Don't Miss!
- News ಅಚ್ಚೇದಿನಗಳಲ್ಲ-ದೌರ್ಭಾಗ್ಯದ ದಿನಗಳು: ಕಾಂಗ್ರೆಸ್ ಜಾಹೀರಾತು
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿನಗರಕ್ಕೆ 'ಸಿಂಹದ ಮರಿ' ರಾಣಿ ಸಿಮ್ರಾನ್ ರೀ ಎಂಟ್ರಿ
ನಟಿ ಸಿಮ್ರಾನ್ ಗೊತ್ತಲ್ವಾ...? ಒಂದ್ಕಾಲದಲ್ಲಿ ಕಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗವನ್ನ ಆಳಿದ್ದ ಈ ಚೆಲುವೆ ಇದೀಗ ಸ್ಯಾಂಡಲ್ ವುಡ್ ಕಡೆ ಮತ್ತೆ ಮುಖ ಮಾಡಿದ್ದಾರೆ. 'ಅಲೋನ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ ಸಿಮ್ರಾನ್.
ಹೌದು, ತ್ರಿಭಾಷೆಯಲ್ಲಿ ತಯಾರಾಗುತ್ತಿರುವ 'ಅಲೋನ್' ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಏಳು ದಿವಸಗಳ ಕಾಲ ಅಭಿನಯಿಸುವುದಕ್ಕೆ ಸಿಮ್ರಾನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕನ್ನಡದಲ್ಲಿ 1997 ರಲ್ಲಿ ಬಿಡುಗಡೆ ಆದ 'ಸಿಂಹದ ಮರಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಸಿಮ್ರಾನ್ ಅಭಿನಯಿಸಿದ್ದರು.
ಈಗ ಕನ್ನಡ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ ಜೆಕೆ ನಿರ್ದೇಶನದ 'ಅಲೋನ್' ಮೂಲಕ ಮತ್ತೆ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. 'ಅಲೋನ್' ಕ್ಲೈಮ್ಯಾಕ್ಸ್ ಚಿತ್ರೀಕರಣ ಏಪ್ರಿಲ್ 15 ರಿಂದ ಒಂದು ವಾರ ಕಾಲ ಚೆನ್ನೈನಲ್ಲಿರುವ ಬಿನ್ನಿಮಿಲ್ ಆವರಣದಲ್ಲಿ ನಡೆಯಲಿದೆ.
ಹಾಗ್ನೋಡಿದ್ರೆ, 'ಅಲೋನ್' ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಅಭಿನಯಿಸಬೇಕಿತ್ತು. ಸೂಪರ್ ಕಾಪ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಬೇಕಿತ್ತು. ಆದ್ರೆ, ಕಡೆ ಕ್ಷಣದಲ್ಲಿ ಬದಲಾವಣೆಯಾಗಿದೆ. ಹಿಂದಿಯ 'ಬಾರ್ಡರ್-2' ಸಿನಿಮಾದಲ್ಲಿ ಬಿಜಿಯಾಗಿರುವ ಕಾರಣ ಸುನೀಲ್ ಶೆಟ್ಟಿ ಅವರ ಜಾಗಕ್ಕೆ ಸಿಮ್ರಾನ್ ರನ್ನ ಕರೆತರಲಾಗಿದೆ. [ಖಾಕಿ ಖದರ್ ನಲ್ಲಿ ಕನ್ನಡಕ್ಕೆ ಸುನಿಲ್ ಶೆಟ್ಟಿ ಎಂಟ್ರಿ ]
ಹಾರರ್ ಕಮ್ ಥ್ರಿಲ್ಲರ್ ಚಿತ್ರವಾಗಿರುವ 'ಅಲೋನ್' ನಾಯಕಿ ನಿಕಿಶಾ ಪಟೇಲ್. ಮಂಗಳೂರಿನ ಬೀಚ್ ಬಳಿ ಇರುವ ಮನೆಯಲ್ಲಿ ಬಹುತೇಕ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ವಸಿಷ್ಠ, ಗಣೇಶ್, ಸಾಧು ಕೋಕಿಲ, ತಬಲಾ ನಾಣಿ, ದಿಲೀಪ್ ಮತ್ತು ಅವಿನಾಶ್ ಉಳಿದ ತಾರಾಗಣದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)