Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೀಮೇಕ್ ಚಿತ್ರ ಪ್ರೇಮ್ ಅಡ್ಡ ಬಿಡುಗಡೆ ಮುಂದಕ್ಕೆ
ಹಲವಾರು ಕಾರಣಗಳಿಗೆ ಪ್ರೇಮ್ ಅಡ್ಡ ಚಿತ್ರ ಈ ವರ್ಷ ಸುದ್ದಿ ಮಾಡಿದೆ. ಅದರಲ್ಲಿ ಒಂದು ಶೀರ್ಷಿಕೆ ವಿವಾದ. ಇನ್ನೊಂದು "ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ.." ಎಂಬ ಹಾಡು.
ಈ ಹಾಡಿನ ಬಗ್ಗೆಯಂತೂ ಮೇಲುಕೋಟೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಪ್ರೇಮ್ ಈ ಹಾಡನಲ್ಲಿನ ಮೇಲುಕೋಟೆ ಬದಲಾಗಿ ಏಳುಕೋಟೆ ಬಳಸುವುದಾಗಿ ಪ್ರೇಮ್ ಹೇಳಿದ್ದಾರೆ. ಒಮ್ಮೆ ಮೇಲುಕೋಟೆ ಎಂದು ಬರೆಸಿ ಈಗ ಏಳುಕೋಟೆ ಮಾಡಿದರೆ ಚಿತ್ರದುರ್ಗದ ಜನ ಸುಮ್ಮನಿರುತ್ತಾರಾ?
ಮೇಕಾ ಮುರಳಿಕೃಷ್ಣ ನಿರ್ಮಿಸಿರುವ ಈ ಚಿತ್ರ ಡಿಸೆಂಬರ್ 7ರಂದು ತೆರೆಕಾಣುತ್ತಿದೆ. ಸುಮಾರು 200 ಚಿತ್ರಮಂದಿರಗಳಿಗೆ 'ಪ್ರೇಮ್ ಅಡ್ಡ' ಚಿತ್ರ ಲಗ್ಗೆ ಹಾಕುತ್ತಿದೆ. ತಮಿಳಿನ ಯಶಸ್ವಿ ಚಿತ್ರ 'ಸುಬ್ರಹ್ಮಣ್ಯಪುರಂ' ರೀಮೇಕ್ ಚಿತ್ರ ಇದಾಗಿದೆ. ಮೂಲ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕುತ್ತು. ರೀಮೇಕ್ ಪ್ರೇಮ್ ಅಡ್ಡ ಚಿತ್ರ ಎ ಸರ್ಟಿಫಿಕೇಟ್ ಪಡೆದಿದೆ.
ಕೃತಿ ಖರಬಂಧ ಚಿತ್ರದ ನಾಯಕಿ. ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನೂ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಮಹೇಶ್ ಬಾಬು. ಹಾಡುಗಳ ಚಿತ್ರೀಕರಣಕ್ಕೆ ಹೆಚ್ಚು ಸಮಯ ವ್ಯಯಿಸಿದ್ದೇವೆ ಎಂಬುದು ಅವರ ಮತ್ತೊಂದು ಮಾತು. (ಏಜೆನ್ಸೀಸ್)