Don't Miss!
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- News ಬಿಜೆಪಿ ಭದ್ರಕೋಟೆಯಲ್ಲಿ ಶೋಭಾ ಕರಂದ್ಲಾಜೆಗೆ ಕಠಿಣ ಸವಾಲು!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!
''ಕನ್ನಡದ ಹುಡುಗ ಸಂಚಾರಿ ವಿಜಯ್ ಗೆ ಉತ್ತಮ ನಟ ರಾಷ್ಟ್ರ ಪ್ರಶಸ್ತಿ'' ಅಂತ ಘೋಷಣೆ ಆದಾಗ, 'ಸಂಚಾರಿ ವಿಜಯ್ ಯಾರು?' ಅಂತ ಕೇಳಿದವರೇ ಹೆಚ್ಚು. ಕಮರ್ಶಿಯಲ್ ಸಿನಿಮಾಗಳಲ್ಲಿ ಗುರುತಿಸಿಕೊಳ್ಳದ ಸಂಚಾರಿ ವಿಜಯ್, ಸಿನಿ ಪ್ರಿಯರಿಗೂ ಅಷ್ಟು ಪರಿಚಯ ಇರ್ಲಿಲ್ಲ.
ಆದ್ರೀಗ, ಇಡೀ ಭಾರತದಾದ್ಯಂತ ಸಂಚಾರಿ ವಿಜಯ್ ಖ್ಯಾತಿ ಗಳಿಸಿದ್ದಾರೆ. ಬರೀ ಸ್ಯಾಂಡಲ್ ವುಡ್ ನಿಂದ ಮಾತ್ರ ಅಲ್ಲ, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಿಂದಲೂ ಸಂಚಾರಿ ವಿಜಯ್ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕ್ಯೂ ನಿಂತಿದ್ದಾರೆ.
ಒಂದ್ಕಾಲದಲ್ಲಿ 'ಸರ್ ಚಾನ್ಸ್ ಕೊಡಿ' ಅಂತ ಸಂಚಾರಿ ವಿಜಯ್ ಫೋನ್ ಮಾಡಿದಾಗ ಮೂಗು ಮುರಿಯುತ್ತಿದ್ದ ಗಾಂಧಿನಗರದವರು ಈಗ ಅದೇ ವಿಜಯ್ ಗೆ ಮಣೆ ಹಾಕುತ್ತಿದ್ದಾರೆ. 'ರಾಷ್ಟ್ರ ಪ್ರಶಸ್ತಿ'ಯ ಗರಿ ಸಿಕ್ಕಿದ ಮೇಲೆ ಅಭಿನಂದಿಸುವುದಕ್ಕೆ ಫೋನ್ ಕರೆಗಳು ಹೆಚ್ಚಾದಂತೆ, ಆಫರ್ ಗಳೂ ಹೆಚ್ಚಾಗುತ್ತಿವೆ. [ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಕನ್ನಡಿಗ ಸಂಚಾರಿ ವಿಜಯ್ ಅತ್ಯುತ್ತಮ]
'ನಾನವನಲ್ಲ ಅವಳು' ಸಿನಿಮಾದಲ್ಲಿ ಸಂಚಾರಿ ವಿಜಯ್ ನಿರ್ವಹಿಸಿರುವ ಚಾಲೆಂಜಿಂಗ್ ಪಾತ್ರವನ್ನ ನೋಡಿರುವ ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಿರ್ಮಾಪಕರು ರತ್ನಗಂಬಳಿ ಹಾಸಿದ್ದಾರೆ. ಎಲ್ಲಾ ಕಡೆಯಿಂದಲೂ ಅವಕಾಶಗಳು ಹರಿದು ಬರುತ್ತಿರುವ ಕಾರಣ, ಪಾತ್ರವನ್ನ ಅಳೆದು ತೂಗಿ ಒಪ್ಪಿಕೊಳ್ಳುವುದಕ್ಕೆ ಸಂಚಾರಿ ವಿಜಯ್ ನಿರ್ಧಾರ ಮಾಡಿದ್ದಾರೆ. [ಸಂಚಾರಿ ವಿಜಯ್ ಕಣ್ಣೀರಕಥೆಗೆ ಕಡೆಗೂ ಸಂದ ಜಯ]
ಹಾಗೇನಾದರೂ ಒಪ್ಪಿಕೊಂಡರೆ, ಪರಭಾಷೆಯಲ್ಲೂ ಸಂಚಾರಿ ವಿಜಯ್ ಮಿಂಚುವುದು ಖಚಿತ. ಕೆಲವೇ ದಿನಗಳ ಹಿಂದೆ ಕೇಳೋರು ಇಲ್ಲದ ಸಂಚಾರಿ ವಿಜಯ್ ಈಗ ಎಲ್ಲಾ ನಿರ್ಮಾಪಕರಿಗೂ ಸಿಹಿ ದ್ರಾಕ್ಷಿ. ಅದೃಷ್ಟ ಕೈಹಿಡಿದರೆ ಹೀಗೆ..! (ಏಜೆನ್ಸೀಸ್)