Don't Miss!
- News ಬೆಂಗಳೂರು ಬೆಳ್ಳಂದೂರು ಶಾಲಾ ಆವರಣದಲ್ಲಿ ಸ್ಪೋಟಕ ಪತ್ತೆ, ಮಕ್ಕಳು ಪೋಷಕರಲ್ಲಿ ಆತಂಕ
- Finance ಬಯೋಕಾನ್ ರಾಜಕೀಯ ದೇಣಿಗೆ ನೀಡಿಲ್ಲ ಎಂದ ಕಿರಣ್ ಮಜುಂದಾರ್ ಶಾ: ಹಾಗಿದ್ರೆ 6 ಕೋಟಿ ರೂ. ಯಾರದ್ದು?
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಧಿಕಾ ಕುಮಾರಸ್ವಾಮಿಗೆ ಮುನ್ನಿ ಬದ್ನಾಮ್ ಆಗುವ ಆಸೆ
ಆದರೆ ಸದ್ಯಕ್ಕೆ ನಿರ್ಮಾಣಕಷ್ಟೇ ನನ್ನ ಆದ್ಯತೆ ಎಂದು ಸ್ಪಷ್ಟಪಡಿಸಿದ್ದ ರಾಧಿಕಾ ಲಕ್ಕಿ ಚಿತ್ರದ ನಂತರ ಮನೆ ಸೇರಿದ್ದರು. ಅವರ ಹೆಸರಿನಲ್ಲಿ ಇನ್ನು ಎರಡು ಪ್ರಾಜೆಕ್ಟ್ ಗಳು ಸೆಟ್ಟೇರುವ ಬಗ್ಗೆ ಗಾಳಿಸುದ್ದಿಗಳು ಹರಿದಾಡಿವೆಯಾದರೂ ಯಾವುದೂ ನಿಜವಾಗಲಿಲ್ಲ. ಈಗ ಕೋಡಿ ರಾಮಕೃಷ್ಣ ನಿರ್ದೇಶಿಸುವ ಚಿತ್ರಕ್ಕೆ ರಾಧಿಕಾ ಮತ್ತೆ ಬಣ್ಣ ಹಚ್ಚಲಿದ್ದಾರೆ.
ರಾಧಿಕಾ ಈಗೊಂದು ಏಳು ವರ್ಷದ ಹಿಂದೆ ನಟಿಸಿದ್ದ ತೆಲುಗು ಚಿತ್ರ 'ದೇವತಲು' ದಿಡೀರನೆ ನಿಂತು ಹೋಗಿತ್ತು. ಮಾಜಿ ಕುಮಾರಸ್ವಾಮಿಯವರನ್ನು ಕೈಹಿಡಿದ ರಾಧಿಕಾ ಆಮೇಲೆ ಬಹಿರಂಗವಾಗಿ ಕಾಣಿಸಿಕೊಳ್ಳಿರಲಿಲ್ಲ. ಕೋಡಿ ರಾಮಕೃಷ್ಣ ಅವರ ಸಿನಿಮಾ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ವರ್ಷದ ಹಿಂದೆ ಮತ್ತೆ ಅದೇ ಚಿತ್ರದ ಚಿತ್ರೀಕರಣಕ್ಕಾಗಿ ರಾಧಿಕಾ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಒಂದಷ್ಟು ದಿನ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ದರು.
ಮತ್ತೆ ಅದೇನಾಯ್ತೋ ಆ ಸಿನಿಮಾದ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಈಗ ಬಂದಿರುವ ವರ್ತಮಾನ ಏನೆಂದರೆ ರಾಧಿಕಾ ಮತ್ತೊಮ್ಮೆ ಆ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಏಳು ವರ್ಷದ ಹಿಂದೆ ಆ ಚಿತ್ರಕ್ಕೆ ಶೂಟಿಂಗ್ ಆಗಿತ್ತೋ ಅದಲ್ಲವನ್ನು ಕಿತ್ತೊಗೆದು ಕೋಡಿ ರಾಮಕೃಷ್ಣ ಮತ್ತೊಮ್ಮೆ ದೇವತಲು ಚಿತ್ರವನ್ನು ಪುನರಾರಂಭಿಸಲಿದ್ದಾರೆ.
ಒಂದು ವೇಳೆ ಇದು ನಿಜವಾದರೆ ರಾಧಿಕಾ ಮದುವೆಯಾದ ಮೇಲೆ ಇದೇ ಮೊದಲ ಬಾರಿ ಚಿತ್ರವೊಂದಕ್ಕೆ ಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡಂತಾಗುತ್ತದೆ.
ದಬಾಂಗ್ ಚಿತ್ರದ 'ಮುನ್ನಿ ಬದ್ನಾಮ್ ಹುಯಿ' ಯಂಥ ಹಾಡಿಗೆ ನರ್ತಿಸಬೇಕೆಂದು ಬಯಕೆ ವ್ಯಕ್ತಪಡಿಸಿದ ರಾಧಿಕಾ, ಮೈ ಪ್ರದರ್ಶನಕ್ಕೆ ನಿರ್ಬಂಧ ಹಾಕಿ ಅಂಥ ಹಾಡುಗಳಿಗೆ ಕೊರಿಯೋಗ್ರಫಿ ಮಾಡುವುದಾದರೆ ಅಂಥಾ ಹಾಡಿಗೆ ನರ್ತಿಸಲು ಈಗಲೂ ಸಿದ್ದ ಎಂದು ಹೇಳಿ ಬೆಚ್ಚಿ ಬೀಳಿಸಿದ್ದಾರೆ.