Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸಂಜು ವೆಡ್ಸ್ ಗೀತಾ' ಭಾಗ 2ಕ್ಕೆ ನಾಗಶೇಖರ್ ರೆಡಿ
ಯಶಸ್ವಿ ನಿರ್ದೇಶಕ ನಾಗಶೇಖರ್ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ರೆಡಿಯಾಗುತ್ತಿದ್ದಾರೆ. ಸುಮಧುರ ಹಾಡುಗಳಿಂದ, ಸುಂದರ ಪ್ರೇಮಕಥಾನಕದಿಂದ ಕೂಡಿದ್ದ 'ಸಂಜು ವೆಡ್ಸ್ ಗೀತಾ' ಭಾಗ 2ಕ್ಕೆ ಸಿದ್ಧವಾಗಿದ್ದಾರೆ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಮೋಘ ಅಭಿನಯ ಪ್ರೇಕ್ಷಕರ ಹೃದಯ ಗೆದ್ದಿತ್ತು.
ಆದರೆ ಆ ಚಿತ್ರದಲ್ಲಿ ಪ್ರೇಮಿಗಳಿಬ್ಬರೂ ದುರಂತ ಸಾವಪ್ಪುತ್ತಾರೆ. ಇನ್ನು ಭಾಗ ಎರಡರಲ್ಲಿ ನಾಗಶೇಖರ್ ಅವರು ಕಥೆಯನ್ನು ಎಲ್ಲಿಂದ ಆರಂಭಿಸುತ್ತಾರೆ ಹೇಗೆ ಕನೆಕ್ಟ್ ಮಾಡುತ್ತಾರೆ ಎಂಬ ಕುತೂಹಲ ಇದ್ದೇ ಇದೆ. [ಚಿತ್ರವಿಮರ್ಶೆ ಸಂಜು ವೆಡ್ಸ್ ಗೀತಾ]
ಸಂಜು ವೆಡ್ಸ್ ಗೀತಾ ಚಿತ್ರ "ಪ್ರೇಮಿಗಳಿಗೆ ಸಾವಿಲ್ಲ, ಪ್ರೇಮಕ್ಕೆ ಅಳಿವಿಲ್ಲ" ಎಂಬ ಅಮರ ಸಂದೇಶ ಸಾರುವಲ್ಲಿ ಯಶಸ್ವಿಯಾಗುತ್ತದೆ. ಪಾತ್ರಗಳಲ್ಲಿನ ಲವಲವಿಕೆ, ಯುವ ಪ್ರೇಮಿಗಳಾಗಿ ರಮ್ಯಾ, ಕಿಟ್ಟಿ ಪ್ರೌಢ ಅಭಿನಯ, ಗ್ರಾಫಿಕ್ಸ್ಗೆ ಹೆಚ್ಚಾಗಿ ಅಂಟಿಕೊಳ್ಳದ ನಿರ್ದೇಶಕರು ಸಹಜತೆಗೆ ಒತ್ತು ನೀಡಿದ್ದರು. ಕತೆಯಲ್ಲಿನ ಗಟ್ಟಿತನ ಚಿತ್ರಕ್ಕೆ ಹೊಸ ಆಯಾಮವನ್ನು ನೀಡಿತ್ತು. (ಏಜೆನ್ಸೀಸ್)