Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಟಂ ಡಾನ್ಸ್ ಆಫರ್ ನಿರಾಕರಿಸಿದ ನಯನತಾರಾ
ಅಜಿತ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಐಟಂ ಹಾಡಿನಲ್ಲಿ ಅಭಿನಯಿಸುವಂತೆ ನಯನತಾರಾಗೆ ಭರ್ಜರಿ ಆಫರ್ ನೀಡಿದ್ದರು ನಿರ್ಮಾಪಕರು. ಆದರೆ ಆ ಆಫರನ್ನು ಒಲ್ಲೆ ಎಂದಿದ್ದಾರೆ ನಯನತಾರಾ. ಚಿತ್ರರಂಗಕ್ಕೆ ವಿದಾಯ ಹೇಳುತ್ತೇನೆ ಎಂದಿದ್ದ ನಯನತಾರಾ ಇದೇ ವರ್ಷ ಜನವರಿಯಲ್ಲಿ ಹಿಂತಿರುಗಿದ್ದರು.
ಅವರು ಹಿಂತಿರುಗಿದ ಬಳಿಕ ಅಳೆದು ತೂಗಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಲ್ಪ ಗ್ಯಾಪ್ನ ಬಳಿಕ ಚಿತ್ರರಂಗಕ್ಕೆ ಬಂದರೂ ನಯನತಾರಾ ಬೇಡಿಕೆ ನಯಾಪೈಸೆಯಷ್ಟು ಕಡಿಮೆಯಾಗಿಲ್ಲ. ತಮಿಳು, ತೆಲುಗಿನಲ್ಲಿ ಚಿತ್ರವೊಂದಕ್ಕೆ ರು.1.25 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.
ಸಂಭಾವನೆ ಇಷ್ಟೆಲ್ಲಾ ಜಾಸ್ತಿ ಆದರೂ ನಯನತಾರಾ ಮನೆಮುಂದೆ ಕಾಲ್ಶೀಟ್ ಹಿಡಿದು ಬರುವ ನಿರ್ಮಾಪಕರಿಗೇನು ಬರವಿಲ್ಲವಂತೆ. ಬೇರೆ ತಾರೆಗಳಿಗೆ ಹೋಲಿಸಿದರೆ ನಯನತಾರಾ ಚಿತ್ರಗಳು ಬಾಕ್ಸಾಫೀಸಲ್ಲಿ ಮಿನಿಮಮ್ ಗ್ಯಾರಂಟಿ ಎಂಬುದೇ ಇದಕ್ಕೆ ಕಾರಣ ಎನ್ನುತ್ತವೆ ಮೂಲಗಳು.
ಸದ್ಯಕ್ಕೆ ತಮಿಳಿನಲ್ಲಿ ಎರಡು, ತೆಲುಗಿನ ರಾಣಾ ದಗ್ಗುಬಾಟಿ ಜೊತೆ ಎರಡು, ನಾಗಾರ್ಜುನ ಹಾಗೂ ಗೋಪಿಚಂದ್ ಜೊತೆ ತಲಾ ಒಂದೊಂದು ಚಿತ್ರಗಳಿಗೆ ಸಹಿಹಾಕಿದ್ದಾರೆ. ಸಂಭಾವನೆಯಲ್ಲಿ ನಾಲ್ಕಾಣೆ ಕಡಿಮೆಯಾದರೂ ಬಿಲ್ಕುಲ್ ಒಪ್ಪುತ್ತಿಲ್ಲ.
ಇತ್ತೀಚೆಗೆ ನಯನತಾರಾ ಸಂಭಾವನೆ ವಿಚಾರವಾಗಿ ಕನ್ನಡ ಚಿತ್ರಕ್ಕೂ ಕೈ ಎತ್ತಿದ್ದರು. ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿದ್ದ ಶಶಾಂಕ್ ನಿರ್ದೇಶಿಸಲಿರುವ 'ಬಚ್ಚನ್' ಚಿತ್ರಕ್ಕೆ ನಯನತಾರಾ ಇನ್ನೇನು ಬಂದೇ ಬಿಟ್ಟರು ಎನ್ನಲಾಗಿತ್ತು. ಅಷ್ಟರಲ್ಲಿ ಏನಾಯಿತೋ ಏನೋ ನಯನತಾರಾ ಹೇಳದೆ ಕೇಳದೆ ಗಾಯಬ್ ಆದರು.
ನಯನತಾರಾ ಗಾಯಬ್ ಆಗಲು ತಮಿಳಿನಲ್ಲಿ ಸಿಕ್ಕ ಭರ್ಜರಿ ಆಫರ್ಗಳೇ ಕಾರಣ ಎನ್ನಲಾಗಿದೆ. ಅಲ್ಲಿನ ಸಂಭಾವನೆಗೆ ಇಲ್ಲಿನ ನಿರ್ಮಾಪಕರು ತೂಗುವುದಿಲ್ಲ ಎಂಬ ಮಾತುಗಳೂ ಚಾಲ್ತಿಯಲ್ಲಿವೆ. (ಏಜೆನ್ಸೀಸ್)