Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾರುಲತಾ ಬಿಡುಗಡೆ ಮುಂದಕ್ಕೆ; ಯಾಕಿಂಗಾಡ್ತಾರೋ!
ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ ಬಹುಭಾಷಾ ಚಿತ್ರ 'ಚಾರುಲತಾ' ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಈ ಮೊದಲು, ಶಿವರಾಜ್ ಕುಮಾರ್-ಓಂ ಪ್ರಕಾಶ ಸಂಗಮದ ಚಿತ್ರ 'ಶಿವ' ದಿನವೇ ಬಿಡುಗಡೆ ಎನ್ನಲಾಗಿದ್ದ 'ಚಾರುಲತಾ' ಚಿತ್ರವನ್ನು ಅನಿವಾರ್ಯ ಕಾರಣ ಹೇಳಿ ಇದೇ 06, ಸೆಪ್ಟೆಂಬರ್ 2012 ಕ್ಕೆ ಬಿಡುಗಡೆ ಘೋಷಿಸಲಾಗಿತ್ತು. ಆದರೀಗ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಈ ಚಿತ್ರವು ಮುಂದಿನ ವಾರ ಬಿಡುಗಡೆಯಾಗುತ್ತಿಲ್ಲ. ಬದಲಿಗೆ ಇದೇ ತಿಂಗಳು 14 ರಂದು (ಸೆಪ್ಟೆಂಬರ್ 14, 2012) ಎಲ್ಲಾ ನಾಲ್ಕು ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ) ತೆರೆಗೆ ಬರುತ್ತಿದೆ. ಆಡಿಯೋ ಬಿಡುಗಡೆಯಾಗಿದೆ. ಟ್ರೇಲರುಗಳೂ ಟಿವಿಗಳಲ್ಲಿ ಪ್ರಸಾರ ಕಾಣುತ್ತಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದಿವೆ. ಈ ಚಿತ್ರದ ಜೊತೆ ಜೊತೆಯಲ್ಲೇ ತಮಿಳು ಸ್ಟಾರ್ ಸೂರ್ಯ ನಾಯಕತ್ವದ 'ಮಾತರನ್' ಕೂಡ ಪ್ರಚಾರಕಾರ್ಯದಲ್ಲಿ ಬಿಜಿಯಾಗಿದೆ.
ದ್ವಾರಕೀಶ್ ಮಗ ಯೋಗಿ ನಿರ್ಮಾಣದ 'ಚಾರುಲತಾ' ಚಿತ್ರವನ್ನು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮೊದಲು ಏಕಕಾಲಕ್ಕೆ ನಿರ್ಮಿಸಲಾಗಿದೆ. ನಂತರ ಈ ಚಿತ್ರವನ್ನು ಕನ್ನಡದಿಂದ ಮಲಯಾಳಂಗೆ ಹಾಗೂ ತಮಿಳಿನಿಂದ ತೆಲುಗಿಗೆ ಹಾಗೂ 'ಡಬ್' ಮಾಡಲಾಗಿದೆ. ಪ್ರಿಯಾಮಣಿ ಎದುರು ನಾಯಕರಾಗಿ ಸ್ಕಂದ ನಟಿಸಿರುವ ಈ ಚಿತ್ರದ ನಿರ್ದೇಶಕರು ಪೊನ್ ಕುಮಾರನ್.
'ಚಾರುಲತಾ' ಚಿತ್ರದಂತೆ ಸಯಾಮಿ ಅವಳಿಗಳ ಕಥೆ ಹೊಂದಿರುವ ತಮಿಳು ಸ್ಟಾರ್ ಸೂರ್ಯ ಚಿತ್ರ 'ಮಾತರನ್', ಅಕ್ಟೋಬರ್ 12, 2012 ರಂದು ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಾರುಲತಾ ಒಂದು ತಿಂಗಳು ಮೊದಲೇ ಬಿಡುಗಡೆಯಾಗುತ್ತಿರುವುದು ವಿಶೇಷ ಎನಿಸಿದೆ. ಎರಡರ ಕಥೆಯೂ ಒಂದೇ ರೀತಿ ಇರುವುದರಿಂದ ಈ ಚಿತ್ರಗಳ ಮಧ್ಯೆ ಫೈಟ್ ಆದರೆ ಕಷ್ಟ ಎನ್ನಲಾಗುತ್ತಿತ್ತು. ಈಗ ಆ ಸಮಸ್ಯೆಯಿಲ್ಲ. (ಒನ್ ಇಂಡಿಯಾ ಕನ್ನಡ)