Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಜುಗೆ ಕನ್ನಡವೇ ಸರಿಯಾಗಿ ಬರಲ್ಲ; ಮುನಿರತ್ನ
ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೆ ಮಂಜು ಹಾಗೂ ಕಠಾರಿವೀರ ಸುರಸುಂದರಾಂಗಿ ಚಿತ್ರದ ನಿರ್ಮಾಪಕ ಮುನಿರತ್ನ ನಡುವೆ ಸಿನಿಮಾ ಬಿಡುಗಡೆ ಬಗ್ಗೆ ನಡೆಯುತ್ತಿದ್ದ ಜಟಾಪಟಿ, ಮನಸ್ತಾಪ ಕೊನೆಗೊಂಡಿದೆ. ಈ ಇಬ್ಬರೂ ಮೊದಲಿನಂತೆ ಈಗ ಆತ್ಮೀಯ ಮಿತ್ರರು. ಆದರೆ ಈ ಮೊದಲು ಕಿತ್ತಾಡುತ್ತಿದ್ದ ಸಮಯದಲ್ಲಿ ಆಡಿದ್ದ ಮಾತುಗಳು ಹಾಗೂ ನಡೆದುಕೊಂಡಿದ್ದ ರೀತಿಯ ಬಗ್ಗೆ ಈಗ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ.
ಆ ಬಗ್ಗೆ ಸಾಕಷ್ಟು ಕಾಮಿಡಿಯಾಗಿ ಮಾತನಾಡುತ್ತಿರುವವ ಪೈಕಿ ಮುಂಚೂಣಿಯಲ್ಲಿರುವವರು ಮುನಿರತ್ನ. ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ "ನನ್ನ ಸ್ನೇಹಿತ ಮಂಜುಗೆ ಇಂಗ್ಲಿಷ್ ಹೋಗ್ಲಿ.., ಕನ್ನಡವೂ ಸರಿಯಾಗಿ ಬರಲ್ಲ. ವಾಹಿನಿಯೊಂದರ ಸಂದರ್ಶನದಲ್ಲಿ ಆವೇಶದಿಂದ ಮಾತನಾಡುತ್ತಿದ್ದ ಮಂಜು, 'ನಾನ್ಯಾವತ್ತೂ ಹಿಂದಿಟ್ಟ ಹೆಜ್ಜೆ ಮುಂದಿಡಲ್ಲ' ಎಂದು ತಪ್ಪಾಗಿ ಹೇಳಿದ್ದಲ್ಲದೇ ಅದನ್ನೇ ಮತ್ತೆ ಮತ್ತೆ ವೀರಾವೇಶದಿಂದ ಹೇಳುತ್ತಿದ್ದರು.
ಪಾಪ, ಅವರಿಗೆ 'ಮುಂದಿಟ್ಟ ಹೆಜ್ಜೆ ಯಾವತ್ತೂ ಹಿಂದಿಡಲ್ಲ' ಎಂದು ಹೇಳೋ ಬಯಕೆ ಇತ್ತಾದರೂ ಅದಕ್ಕೆ ತದ್ವಿರುದ್ಧವಾಗಿ ಮಾತನಾಡಿ ನಗೆಪಾಟಲಿಗೆ ಗುರಿಯಾದರು" ಎಂದಿದ್ದಾರೆ. ಈಗ ಪದೇ ಪದೇ ಮಂಜು ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಿರುವ ಮುನಿರತ್ನ, ಮಂಜುರನ್ನು ಆ ಪರಿ ಗೋಳಾಡಿಸಿದ್ದು ಯಾಕೆ ಎಂಬುದು ಗಾಂಧಿನಗರಿಗರ ಪ್ರಶ್ನೆ. ಮಂಜು ಮಾತನಾಡುವ ಕನ್ನಡ ತಪ್ಪು ಎಂಬುವುದಕ್ಕಿಂತ ಸ್ನೇಹಿತರಾಗಿದ್ದ ಇವರಿಬ್ಬರ ಕಿತ್ತಾಟವೇ ದೊಡ್ಡ ಕಾಮಿಡಿ ಎನ್ನುತ್ತಿದೆ ಗಾಂಧಿನಗರ. (ಒನ್ ಇಂಡಿಯಾ ಕನ್ನಡ)