Don't Miss!
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್. ಚಂದ್ರು 'ಮಳೆ' ಗೆ 'ಮುದ್ದು ಮನಸು' ನಲುಗಿತೆ?
ನಿರ್ಮಾಪಕ ಕಮ್ ಡಿಸ್ಟ್ರಿಬ್ಯುಟರ್, ಕನಕಪುರ ಶ್ರೀನಿವಾಸ್ ಇವಾಗ ಸಖತ್ ಕನ್ ಫ್ಯೂಶನ್ ಮಾಡಿಕೊಂಡಿದ್ದಾರೆ. ಯಾಕೆ ಅಂತೀರಾ? ಅವರು ವಿತರಣಾ ಹಕ್ಕು ವಹಿಸಿಕೊಂಡಿರುವ 'ಮುದ್ದು ಮನಸೇ' ಹಾಗೂ 'ಮಳೆ' ಎರಡು ಚಿತ್ರಗಳು ಒಂದೇ ದಿನ ತೆರೆ ಕಾಣುವ ಸಂಭವ ಇದೆಯಂತೆ.
ನಿರ್ದೇಶಕ ಆರ್.ಚಂದ್ರು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ಹಾಗೂ ಲವ್ಲಿ ಸ್ಟಾರ್ ಪ್ರೇಮ್, ಮತ್ತು ಅಮೂಲ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಮಳೆ' ಚಿತ್ರ ಆಗಸ್ಟ್ 7 ರಂದು ತೆರೆ ಕಾಣುತ್ತಿದ್ದು, ಅದೇ ದಿನ ಅನಂತ್ ಶೈನ್ ಆಕ್ಷನ್-ಕಟ್ ಹೇಳಿರುವ 'ಮುದ್ದು ಮನಸೇ' ಕೂಡ ತೆರೆ ಕಾಣಲಿದೆ ಅಂತ ಸುದ್ದಿಯಾಗಿತ್ತು.
ಆದರೆ ಲೇಟೆಸ್ಟ್ ಮಾಹಿತಿ ಪ್ರಕಾರ ಇದೀಗ ನಿರ್ದೇಶಕ ಆರ್ ಚಂದ್ರು, ಶಿಷ್ಯ ತೇಜಸ್ ಆಕ್ಷನ್-ಕಟ್ ಹೇಳಿರುವ 'ಮಳೆ' ಮೊದಲು ತೆರೆ ಮೇಲೆ ರಾರಾಜಿಸಲಿದೆಯಂತೆ. ಆ ನಂತರ 'ಮುದ್ದು ಮನಸೇ' ಸರದಿ ಅಂತಿದ್ದಾರೆ ಶ್ರೀನಿವಾಸ್.[ಮಳೆ ಲೇಟು ಜುಲೈಗೂ ಡೌಟು ಅಂತಾರೆ ಆರ್ ಚಂದ್ರು ]
ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಚಿತ್ರ ವಿತರಣೆ ಹಕ್ಕು ವಹಿಸಿಕೊಂಡಿರುವ ಶ್ರೀನಿವಾಸ್ ಹಾಗೂ ಆರ್.ಎಸ್.ಪ್ರೊಡಕ್ಷನ್ಸ್ ಅವರಿಗೆ ಚಿತ್ರ ವಿತರಣೆ ಮಾಡುವುದು ಕಷ್ಟ ಸಾಧ್ಯ. ಆದ್ದರಿಂದ 'ಮುದ್ದು ಮನಸೇ' ಚಿತ್ರವನ್ನು ಸದ್ಯಕ್ಕೆ ಪೋಸ್ಟ್ ಪೋನ್ ಮಾಡಲಾಗಿದ್ದು, 'ಮಳೆ' ಮೊದಲು ತೆರೆ ಮೇಲೆ ಬರಲಿದೆ.['ಮಳೆ'ಯಲ್ಲಿ ಪ್ರೇಮ್-ಅಮೂಲ್ಯ ನಡುವೆ ಏನೋ ಸರಿಯಿಲ್ಲ]
ಈ ಮೊದಲು 'ಮಳೆ' ರಿಲೀಸಿಂಗ್ ಡೇಟ್ ಕನ್ ಫರ್ಮ್ ಆಗಿದ್ದು, ಕಾರಣಾಂತರಗಳಿಂದ ನಿರ್ಮಾಪಕ ಆರ್.ಚಂದ್ರು ಚಿತ್ರ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹಾಕಿದ್ದಾರೆ. ಆದರೆ ಈ ಎಲ್ಲಾ ಕನ್ ಫ್ಯೂಶನ್ ನಿಂದ 'ಮುದ್ದು ಮನಸೇ' ಚಿತ್ರ ತಂಡ ಮಾತ್ರ ತುಂಬಾ ಬೇಸರ ಮಾಡಿಕೊಂಡಿದೆಯಂತೆ.['ಮಳೆ'ಯಲ್ಲಿ ಲವ್ಲಿ ಸ್ಟಾರ್ ಜೊತೆ ಬೇಬಿ ಡಾಲ್ ಅಮೂಲ್ಯ ಡಾನ್ಸ್ ]
ಅದೇನೇ ಇರಲಿ ಅಂತೂ 'ಮಳೆ'ಯ ಊರು ಮಲೆನಾಡ ತವರೂರಾದ ಸಕಲೇಶಪುರದಲ್ಲಿ ಚಿತ್ರೀಕರಣಗೊಂಡಿರುವ ಕಲರ್ ಫುಲ್ ಚಿತ್ರ 'ಮಳೆ' ಯನ್ನು ಆಗಸ್ಟ್ 7 ಕ್ಕೆ ಚಂದ್ರು ತೆರೆಯ ಮೇಲೆ ಸುರಿಸಿದರೆ ಲವ್ಲಿ ಸ್ಟಾರ್ ಅಭಿಮಾನಿಗಳು ಖುಷಿ ಪಡಬಹುದೇನೋ.