Don't Miss!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Lifestyle ಐಸ್ ಟೀ ಮಾಡುವುದು ಹೇಗೆ? ಇಲ್ಲಿದೆ ಪರ್ಫೆಕ್ಟ್ ಐಸ್ ಟೀ ರೆಸಿಪಿ
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಪವರ್ ಸ್ಟಾರ್ ಜೊತೆ ಸೂಪರ್ ಸ್ಟಾರ್ ಚಿತ್ರ
ಮೈನಾ, ಪೃಥ್ವಿ, ಜಟ್ಟಾ ಚಿತ್ರಗಳ ನಿರ್ಮಾಪಕ ಎನ್ ಎಸ್ ರಾಜ್ ಕುಮಾರ್ ನಿರ್ಮಾಣ ಚಿತ್ರಕ್ಕೆ ಗಿರಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಸದ್ಯಕ್ಕೆ ವಿದೇಶಿ ಪ್ರವಾಸದಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಚಿತ್ರದ ಮುಹೂರ್ತ ನೆರವೇರಿತು.
ಚಿತ್ರದ ಪಾತ್ರವರ್ಗದಲ್ಲಿ ಭಾವನಾ, ರವಿಕಾಳೆ, ಅರ್ಚನಾ, ಅತುಲ್ ಕುಲಕರ್ಣಿ ಮುಂತಾದವರು ಇದ್ದಾರೆ. ಪುನೀತ್ ಅವರ ಬಹುತೇಕ ಚಿತ್ರಗಳಿಗೆ ಕ್ಲಾಪ್ ಮಾಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಹೊಸ ಚಿತ್ರಕ್ಕೂ ಕ್ಲಾಪ್ ಮಾಡಿದರು.
ಕೇವಲ ರು.35 ಸಾವಿರ ಕ್ಯಾಮೆರಾ ಬಳಸಿ ನವಿಲಾದವರು ಚಿತ್ರವನ್ನು ಮಾಡಿದ್ದ ಗಿರಿರಾಜ್ ಬಳಿಕ ಅದ್ವೈತ ಹಾಗೂ ಜಟ್ಟಾ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಇನ್ನೂ ಹೆಸರಿಡ ಈ ಚಿತ್ರಕ್ಕೆ ಇಳಯರಾಜಾ ಅವರ ಸಂಗೀತವಿದೆ.
ಈಗಾಗಲೆ ಪುನೀತ್ ಬರ್ತ್ ಡೇ ದಿನ ಸೆಟ್ಟೇರಿರುವ 'ನಿನ್ನಿಂದಲೇ' ಚಿತ್ರದ ಬಳಿಕ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಶೀರ್ಷಿಕೆ ಆಯ್ಕೆ ನಡೆಯುತ್ತಿದೆ. ಈಗಾಗಲೆ ಹತ್ತು ಶೀರ್ಷಿಕೆಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆಯಂತೆ. ಅವುಗಳಲ್ಲಿ ಜೇಡರಬಲೆ, ನಾಂದಿ, ಲಗೋರಿ ಸೇರಿದಂತೆ ಹಲವು ಹೆಸರುಗಳಿವೆ ಎನ್ನಲಾಗಿದೆ. (ಏಜೆನ್ಸೀಸ್)