Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ 'ಬುಲ್ ಬುಲ್' ಜೊತೆ ರಾವತ್ ರಗಳೆ
ಆದರೆ ಈತನ ಕ್ಯಾತೆಗೆ ಬೇಸತ್ತ ನಿರ್ದೇಶಕರು ರಾವತ್ ನನ್ನು ಚಿತ್ರತಂಡದಿಂದ ಕೈಬಿಟ್ಟಿದ್ದಾರೆ. 'ಬುಲ್ ಬುಲ್' ಚಿತ್ರದಲ್ಲಿ ರಾವತ್ ಪ್ರಮುಖ ಪಾತ್ರ ನಿರ್ವಹಿಸಬೇಕಾಗಿತ್ತು. ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ರಾವತ್ ನನ್ನು ಕರೆತರಲು ಚಿತ್ರತಂಡ ಕಾರು ಕಳುಹಿಸಿದೆ.
ತಮಗೆ ಕಳುಹಿಸಿರುವ ಕಾರಿನಲ್ಲಿ ಎಸಿ ಇಲ್ಲ. ಸಾಲದಕ್ಕೆ ಅದು ದೊಡ್ಡ ಕಾರು ಅಲ್ಲ...ಹಾಗೆ ಹೀಗೆ ಎಂದು ಕ್ಯಾತೆ ತೆಗೆದ ರಾವತ್ ಚಿತ್ರತಂಡದೊಂದಿಗೆ ಇಲ್ಲದ ಗಲಾಟೆ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ರಾವತ್ ಚಿತ್ರತಂಡದ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದಾರೆ.
'ಬುಲ್ ಬುಲ್' ಚಿತ್ರತಂಡ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳದೆ ಅವಮಾನಿಸಿತು ಎಂದು ಅವರು ದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚಿತ್ರತಂಡವೂ ರಾವತ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಕಡೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿದಿದೆ.
ಬಳಿಕ ಚಿತ್ರತಂಡದ ಕ್ಷಮೆ ಕೋರಿದ ರಾವತ್ ಚಿತ್ರದಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಅವರ ಜೊತೆ ಕೆಲಸ ಮಾಡುವುದು ಅಷ್ಟು ಸೂಕ್ತವಲ್ಲ ಎಂದು ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ರಾವತ್ ಅವರನ್ನು ಚಿತ್ರದಿಂದ ಕೈಬಿಟ್ಟಿದ್ದಾರೆ.
ರಾವತ್ ಕನ್ನಡದ 'ಗಜ' ಹಾಗೂ ಸುದೀಪ್ ಅವರ 'ಬಚ್ಚನ್' ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಆದರೆ ಅವರು ಈ ಹಿಂದೆಂದೂ ಈ ರೀತಿ ನಡೆದುಕೊಂಡಿರಲಿಲ್ಲವಂತೆ. ಆದರೆ ನಮ್ಮೊಂದಿಗೆ ಮಾತ್ರ ಸಣ್ಣಪುಟ್ಟದಕ್ಕೂ ಕ್ಯಾತೆ ತೆಗೆದಿದ್ದಾರೆ. ಎಂಟು ದಿನಗಳ ಕಾಲ್ ಶೀಟ್ ತೆಗೆದುಕೊಂಡು ಅಡ್ವಾನ್ಸ್ ಕೂಡ ನೀಡಲಾಗಿತ್ತು. ಈಗ ಮುಂಗಡ ಹಣವನ್ನು ವಾಪಸ್ ಪಡೆದು ರಾವತ್ ನನ್ನು ಮನೆಗೆ ಕಳುಹಿಸಿದ್ದಾರೆ. (ಏಜೆನ್ಸೀಸ್)