Don't Miss!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- News Raichur: ರಾಯಚೂರಿನಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ: ಬಿವಿ ನಾಯಕ್, ತಿಪ್ಪರಾಜು ಜೊತೆ ಬಿಜೆಪಿ ಸಂಧಾನ ವಿಫಲ!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಣ್ಣಿಮೆ ಚಂದ್ರನಾಗಿ ನಿಖಿತಾ ತುಕ್ರಲ್ ರೀ ಎಂಟ್ರಿ
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸಿದ್ದ ನಿಖಿತಾ ತುಕ್ರಲ್ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಅವರದು ಹುಣ್ಣಿಮೆ ಚಂದ್ರನಂತೆ ಕಂಗೊಳಿಸಲಿದ್ದಾರೆ. ಚಿತ್ರದ ಹೆಸರು 'ಪೌರ್ಣಮಿ'. ಇದೇ ಮೊದಲ ಬಾರಿಗೆ ಒಲವೇ ಮಂದಾರ ಖ್ಯಾತಿಯ ಶ್ರೀಕಿಗೆ ಜೋಡಿಯಾಗುತ್ತಿದ್ದಾರೆ.
'ಪೌರ್ಣಮಿ' ಅಂತಹ ಅಪ್ಪಟ ಕನ್ನಡ ಶೀರ್ಷಿಕೆ ಹಾಗೂ ಪೌರ್ಣಮಿಯ ಪೂರ್ಣ ಚಂದ್ರನ ಬೆಳಕಿನಂತೆ ಒಂದು ಸುಂದರ ಚಿತ್ರವನ್ನು ಕಟ್ಟಿಕೊಡಲು ಫಿಲ್ಮ್ ಫ್ಯಾಕ್ಟರಿ ಕಂಬೈನ್ಸ್ ತಯಾರಿ ಶುರುವಿಟ್ಟುಕೊಂಡಿದೆ.
ಈ ಚಿತ್ರಕ್ಕಾಗಿ ಈಗಾಗಲೇ ಸೋನು ನಿಗಂ, ಸುನಿಧಿ ಚೌಹಾಣ್, ಸಿಂಚನ ದೀಕ್ಷಿತ್ ಅವರ ಕಂಠ ಸಿರಿಯಲ್ಲಿ ಹಾಡುಗಳ ಧ್ವನಿ ಮುದ್ರಣವನ್ನು ಸಂಗೀತ ನಿರ್ದೇಶಕ ಅರುಣ್ ಅವರು ಸಂಪೂರ್ಣಗೊಳಿಸಿದ್ದಾರೆ. ಇವರು ಈ ಹಿಂದೆ 'ಕೇಡಿಗಳು' ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದವರು.
ಈ ಚಿತ್ರಕ್ಕೆ ಗೌರಿ ವೆಂಕಟೇಶ್ ಹಾಗೂ ವಿಕ್ರಮ್ ಯೋಗಾನಂದ್ ಛಾಯಾಗ್ರಾಹಕರು. ಕಿರಣ್ ವಿಪ್ರ ಹಾಗೂ ರಾಮಕೃಷ್ಣ ರಣಗಟ್ಟಿ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೊಸಮನೆ ಮೂರ್ತಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.
ಶ್ರೀಕಿ ಹಾಗೂ ನಿಖಿತಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಪೋಷಕ ಪಾತ್ರಗಳಲ್ಲಿ ಪವಿತ್ರಾ ಗೌಡ, ಅರುಣ್ ಸಾಗರ್, ಧರ್ಮ, ಸುಂದರಶ್ರೀ, ಬೋಳಾರ್ ಹಾಗೂ ಇನ್ನಿತರಿದ್ದಾರೆ. (ಒನ್ಇಂಡಿಯಾ ಕನ್ನಡ)