Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುನಾಮಿಯಲ್ಲಿ ಮೀನು ಹಿಡಿದ 'ಅಣ್ಣಾಬಾಂಡ್' ಫಿಫ್ಟಿ ನಾಟೌಟ್
ಸಿನಿಮಾದಲ್ಲಿ ಕಾಣಸಿಕ್ಕುವ ಹಾಡು, ಫೈಟ್ಸ್ ಗಳಲ್ಲಿ ನಿರ್ದೇಶಕನ ಪಾತ್ರ ಸೊನ್ನೆಯೇ? ಅಣ್ಣಾಬಾಂಡ್ ಅದ್ಭುತ ಸಿನಿಮಾ ಅಲ್ಲದಿರಬಹುದು. ಆದರೆ ಪುನೀತ್ ಅಭಿಮಾನಿಗಳಿಗೆ ಮತ್ತು ಮಾಸ್ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಅಣ್ಣಾ ಬಾಂಡ್ ನಲ್ಲಿ ಚಾಚೂತಪ್ಪದೆ ಕೊಟ್ಟಿದ್ದೀನಿ ಅನ್ನೋದು ಸೂರಿ ನಂಬಿಕೆ. ಈಗದು ಒಂದು ಹಂತಕ್ಕೆ ಸಾಬೀತಾಗಿದೆ ಕೂಡಾ.
ಯಾಕೆಂದರೆ ಪುನೀತ್ ಅಭಿನಯದ ಅಣ್ಣಾ ಬಾಂಡ್ ಬಗ್ಗೆ ವಿಮರ್ಶಕರು ಏನೇ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದರೂ ಪ್ರೇಕ್ಷಕ ಮಾತ್ರ ಚಿತ್ರವನ್ನು ಸಾರಾಸಗಟವಾಗಿ ತಿರಸ್ಕರಿಸಲಿಲ್ಲ ಅನ್ನೋದಕ್ಕೆ ಚಿತ್ರ ಐವತ್ತು ದಿನಗಳನ್ನು ಪೂರೈಸಿರುವುದೇ ಸಾಕ್ಷಿ. ರಾಜ್ಯಾದ್ಯಂತ ಮೂವತ್ತು ಥಿಯೇಟರ್ ಗಳಲ್ಲಿ ಅಣ್ಣಾಬಾಂಡ್ ಚಿತ್ರ ಐವತ್ತು ದಿನಗಳ ಪ್ರದರ್ಶನ ದಾಖಲಿಸಿದೆ.
ಈಗಲೂ ಚಿತ್ರ ನಲವತ್ತೈದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ಅದರ ಹೆಚ್ಚುಗಾರಿಕೆ. ಎಂಥದ್ದೇ ಜನಮನ್ನಣೆ ಗಳಿಸಿದ ಚಿತ್ರವಾದರೂ ಈಗ ಐವತ್ತು ಮತ್ತು ನೂರುದಿನಗಳ ಪ್ರದರ್ಶನ ಕಾಣುವುದು ಕೊಂಚ ಅಸಂಭವಾದ ಸಂಗತಿಯೇ. ಯಾಕೆಂದರೆ ಮೊದಲಿನಂತೆ ಈಗ ಐವತ್ತೋ ಎಪ್ಪತ್ತೋ ಚಿತ್ರಮಂದಿರಗಳಲ್ಲಷ್ಟೇ ಸಿನಿಮಾ ಬಿಡುಗಡೆ ಮಾಡುವುದಿಲ್ಲ.
ಸಾರಾಸಗಟು ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಆರಂಭದ ವಾರಗಳಲ್ಲೇ ಬಹುತೇಕ ವೀಕ್ಷಕರು ಸಿನಿಮಾವನ್ನ ನೋಡಿ ಮುಗಿಸಿರುತ್ತಾರೆ. ಹಾಗಾಗಿ ನೂರು ದಿನಗಳ ತನಕವೂ ಹರಿದು ಬರುತ್ತಲೇ ಇರುವ ಪ್ರೇಕ್ಷಕ ಕಡಿಮೆಯಾಗಿದ್ದಾನೆ. ಆ ನಿಟ್ಟಿನಲ್ಲಿ ನೋಡಿದರೆ ಪುನೀತ್ ಅಭಿನಯದ ಅಣ್ಣಾ ಬಾಂಡ್ ಕೂಡಾ ನೂರ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ.
ಹಾಗಿದ್ದೂ ಚಿತ್ರ ಐವತ್ತು ದಿನಗಳ ಪ್ರದರ್ಶನ ದಾಖಲಿಸಿರುವುದು ಅದರಲ್ಲೂ ಮೂವತ್ತೈದು ಥೇಟರ್ ಗಳಲ್ಲಿ ಈ ಕೀರ್ತಿಗೆ ಭಾಜನವಾಗಿರುವುದು. ಹಾಗಾಗಿ ಅಣ್ಣಾ ಬಾಂಡ್ ಚಿತ್ರ ಫ್ಲಾಪ್ ಕೆಟಗರಿಗೆ ಸೇರಿದ ಚಿತ್ರವಲ್ಲ. ಅದು ಯಶಸ್ವಿ ಅನ್ನೋದಕ್ಕೆ ಸಾಕ್ಷ್ಯ ಸಮೇತ ದಾಖಲೆ ಒದಗಿಸಿದೆ. ಸೂರಿ ಈಗ ಬೇಸರ ಮಾಡುವುದನ್ನು ನಿಲ್ಲಿಸಬಹುದು.