Don't Miss!
- News Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ 'ದೊಡ್ಮನೆ ಹುಡುಗ' ಭರ್ಜರಿ ಆರಂಭ
ಅಂತೂ ಇಂತೂ 'ದೊಡ್ಮನೆ ಹುಡುಗ' ಚಿತ್ರಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಆಶೀರ್ವಾದದೊಂದಿಗೆ 'ದೊಡ್ಮನೆ ಹುಡುಗ' ಸೆಟ್ಟೇರಿದೆ.
ಹೋಳಿ ಹಬ್ಬದ ಸುಸಂದರ್ಭದಲ್ಲಿ ಇಂದು 'ದೊಡ್ಮನೆ ಹುಡುಗ' ಚಿತ್ರದ ಮುಹೂರ್ತ ನಡೆಯಿತು. ಅಪ್ಪು ನಿವಾಸದಲ್ಲಿರುವ ಗಣಪತಿ ವಿಗ್ರಹದ ಮುಂದೆ 'ದೊಡ್ಮನೆ ಹುಡುಗ' ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು.
ಪಾರ್ವತಮ್ಮ ರಾಜ್ ಕುಮಾರ್ ಹಣೆಗೆ ಮುತ್ತು ಕೊಟ್ಟು ''ಅಭಿಮಾನಿಗಳು ನಮ್ಮನೆ ದೇವ್ರು'' ಅಂತ ಡೈಲಾಗ್ ಹೇಳುವ ಮೂಲಕ ಮುಹೂರ್ತದ ಶಾಟ್ ನ ಪುನೀತ್ ರಾಜ್ ಕುಮಾರ್ ಓಕೆ ಮಾಡಿದರು. ಅದಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿ ಹರಸಿದರು. [ಪುನೀತ್ 'ದೊಡ್ಮನೆ ಹುಡುಗ'ನಿಗೆ ಮುಹೂರ್ತ ನಿಗದಿ]
''ಅಭಿಮಾನಿಗಳೇ ದೇವರು'' ಅಂತ ಅಪ್ಪಾಜಿ ಸದಾ ಹೇಳುತ್ತಿದ್ದರು. ಅಣ್ಣಾವ್ರ ಮಗನಾಗಿ ಇದೀಗ ''ಅಭಿಮಾನಿಗಳು ನಮ್ಮನೆ ದೇವ್ರು'' ಅಂತ ಅಪ್ಪು ಹೇಳಿರುವುದರಿಂದ 'ದೊಡ್ಮನೆ ಹುಡುಗ'ನ ವೃತ್ತಾಂತದ ಬಗ್ಗೆ ಕುತೂಹಲ ಕೆರಳಿದೆ. ['ದೊಡ್ಮನೆ ಹುಡುಗ' ಪುನೀತ್ ಡೈಲಾಗ್ ಏನು ಗೊತ್ತಾ?]
''ಒಂದು ಊರಿನ ದೊಡ್ಮನೆ ಕುಟುಂಬದ ಮಗನಾಗಿ ನಾನು ಅಭಿನಯಿಸ್ತಿದ್ದೀನಿ. ಪಾತ್ರ ತುಂಬಾ ಚೆನ್ನಾಗಿದೆ'' ಅಂತ ಪುನೀತ್ ಹೇಳಿದ್ದಾರೆ. ಅಷ್ಟು ಬಿಟ್ಟರೆ, ಚಿತ್ರದ ಕಥೆ, ಪುನೀತ್ ಪಾತ್ರ ಇನ್ನೂ ಗುಟ್ಟಾಗಿದೆ.
'ಹುಡುಗ್ರು' ನಂತ್ರ 'ದೊಡ್ಮನೆ ಹುಡುಗ' ಚಿತ್ರದಲ್ಲಿ ರಾಧಿಕಾ ಪಂಡಿತ್ ಮತ್ತೊಮ್ಮೆ ಪುನೀತ್ ಜೋಡಿಯಾಗಿದ್ದಾರೆ. ಹಳ್ಳಿ ಹುಡುಗಿಯಾಗಿ ಮತ್ತು ಮಾರ್ಡನ್ ಗರ್ಲ್ ಆಗಿ ಎರಡು ವಿಭಿನ್ನ ಶೇಡ್ ಗಳಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಳ್ಳುತ್ತಾರಂತೆ. [ಬಂಪರ್ ಆಫರ್ ಗಿಟ್ಟಿಸಿಕೊಂಡ ನಟಿ ರಾಧಿಕಾ ಪಂಡಿತ್]
''ಇದು ಹಳ್ಳಿಯೊಂದರ ದೊಡ್ಮನೆ ಕುಟುಂಬದ ಕಥೆ'' ಅಂತಷ್ಟೇ ನಿರ್ದೇಶಕ ದುನಿಯಾ ಸೂರಿ ಹೇಳಿದರು. ಅಂದ್ಹಾಗೆ 'ದೊಡ್ಮನೆ' ಕುಟುಂಬದ ದೊರೆಯಾಗಿ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯಿಸುತ್ತಿದ್ದರೆ, ವಿಶೇಷ ಪಾತ್ರದಲ್ಲಿ ಭಾರತಿ ವಿಷ್ಟುವರ್ಧನ್ ಬಣ್ಣ ಹಚ್ಚಲಿದ್ದಾರೆ.
ನಾಳೆಯಿಂದ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ಶುರುವಾಗಲಿದೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. (Photo courtesy : Chandhan Gowda)