲಿ ದಿಗಂತ್ ಈ ಪಾತ್ರವನ್ನ ನಿರ್ವಹಿಸಲಿದ್ದಾರೆ.
ಟೈಟಲ್ ಏನು ಗೊತ್ತಾ?
ಅಂದ್ಹಾಗೆ, 'ಚಾರ್ಲಿ'ಯ ಕನ್ನಡ ಅವತರಣಿಕೆಗೆ ಕನ್ನಡದಲ್ಲಿ 'ಉತ್ಸವ್' ಎಂದು ಟೈಟಲ್ ಇಡಲಾಗಿದೆಯಂತೆ.
ನ್ಯೂಜಿಲ್ಯಾಂಡ್ ನಾಯಕಿ
ಇನ್ನೂ ದಿಗಂತ್ ಗೆ ನಾಯಕಿಯಾಗಿ ನ್ಯೂಜಿಲ್ಯಾಂಡ್ ನ ಆಂಕ್ಲೆಂಡ್ ಹುಡುಗಿ ಲತಾ ಹೆಗಡೆ ಜೊತೆಯಾಗಲಿದ್ದಾರಂತೆ.
ಲತಾ ಹೆಗಡೆ ಯಾರು?
ಲತಾ ಹೆಗೆಡೆ 'ನ್ಯೂಜಿಲ್ಯಾಂಡ್'ನ ಮಾಡೆಲ್. ಮೂಲತಃ ಕರ್ನಾಟಕದ ಹೊನ್ನಾವರದ ಹುಡುಗಿ, 6 ವರ್ಷವಿದ್ದಾಗ 'ನ್ಯೂಜಿಲ್ಯಾಂಡ್'ನ ಆಂಕ್ಲೆಂಡ್ ಕುಟುಂಬ ಸಮೇತ ಹೋಗಿ ನೆಲೆಸಿದ್ದಾರೆ. ಈಗ ಸಿನಿಮಾಗಳಲ್ಲಿ ಅಭಿನಯಿಸುವ ಆಸಕ್ತಿಯಿಂದ ಮತ್ತೆ ಭಾರತಕ್ಕೆ ಬಂದಿದ್ದಾರೆ.
ಕನ್ನಡ-ತೆಲುಗಿನಲ್ಲಿ ನಟನೆ!
ಈಗಾಗಲೇ ತೆಲುಗಿನ 'ತುಂಟರಿ' ಎಂಬ ಚಿತ್ರದಲ್ಲಿ ಲತಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಕನ್ನಡದ ಖ್ಯಾತ ನಿರ್ದೇಶಕ ಮಹೇಶ್ ಬಾಬು ಮತ್ತು 'ಆ ದಿನಗಳು' ಖ್ಯಾತಿಯ ಚೇತನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲೂ ಲತಾ ಹೆಗಡೆ ನಾಯಕಿಯಾಗಿದ್ದಾರೆ.
'ಉತ್ಸವ್' ಸಿನಿಮಾ ಬಗ್ಗೆ!
ಹರ್ಷ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ 'ಉತ್ಸವ್' ಚಿತ್ರ ತಯಾರಾಗುತ್ತಿದ್ದು, ಈ ಚಿತ್ರಕ್ಕೆ ಜಿ ಎನ್ ರುದ್ರೇಶ್ ಅವರು ಆಕ್ಷನ್ ಕಟ್ ಹೇಳಲಿದ್ದಾರಂತೆ. ಮಂಗಳೂರು, ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಿರುವ ಚಿತ್ರತಂಡ ಆದಷ್ಟೂ ಬೇಗ ಸಿನಿಮಾ ಶುರು ಮಾಡಲಿದ್ದಾರೆ.