Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದು ನಾನು ಆಡಿದ ನಾಟಕವಂತೂ ಅಲ್ಲ ಎಂದ ಶ್ರುತಿ
ಒಂದೇ ಒಂದು ಸಮಾಧಾನದ ವಿಚಾರ ಅಂದರೆ, ನನ್ನಿಂದ ಇನ್ನೊಬ್ಬರಿಗೆ ಅನ್ಯಾಯವಾಗುವುದು ತಪ್ಪಿ ಹೋಗಿದೆ. ಜನ ನೂರೆಂಟು ಮಾತನಾಡಬಹುದು. ಶ್ರುತಿ ಅವರು ಮದುವೆಯನ್ನು ಅಸಿಂಧುಗೊಳಿಸಿ ಎಂದು ಕೇಳಿರುವುದು ಇನ್ನೊಂದು ನಾಟಕ. ಬಹುಶಃ ಅವರಿಗೇನಾದರೂ ತೊಂದರೆಯಾಗುತ್ತದೇನೋ ಎಂಬ ಕಾರಣ ಅವರು ಈ ರೀತಿ ಮಾಡಿದರು ಎಂದು ಟಿವಿಯಲ್ಲಿ ಮಾತನಾಡಿದ್ದನ್ನು ನೋಡಿದ್ದೇನೆ.
ಏನಾಯಿತು ಎಂಬುದು ದೇವರಿಗೆ ಗೊತ್ತು. ಚಂದ್ರಚೂಡ್ ಅವರಿಗೂ ಗೊತ್ತಿದೆ. ಮಾಧ್ಯಮಗಳ ಜೊತೆ ಅವರು ಹಲವಾರು ಬಾರಿ ಮಾತನಾಡಿದ್ದಾರೆ. ತಪ್ಪು ಮಾಡಿದ್ದು ಯಾರೋ ಶಿಕ್ಷೆ ಅನುಭವಿಸಿದ್ದು ಯಾರೋ. ಪರ್ವಾಗಿಲ್ಲ ಈ ಒಂದು ಸಣ್ಣ ಸಮಾಧಾನವನ್ನಾದರೂ ದೇವರು ಕೊಟ್ಟರಲ್ಲಾ.
ಈ ವಿಚಾರದಲ್ಲಿ ನಾನು ಶೋಷಿತಳು. ತುಂಬಾ ನೊಂದಿದ್ದೇನೆ. ಇದಕ್ಕಿಂತಲೂ ಹೆಚ್ಚಿನ ಪದಗಳನ್ನು ಬಳಸುವ ಜಾಣ್ಮೆಯಾಗಲಿ, ಶಕ್ತಿಯಾಗಲಿ ನನಗಿಲ್ಲ. ಈ ಮದುವೆಯಿಂದ ನನಗೆ ಯಾವ ಸಂತೋಷವೂ ಸಿಗಲಿಲ್ಲ, ನೆಮ್ಮದಿಯೂ ಸಿಗಲಿಲ್ಲ. ಇರೋ ನೆಮ್ಮದಿ, ಸಂತೋಷ ಹಾಳಾಯಿತು.
ಏನೂ ತೊಂದರೆ ಇಲ್ಲ ದೇವರು ಕೊಟ್ಟಂತಹ ಮಗಳಿದ್ದಾಳೆ, ಕೈಯಲ್ಲಿ ವೃತ್ತಿ ಇದೆ. ನನ್ನ ಜೊತೆಗೆ ಅಭಿಮಾನಿಗಳಿದ್ದಾರೆ. ಮಂಜುಳಾ ಮತ್ತು ಚಂದ್ರಚೂಡ್ ಸಂಬಂಧ ಸರಿಹೋಗಲಿ ಎಂದು ಆಶಿಸುತ್ತೇನೆ. ಇನ್ನು ಅದು ಅವರಿಬ್ಬರ ವೈಯಕ್ತಿಕ ವಿಚಾರ. ಅವರ ಮೇಲೆ ಇವರಿಗೆ ಪ್ರೀತಿ, ಇವರ ಮೇಲೆ ಅವರಿಗೆ ಇದ್ದರೆ ಖಂಡಿತ ಸೇರುತ್ತಾರೆ.
ಯಾವುದೇ ಒಂದು ಸಂಬಂಧಗಳು , ಕುಟುಂಬಗಳು ಒಡೆದು ಹೋಗಬಾರದು. ಒಂದುಗೂಡಿಸುವುದಿದ್ದಲೆ ನಾನೆ ಮುಂದೆ ಬರುತ್ತೇನೆ. ಅವರಿಬ್ಬರೂ ಚೆನ್ನಾಗಿರಲಿ. ಅವರ ಸಂಬಂಧವನ್ನು ಚೆನ್ನಾಗಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದು ಅವರಿಗೇ ಬಿಟ್ಟದ್ದು.
ಸಂತೋಷವಾಗಿ ಬದುಕುವ ಹಾಗಿದ್ದರೆ ಮಂಜುಳಾ ಒಂದು ಚಾನ್ಸ್ ತಗೊಳ್ಳಲಿ ಲೈಫಲ್ಲಿ. ನಾವೆಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದೇವೆ. ನೋವು ಏನು ಎಂಬುದನ್ನು ಅನುಭವಿಸಿದ್ದೇವೆ. ಆ ನೋವು ಇನ್ನೊಬ್ಬ ಹೆಣ್ಣಿಗೆ ಆಗಬಾರದು.