Don't Miss!
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಭೆ ಊರ್ವಶಿ ಮೇನಕಾ ಜೊತೆ ಪ್ರಜ್ವಲ್ ಆಗಮನ!
ಗುಲಾಮ ಚಿತ್ರದ ನಂತರ ಕೋಟಿ ರಾಮು ನಿರ್ಮಾಣದ 'ಸಾಗರ್' ಚಿತ್ರದಲ್ಲಿ ಪ್ರಜ್ಡಲ್ ದೇವರಾಜ್ ಮತ್ತೆ ನಟಿಸಿದ್ದಾರೆ. ಈ ಚಿತ್ರ ಈ ಶುಕ್ರವಾರ, 10 ಆಗಸ್ಟ್ 2012 ರಂದು ತೆರೆಗೆ ಬರಲಿದೆ. ಕೆಜಿ ರಸ್ತೆಯ 'ಸಾಗರ್' ಚಿತ್ರಮಂದಿರಕ್ಕಾಗಿಯೇ ಕಾದಿದ್ದ 'ಸಾಗರ್' ಚಿತ್ರತಂಡ, ಅದ್ದೂರಿ ಚಿತ್ರ 50 ಯಶಸ್ವಿ ದಿನ ಪೂರೈಸಿಯೂ 'ಔಟ್' ಆಗದ ಹಿನ್ನೆಲೆಯಲ್ಲಿ 'ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಈ ಬಾರಿಯಾದರೂ ಪ್ರಜ್ವಲ್ ಗೆಲ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.
ಇತ್ತೀಚಿಗೆ ಪ್ರಜ್ವಲ್ ದೇವರಾಜ್ ನಾಯಕತ್ವದ ಚಿತ್ರಗಳು ಘೋಷಣೆಯಾಗಿ ಮುಹೂರ್ತ ಕಂಡು ನಂತರ ಮಾಯವಾಗುವುದೇ ಹೆಚ್ಚು. ಕೆಲವು ಚಿತ್ರೀಕರಣ ಮುಗಿಸಿದರೂ ಅವು ಬಿಡುಗಡೆಯಾಗಿಲ್ಲ. ಬಿಡುಗಡೆಯಾಗಿದ್ದು ಸೋತಿದೆ. ಹೀಗಿರುವಾಗ ಈ ಸಾಗರ್ ಚಿತ್ರ ಬಿಡುಗಡೆಯಾಗುತ್ತಿರುವುದು ಪ್ರಜ್ವಲ್ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ. ಸ್ವತಃ ಪ್ರಜ್ವಲ್ ಕೂಡ ಖುಷಿಯಾಗಿದ್ದಾರೆ. ಆದರೆ ಗೆಲುವನ್ನು ಎಲ್ಲರೂ ನಿರೀಕ್ಷಿಸುವಂತಾಗಿದೆ.
ಈ ವೇಳೆಯಲ್ಲಿ ಮರಳುಗಾಡಲ್ಲಿ ಓಯಸಿಸ್ ಸಿಕ್ಕಂತೆ ತೆರೆಗೆ ಬರಲು ರೆಡಿಯಾಗಿರುವ ಚಿತ್ರವೇ 'ಸಾಗರ್'. ಇಲ್ಲಿ ಪ್ರಜ್ವಲ್ಗೆ ಮೂವರು ಹೀರೋಯಿನ್ಗಳು. ರಾಧಿಕಾ ಪಂಡಿತ್, ಹರಿಪ್ರಿಯಾ ಮತ್ತು ಸಂಜನಾ ಎಂಬ ಮೂವರು ದಂತದ ಬೊಂಬೆಗಳ ಜತೆ ರೊಮ್ಯಾನ್ಸ್ ಮಾಡಿದ್ದಾರೆ ಈ 'ಸಿಕ್ಸರ್' ಹುಡುಗ. ಈ ಚಿತ್ರದ ಮೇಲೆ ಅವರಿಗೆ ಅಪಾರ ಭರವಸೆಯಿದೆ.
ಈ ಹಿಂದೆ ಬಂದಿದ್ದ ಪ್ರಜ್ವಲ್ ಚಿತ್ರ 'ಗುಲಾಮ' ನಿರ್ಮಾಪಕ ಕೋಟಿ ರಾಮುಗೆ ಸಾಕಷ್ಟು ಲಾಸ್ ಮಾಡಿತ್ತು. ಈಗ ನಿರ್ದೇಶಕ ಎಂ.ಡಿ. ಶ್ರೀಧರ್ ನಂಬಿ ಮತ್ತೆ ಪ್ರಜ್ವಲ್ ಮೇಲೆ ಕೋಟಿ ಸುರಿದಿದ್ದಾರೆ. ಅದರಲ್ಲೂ ಆಶ್ಚರ್ಯದ ಸಂಗತಿ ಏನೆಂದರೆ ಸಾಮಾನ್ಯವಾಗಿ ರೀಮೇಕ್ ಚಿತ್ರ ಮಾಡುತ್ತಿದ್ದ ಶ್ರೀಧರ್, ಈ ಬಾರಿ ಅಪರೂಪವೆಂಬಂತೆ ಸ್ವಮೇಕ್ ಚಿತ್ರ ಸಾಗರ್ ಮಾಡಿದ್ದಾರೆ.
ಈ ಚಿತ್ರದ ಮೂಲಕ 'ಮಗಧೀರ' ಖ್ಯಾತಿಯ ದೇವಗಿಲ್ ಕನ್ನಡಕ್ಕೆ ಬಂದಿದ್ದಾರೆ. ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವವರು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್. ನಿರ್ಮಾಪಕ ರಾಮು ಈ ಮೊದಲು ತೆಲುಗಿನಲ್ಲಿ ನಿರ್ಮಿಸಲು ಮುಂದಾಗಿದ್ದ ಸಾಗರ್ ಚಿತ್ರವನ್ನು ಅವರ ನಿರ್ಧಾರವನ್ನು ಬದಲಿಸಿ ನಿರ್ದೇಶಿಸಿದ್ದು ನಿರ್ದೇಶಕ ಎಂಡಿ ಶ್ರೀಧರ್. ಕನ್ನಡದಲ್ಲಿ ಯಶಸ್ವಿಯಾದರೆ ಮುಂದೆ 'ಸಾಗರ್' ಚಿತ್ರ ತೆಲುಗಿಗೆ ರಿಮೇಕ್ ಅಥವಾ ಡಬ್ ಆಗಲಿದೆ.
ಅಂದಹಾಗೆ, ಈ ಚಿತ್ರದಲ್ಲಿ 'ಸಿಕ್ಸರ್' ಖ್ಯಾತಿಯ ನಟ ಪ್ರಜ್ವಲ್ ದೇವರಾಜ್, ಮೂರು ನಾಯಕಿಯರ ಜೊತೆ ರೊಮಾನ್ಸ್ ಮಾಡಲಿದ್ದಾರೆ. ಕನ್ನಡದ ಸುರಸುಂದರಿಯರಾದ ಹರಿಪ್ರಿಯಾ, ರಾಧಿಕಾ ಪಂಡಿತ್ ಹಾಗೂ ಸಂಜನಾ ಈ ಚಿತ್ರದಲ್ಲಿ ಪ್ರಜ್ವಲ್ ಜೋಡಿಯಾಗಿದ್ದಾರೆ. ಎಂಡಿ ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್ ಇಂಡಿಯಾ ಕನ್ನಡ)