For Quick Alerts
For Daily Alerts
Don't Miss!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- News Raichur: ರಾಯಚೂರಿನಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ: ಬಿವಿ ನಾಯಕ್, ತಿಪ್ಪರಾಜು ಜೊತೆ ಬಿಜೆಪಿ ಸಂಧಾನ ವಿಫಲ!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಳಹಸ್ತಿಯಲ್ಲಿ ನಾಗಚೈತನ್ಯ, ಅನುಷ್ಕಾ ನಾಗಪೂಜೆ
News
oi-Rajendra
By ಅನಂತರಾಮು
|
ಈ ಹಿಂದೆಮ್ಮೊ ಇವರಿಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿ ಭಾರಿ ಗದ್ದಲಕ್ಕೆ ಕಾರಣವಾಗಿತ್ತು. ಆದರಿದು ಕೇವಲ ವದಂತಿ ಅಷ್ಟೇ ಎಂಬುದು ಬಳಿಕ ಗೊತ್ತಾಗಿ ಎಲ್ಲವೂ ತಣ್ಣಗಾಗಿತ್ತು.
ಈಗ ಮತ್ತೊಮ್ಮೆ ಇಬ್ಬರೂ ಶ್ರೀಕಾಳಹಸ್ತಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರೂ ಕಾಳಹಸ್ತಿಗೆ ಭೇಟಿ ನೀಡಿ ಪ್ರತ್ಯೇಕವಾಗಿ ಪೂಜೆ ಮಾಡಿಸಿಕೊಂಡಿದ್ದಾರೆ. ಆದರೆ ಇಬ್ಬರೂ ಒಂದೇ ದಿನ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಕೇವಲ ಕಾಕತಾಳೀಯವಷ್ಟೇ ಎನ್ನಲಾಗಿದೆ.
ಇಬ್ಬರೂ ಆಲಯದ ಸಹಸ್ರನಾಮ ಲಿಂಗದ ಬಳಿ ರಾಹುಕೇತು ಪೂಜೆಗಳನ್ನು ಮಾಡಿಸಿದ್ದಾರೆ. ತ್ರಿನೇತ್ರ ಅತಿಥಿ ಗೃಹದಿಂದ ಅನುಷ್ಕಾ ಶೆಟ್ಟಿ ಬಿಗಿ ಭದ್ರತೆಯಲ್ಲಿ ಆಲಯಕ್ಕೆ ಆಗಮಿಸಿ ಮುಕ್ಕಣ್ಣನ ದರ್ಶನ ಭಾಗ್ಯ ಪಡೆದರು. ಈ ಸಂದರ್ಭದಲ್ಲಿ ಆಕೆಯೊಂದಿಗಿದ್ದ ಭದ್ರತಾ ಸಿಬ್ಬಂದಿ ಮಾಧ್ಯಮಗಳ ಜೊತೆ ಅನುಚಿತವಾಗಿ ವರ್ತಿಸಿದರು.
ದೇವಸ್ಥಾನಕ್ಕೆ ಬಂದರೂ ಈ ಮಾಧ್ಯಮದವರಿಂದ ನೆಮ್ಮದಿ ಸಿಗದಂತಾಗಿದೆ ಎಂದು ಅನುಷ್ಕಾ ಕೋಪಿಸಿಕೊಂಡ ಘಟನೆಯೂ ನಡೆಯಿತು. ಏತನ್ಮಧ್ಯೆ ಅನುಷ್ಕಾ ಅಭಿಮಾನಿಗಳು ಆಕೆಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಸಂಭವಿಸಿತು. ಎಚ್ಚೆತ್ತುಕೊಂಡ ಆಲಯ ಸಿಬ್ಬಂದಿ ಪರಿಸ್ಥಿತಿಯನ್ನು ತಹಬಂದಿಗೆ ತರಲು ಹರಸಾಹಸ ಪಡಬೇಕಾಯಿತು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
As per the reports, actress Anushka Shetty and Naga Chaityana visited the Sri Kalahasti Temple yesterday to perform the Rahu Ketu Sarpa Dosha Puja to ward off all the ill-effects mostly coming in her life due to due to Naga Dosham. After the worship, she was given Teertha and Prasada.
Story first published: Thursday, January 31, 2013, 16:52 [IST]
Other articles published on Jan 31, 2013