Don't Miss!
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹುಮುಖ ಪ್ರತಿಭೆ ಮಣಿವಣ್ಣನ್ ವಿಧಿವಶ
ಚೆನ್ನೈ, ಜೂ.16: ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ, ನಟ, ನಿರ್ಮಾಪಕ, ನಿರ್ದೇಶಕ ಆರ್ ಮಣಿವಣ್ಣನ್ (59) ಹೃದಯಾಘಾತದಿಂದಾಗಿ ಶನಿವಾರ ನಿಧನ ಹೊಂದಿದ್ದಾರೆ. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕೆಎಫ್ ಸಿಸಿ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗ ಮೃತರ ಆತ್ಮಕ್ಕೆ ಶಾಂತಿ ಕೋರಿದೆ.
ಚೆನ್ನೈನ
ರಾಮವರಂ
ನಿವಾಸದಲ್ಲಿ
ಕೊನೆಯುಸಿರೆಳೆದ
ಮಣಿವಣ್ಣನ್
ಅವರು
ತಮಿಳು,
ತೆಲುಗು
ಹಾಗೂ
ಹಿಂದಿ
ಸೇರಿದಂತೆ
ಸುಮಾರು
400ಕ್ಕೂ
ಅಧಿಕ
ಚಿತ್ರಗಳಲ್ಲಿ
ನಟಿಸಿದ್ದರು.
ಚಿತ್ರರಂಗಕ್ಕೆ
ಕಾಲಿಟ್ಟ
ರೀತಿ
ಕುತೂಹಲಕಾರಿಯಾಗಿದೆ.
ಕೊಯಮತ್ತೂರು
ಜಿಲ್ಲೆಯಲ್ಲಿ
ಕಾಲೇಜು
ವಿದ್ಯಾರ್ಥಿಯಾಗಿದ್ದ
ಮಣಿವಣ್ಣನ್
ಅವರು
ನಿರ್ದೇಶಕ
ಭಾರತಿ
ರಾಜಾ
ಅವರಿಗೆ
100
ಪುಟಗಳ
ಅಭಿಮಾನ
ಪತ್ರ
ಬರೆದು
ಕಳಿಸಿ
ತಮ್ಮ
ಪ್ರತಿಭೆ
ತೋರಿದ್ದರು.
ಖ್ಯಾತ ನಿರ್ದೇಶಕ ಭಾರತಿ ರಾಜಾ ಅವರ ಸಹಾಯಕರಾಗಿ 'ಗೋಪುರಂಗಳ್ ಶೈವತ್ತಿಲ್ಲೆ' ಎನ್ನುವ ಚಿತ್ರವನ್ನು ನಿರ್ದೇಶಿಸುವ ಮೂಲಕ 1982ರಲ್ಲಿ ಮಣಿವಣ್ಣನ್ ಚಿತ್ರರಂಗಕ್ಕೆ ಕಾಲಿರಿಸಿದರು. ಭಾರತಿರಾಜಾ ನಿರ್ದೇಶಿಸಿದ ರಜನಿಕಾಂತ್ ನಾಯಕ ನಟನಾಗಿ ಅಭಿನಯಿಸಿದ 'ಕೊಡಿ ಪರಕ್ಕುತು' ಎನ್ನುವ ಚಿತ್ರದಲ್ಲಿ ಮಣಿವಣ್ಣನ್ ಖಳನಾಯಕನ ಪಾತ್ರ ನಿರ್ವಹಿಸಿ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
'ನಾಗರಾಜ ಚೋಳನ್ ಎಂಎ, ಎಂಎಲ್ ಎ' ಮಣಿವಣ್ಣನ್ ಅವರ 50ನೆಯ ಮತ್ತು ಕೊನೆಯ ಚಿತ್ರ. ಮಣಿವಣ್ಣನ್ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮುದಲ್ ವನ್, ಸಂಗಮನ್, ಉಳ್ಳಥೈ ಅಲ್ಲಿಥಾ, ಅಮೈಧಿ ಪಡೈ, ಅವೈ ಷಣ್ಮುಖಿ ಚಿತ್ರಗಳಲ್ಲಿ ಇವರ ನಟನೆ ಮೆಚ್ಚುಗೆ ಗಳಿಸಿದರೆ, ಟಿಕ್ ಟಿಕ್ ಟಿಕ್, ಅಗಾಯಾ ಗಂಗೈ, ಕಾದಲ್ ಓವಿಯಂ ಚಿತ್ರಕ್ಕೆ ಕಥೆ ಬರೆದು ಜನಪ್ರಿಯರಾದರು, ಖ್ಯಾತ ನಟ ಸತ್ಯರಾಜ್ ಅವರ ಜೊತೆ 25 ಚಿತ್ರಗಳಲ್ಲಿ ಕೆಲಸ ಮಾಡಿದ್ದಲ್ಲದೆ ಅವರಿಗೆ ತುಂಬಾ ಆಪ್ತರಾಗಿದ್ದರು.
ಮಣಿವಣ್ಣನ್ ಗರಡಿಯಿಂದ ಬಂದ ವಿಕ್ರಮನ್, ಆರ್ ಕೆ ಸೆಲ್ವಮಣಿ, ಸುಂದರ್ ಸಿ, ಸೀಮನ್, ಕೆ ಸೆಲ್ವ ಭಾರತಿ, ರಾಧಾಭಾರತಿ ಹಾಗೂ ಇ ರಾಮದಾಸ್ ಈಗ ತಮಿಳು ಚಿತ್ರರಂಗದಲ್ಲಿ ಉತ್ತಮ ನಿರ್ದೇಶಕರಾಗಿ ಬೆಳೆದಿದ್ದಾರೆ.