Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪರಭಾಷಾ ವಿರೋಧಿ ಮಂಜು ತಮಿಳು ಚಿತ್ರದ ಡಿಸ್ಟ್ರಿಬ್ಯೂಟರ್
ಡಬ್ಬಿಂಗ್ ಮತ್ತು ಪರಭಾಷಾ ವಿರೋಧಿ ಚಳುವಳಿಯಲ್ಲಿ ಮಂಚೂಣಿಯಲ್ಲಿ ಕಂಡು ಬರುವ ಮಂಜು ಪರಭಾಷಾ ಚಿತ್ರಗಳ ಡಿಸ್ತ್ರಿಬ್ಯೂಷನ್ ರೈಟ್ಸ್ ಪಡೆದು ಅಚ್ಚರಿ ಮೂಡಿಸಿದ್ದೂ ಉಂಟು.
ತಮಿಳು ನಟ ವಿಜಯ್ ಅಭಿನಯದ ವೇಲಾಯುಧ ಚಿತ್ರದ ರೈಟ್ಸ್ ಪಡೆದಿದ್ದ ಮಂಜು ಈಗ ಮತ್ತೊಂದು ತಮಿಳು ಚಿತ್ರದತ್ತ ಮುಖ ಮಾಡಿದ್ದಾರೆ.
ನಾಡೋಡಿಗಳ್ ಚಿತ್ರದ ನಾಯಕನಾಗಿದ್ದ ಶಶಿಕುಮಾರ್ ಅಭಿನಯದ ಸುಂದರ ಪಾಂಡ್ಯನ್ ಚಿತ್ರದ ಕರ್ನಾಟಕ ಹಂಚಿಕೆಯ ರೈಟ್ಸ್ ಅನ್ನು ಮಂಜು ಪಡೆದಿದ್ದಾರೆ.
ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಶಶಿಕುಮಾರ್ ನಾಯಕತ್ವದಲ್ಲಿ ತಮಿಳು ಚಿತ್ರವೊಂದನ್ನು ಬರುವ ಜನವರಿಯಲ್ಲಿ ನಿರ್ಮಾಣ ಮಾಡಲಿದ್ದೇನೆ ಎಂದು ಘೋಷಿಸಿದ್ದಾರೆ.
ಈ ಘೋಷಣೆ ಮಾಡಿದಾಗ ತಮಿಳು ನಟ ಶಶಿಕುಮಾರ್ ಪಕ್ಕದಲ್ಲೇ ಕೂತಿದ್ದರು. ಶಶಿಕುಮಾರ್ ಸುಬ್ರಮಣ್ಯಪುರಂ, ನಾಡೋಡಿಗಳ್, ಪೋರಾಳಿ ಸಿನಿಮಾಗಳ ಮೂಲಕ ತಮಿಳುನಾಡಿನಲ್ಲಿ ತನ್ನದೇ ಆದ ಜನಪ್ರಿಯತೆ ಗಳಿಸಿದವರು.
ಈಗ ಅವರ ಶಿಷ್ಯನೊಬ್ಬನ ನಿರ್ದೇಶನದಲ್ಲಿ ಮಂಜು ನಿರ್ಮಾಣದ ಈ ಚಿತ್ರಕ್ಕೆ ಬಣ್ಣ ಹಚ್ಚಲು ಒಪ್ಪಿಗೆ ಸೂಚಿಸಿದ್ದಾರೆ.
ಹೀಗೊಂದು ಪ್ರಯತ್ನದ ಮೂಲಕ ಮಂಜು ತಮಿಳು ಸಿನಿಮಾ ನಿರ್ಮಾಣದಲ್ಲಿ ತನಗೊಂದು ಗಟ್ಟಿ ನೆಲೆ ಸ್ಥಾಪಿಸಿಕೊಂಡರೆ ಅದರಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಯಾಕೆಂದರೆ ಮಂಜುಗೆ ಇಂಥಹ ಹತ್ತು ಹಲವು ಮಹತ್ವಾಕಾಂಕ್ಷೆಗಳಿವೆ.
ಒಟ್ಟಿನಲ್ಲಿ ಕೆ ಮಂಜುವಿನ ಸಾಹಸಗಳನ್ನು ಗಾಂಧಿನಗರ ಬೆಚ್ಚಿ ಬಿದ್ದು ನೋಡುತ್ತಿದೆ ಅನ್ನೋದು ಸತ್ಯ. [ಮಂಜು ಇನ್ನೊಂದು ಸಾಹಸ ಇಲ್ಲಿದೆ ನೋಡಿ]