Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಹೊಸ ಟೈಟಲ್
ರಿಯಲ್ ಸ್ಟಾರ್ ಉಪೇಂದ್ರ ಅವರು ಟೈಟಲ್ ಇಲ್ಲದೆಯೇ ಚಿತ್ರಗಳನ್ನು ಮಾಡಿ ಗೆದ್ದವರು. ಇದೀಗ ಅವರ ಚಿತ್ರಕ್ಕೇ ಶೀರ್ಷಿಕೆ ಸಮಸ್ಯೆ ಎದುರಾಗಿದೆ. ವಿಭೂತಿ, ತಿಲಕವೇ ತಮ್ಮ ಚಿತ್ರದ ಸಿಂಬಲ್. ಇದನ್ನು ಏನು ಬೇಕಾದರೂ ಕರೆದುಕೊಳ್ಳಿ ಎಂದು ಕೆಲದಿನಗಳ ಹಿಂದೆ ಚಿತ್ರದ ನಿರ್ದೇಶಕ ಶ್ರಿನಿವಾಸರಾಜು ಪತ್ರಿಕಾ ಪ್ರಕಟಣೆ ಕೊಟ್ಟಿದ್ದರು.
ಅದಕ್ಕೂ ಮೊದಲು ಚಿತ್ರಕ್ಕೆ 'ಬಸವಣ್ಣ' ಎಂದು ಹೆಸರಿಡಲಾಗಿತ್ತು. ಲಿಂಗಾಯಿತ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾದ ಮೇಲೆ ಬಸವಣ್ಣ ಶೀರ್ಷಿಕೆಯನ್ನು ಕೈಬಿಡಲಾಗಿತ್ತು. ಇದೀಗ ಚಿತ್ರಕ್ಕೆ 'ಶಿವಂ' ಎಂದು ಹೊಸ ಶೀರ್ಷಿಕೆ ಇಡಲಾಗಿದೆ. [ಉಪೇಂದ್ರ ಮುಂದಿನ ಚಿತ್ರಕ್ಕೆ ಏನಂತ ಕರೆಯಬೇಕು..?]
ಕೂಡಲೆ ಬ್ರಾಹ್ಮಣ ಸಮುದಾಯದ ಸಂಘಟನೆಗಳು ಆ ಶೀರ್ಷಿಕೆ ಕೈಬಿಡುವಂತೆ ಆಗ್ರಹಿಸಿದವು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆ ಬ್ರಾಹ್ಮಣ ಶೀರ್ಷಿಕೆ ವಿರುದ್ಧ ತಿರುಗಿಬಿತ್ತು. ವಿಧಿ ಇಲ್ಲದೆ ಬ್ರಾಹ್ಮಣ ಶೀರ್ಷಿಕೆಯನ್ನು ಕೈಬಿಟ್ಟ ಶ್ರೀನಿವಾಸರಾಜು ಕಡೆಗೆ ಸಿಂಬಲ್ ನಲ್ಲೇ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ವಿಭೂತಿ, ತಿಲಕ, ರುದ್ರಾಕ್ಷಿ, ತ್ರಿಶೂಲ ತೋರಿಸಿದರೆ ಜನ ಏನೆಂದು ಕರೆಯುವುದು. ಅವರವರ ಭಾವಕ್ಕೆ ಬಕುತಿಗೆ ತಕ್ಕಂತೆ ಕೆಲವರು ನಾಮ ಎಂದರೆ, ಕೆಲವರು ತ್ರಿನೇತ್ರ ಎಂದು, ಇನ್ನೂ ಕೆಲವರು ತಿಲಕ ಎಂದು ಕರೆಯುವಂತಾಯಿತು. ಕಡೆಗೆ ಈ ಗೊಂದಲವೇ ಬೇಡ ಎಂದು ಚಿತ್ರಕ್ಕೆ 'ಶಿವಂ' ಎಂದಿಡಲಾಗಿದೆ.
ಶಿವಂ ಎಂದು ಹೇಳಿ ಚಿತ್ರದಲ್ಲಿ ಕತ್ತಿ, ಪಿಸ್ತೂಲು ತೋರಿಸಿದರೆ ಶಿವನ ಭಕ್ತರು ಸುಮ್ಮನಿರುತ್ತಾರಾ? ಅವರು ಮೂರನೇ ಕಣ್ಣು ತೆರೆಯುವ ಎಲ್ಲಾ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆಯಾಗಿ ಉಪೇಂದ್ರ ಚಿತ್ರ ಬಿಡುಗಡೆಯವರೆಗೂ ಇನ್ನೇನೆಲ್ಲಾ ಕಾದಿದೆಯೋ ಏನೋ? (ಏಜೆನ್ಸೀಸ್)