Don't Miss!
- News Mysore Candidate : ಮೈಸೂರಿನಲ್ಲಿ ಬಿಜೆಪಿಯಿಂದ ರಾಜವಂಶಸ್ಥ: ಕಾಂಗ್ರೆಸ್ ಲೆಕ್ಕಾಚಾರವೇನು?
- Lifestyle ಕೆಜಿಎಫ್ ಎಲ್ ಡೊರಾಡೊ ಕಥೆ ಕೇಳಿದ್ದೀರಾ? ಇದು ಸಮುದ್ರದಲ್ಲಿ ಮುಳುಗಿದ ಎಲ್ ಡೊರಾಡೊ ಹಡಗಿನ ಕಥೆ..!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Automobiles ಕಾಶ್ಮೀರ ಟು ಕನ್ಯಾಕುಮಾರಿ ಟ್ರಿಪ್ ಮುಗಿಸಿದ ಎಲೆಕ್ಟ್ರಿಕ್ ಸ್ಕೂಟರ್: ಗೇಮ್ ಚೇಂಜರ್ ಸದ್ಯದಲ್ಲೇ ಅಖಾಡಕ್
- Technology iPhone: ಐಫೋನ್ 16 ನಲ್ಲಿ ಆಪಲ್ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು
- Sports IPL 2024: RCB ಫ್ಯಾನ್ಸ್ ಕಂಡರೆ ಹೆಚ್ಚು ಹೆದರುತ್ತೇನೆ; ಅವೇಶ್ ಖಾನ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬದುಕಿದ್ದಾಗಲೇ ಬಾಲಚಂದರ್ ಗೆ ಶ್ರದ್ಧಾಂಜಲಿ ಸಲ್ಲಿಸಿದ ವರ್ಮಾ
ವಿವಾದಾತ್ಮಕ ಟ್ವೀಟ್ ಮಾಡುವುದರಲ್ಲಿ ಎತ್ತಿದ ಕೈ ಎನಿಸಿರುವ ವರ್ಮಾ(RGV) ಅವರು ಮತ್ತೊಮ್ಮೆ ಪಬ್ಲಿಕ್ ಆಗಿ ಎಲ್ಲರ ಮುಂದೆ ತಲೆ ತಗ್ಗಿಸಿದ್ದಾರೆ. ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿರುವ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರು ಬದುಕಿದ್ದಾಗಲೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಕತ್ ಆಗಿ ಸಕ್ರಿಯರಾಗಿರುವ ವರ್ಮಾ ಅವರು ಡಿ.16ರಂದು ಕೆ ಬಾಲಚಂದರ್ ಅವರ ಅನಾರೋಗ್ಯದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಚೆನ್ನೈನ ಕಾವೇರಿ ಆಸ್ಪತ್ರೆ ವೈದ್ಯರು ಕೂಡಾ ಪರಿಸ್ಥಿತಿ ಗಂಭೀರವಾಗಿದೆ ಎಂದು ಪ್ರಕಟಿಸಿದ್ದರು. ['ತಮಿಳುನಾಡಿನ ರಾಜಧಾನಿ ಬೆಂಗಳೂರಾಗಿದ್ರೆ ಚೆಂದ' ಎಂದ ವರ್ಮಾ]
ಈ
ವೇಳೆಯಲ್ಲಿ
ವರ್ಮಾ
ಅವರಿಗೆ
ಎಲ್ಲಿಂದ
ಸುದ್ದಿ
ಬಂತೋ
ಗೊತ್ತಿಲ್ಲ.
ಯಾರಾದರೂ
ಸ್ನೇಹಿತರು,
ಚಿತ್ರರಂಗದವರನ್ನು
ಈ
ಬಗ್ಗೆ
ಮಾತಾಡಿಸುವ
ಜಾಯಮಾನ
ವರ್ಮಾ
ಅವರದ್ದಲ್ಲ.
ಸೋ,
ಕೆ
ಬಾಲಚಂದರ್
ಅವರ
ನಿಧನಕ್ಕೆ
ಶೋಕ
ವ್ಯಕ್ತಪಡಿಸುತ್ತೇನೆ
ಭಾರತೀಯ
ಸಿನಿಮಾದ
ಅದ್ಭುತ
ನಿರ್ದೇಶಕರಾಗಿದ್ದರು
ಎಂದು
ಟ್ವೀಟ್
ಮಾಡಿಬಿಟ್ಟರು.
ತಕ್ಷಣವೇ
ಟ್ವಿಟ್ಟರ್
ನಲ್ಲಿ
ಜನ
ಉಗಿಯುಲು
ತೊಡಗಿದಾಗ
ಎಚ್ಚೆತ್ತುಕೊಂಡ
ವರ್ಮಾ
ಟ್ವೀಟ್
ಡಿಲಿಟ್
ಮಾಡಿದರು.
ಅದರೆ,
ಆಗಲೇ
ಕಾಲ
ಮಿಂಚಿತ್ತು.
ಜನರಿಗೆ
ವರ್ಮಾ
ಮಾಡಿದ
ಪ್ರಮಾದದ
ಅರಿವಾಗಿತ್ತು.
[ಕೆ.ಬಾಲಚಂದರ್
ಆರೋಗ್ಯ
ಗಂಭೀರ:
ಆಸ್ಪತ್ರೆಗೆ
ರಜನಿ
ಭೇಟಿ]
My
apologies
for
tweeting
about
Mr.Balachander
without
checking
on
the
rumourWishing
him
a
speedy
recoverry
—
Ram
Gopal
Varma
(@RGVzoomin)
December
17,
2014
ಸಂತೆಯಲ್ಲಿ ನಿಂತು ಬೆತ್ತಲಾದರು ಎಂಬ ಸ್ಥಿತಿ ಅನುಭವಿಸಿದ ವರ್ಮಾ ಮಾಡಿದ ತಪ್ಪಿಗೆ ಡಿ.17ರಂದು ಕ್ಷಮೆಯಾಚಿಸಿದ್ದಾರೆ. ಗಾಳಿಸುದ್ದಿಯನ್ನು ಕಿವಿಯೊಳಗೆ ಬಿಟ್ಟುಕೊಂಡರೆ ತಲೆ ಹಾಳು ಎಂಬ ಮಾತು ವರ್ಮಾ ಮರ್ಮಗೆ ಯಾವಾಗ ತಾಕುವುದೋ ಗೊತ್ತಿಲ್ಲ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ನಿರ್ದೇಶಕ ಕೆ. ಬಾಲಚಂದರ್ ಅವರು ತಮ್ಮ ಚಿತ್ರಗಳ ಮೂಲಕ ಕಮಲ್ ಹಾಸನ್, ರಜನಿಕಾಂತ್, ಪ್ರಕಾಶ್ ರೈ, ರಮೇಶ್ ಅರವಿಂದ್, ನಟಿ ಗೀತಾ ಸೇರಿದಂತೆ ಆನೇಕ ಸಿನಿತಾರೆಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.