Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಲ್ ಸ್ಟಾರ್ ಉಪ್ಪಿ2ಗೆ ಮತ್ತೆ ಒಗ್ಗರಣೆ ಹಾಕಿಲ್ಲ
ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಎಷ್ಟರಮಟ್ಟಿಗೆ ಹವಾ ಎಬ್ಬಿಸಿತ್ತು ಅನ್ನೋದು ನಿಮಗೆ ತಿಳಿದೇ ಇದೆ. ಇದೀಗ ಕೆಲವು ದಿನಗಳ ಹಿಂದೆ ಉಪೇಂದ್ರ ಅವರ 'ಉಪ್ಪಿ-ಟ್ಟು' ಬಗ್ಗೆ ಕೆಲವೊಂದು ಅಂತೆ-ಕಂತೆಗಳ ಸುದ್ದಿ ಹರಿದಾಡ್ತ ಇತ್ತು.
ಅದೇನಪ್ಪಾ ಅಂದ್ರೆ ರಿಯಲ್ ಸ್ಟಾರ್ ಅವರು ಉಲ್ಟಾ ಸರ್ಕಸ್ ಮಾಡುವುದರ ಜೊತೆಗೆ 'ನೋ ಎಕ್ಸ್ ಕ್ಯೂಸ್ ಮಿ' ಅಂತ ಎಲ್ಲರ ಕಾಲೆಳೆದು ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿ ಎಲ್ಲರು ಚಿತ್ರಮಂದಿರಕ್ಕೆ ನುಗ್ಗಿ ಬರುವಂತೆ ಮಾಡಿ ಸುದ್ದಿಯಾದ್ರು. ['ಉಪ್ಪಿಟ್ಟು' ರುಚಿಗೆ ಪಾಕಿಸ್ತಾನಿ ಕ್ಲೀನ್ ಬೌಲ್ಡ್ ಗುರು.!]
ಉಪೇಂದ್ರ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿದ್ದ 'ಉಪ್ಪಿ-2' ಚಿತ್ರದ ಬಗ್ಗೆ ಕೆಲವಾರು ಗಾಸಿಪ್ ಗಳು ಹರಿದಾಡುತ್ತಿದ್ದು, ಉಪ್ಪಿ ನಿರ್ದೇಶನದ ಚಿತ್ರ ಬಿಡುಗಡೆಯಾದ ನಂತರ ಈ ನಡುವೆ ಕೆಲವು ದಿನಗಳ ಹಿಂದೆ 15 ನಿಮಿಷಗಳಷ್ಟು ಹೆಚ್ಚಿನ ಸೀನ್ ಗಳನ್ನು ಚಿತ್ರಕ್ಕೆ ಸೇರಿಸಲಾಗಿದೆ ಎಂದು ಇಡೀ ಗಾಂಧಿನಗರದಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ಹರಿದಾಡುತ್ತಿತ್ತು.
ಇದೀಗ ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ 'ಉಪ್ಪಿ-2' ಚಿತ್ರದ ಸಂಕಲನಕಾರ ಶ್ರೀ ಕ್ರೇಜಿ ಮಿಂಡ್ಝ್ ಅವರು ಇದು ಕೆಲವರ ಊಹೆ ಅಷ್ಟೆ. ಬದಲಾಗಿ ಚಿತ್ರತಂಡದವರು ಹೆಚ್ಚಿನದನ್ನು ಏನು ಸೇರಿಸುವ ಪ್ರಯತ್ನ ಮಾಡಲಿಲ್ಲ ಆದರೆ ಚಿತ್ರವನ್ನು ನೀಟಾಗಿ ಜೋಡಿಸುವ ಕೆಲಸ ಮಾಡುತ್ತಾರೆ ಬಿಟ್ಟರೆ ಹೆಚ್ಚಿನ ಸೀನ್ ಗಳನ್ನು ಸೇರಿಸಲು ಯಾರು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.['ಬಾಹುಬಲಿ' ಆಯ್ತು, 'ಉಪ್ಪಿಟು' ಗಣೇಶ ಉಲ್ಟಾ ನಿಂತ ನೋಡಿ..]
ಇನ್ನು ಕೆಲವು ಚಿತ್ರಗಳಲ್ಲಿ ಅನಿವಾರ್ಯ ಎಂದಾಗ ಮಾತ್ರ ಕೆಲವಾರು ಸೀನ್ ಗಳನ್ನು ಸೇರಿಸುತ್ತಾರೆ ಬಿಟ್ಟರೆ ಇನ್ನುಳಿದ ಸಂದರ್ಭಗಳಲ್ಲಿ ಸೇರಿಸುವುದು ಬಹಳ ವಿರಳ ಎಂದು ಅವರು ನುಡಿದಿದ್ದಾರೆ.['ಬಾಹುಬಲಿ'ಯನ್ನ ಕಟ್ಟಪ್ಪ ಯಾಕೆ ಕೊಂದ? ಉಪ್ಪಿ ಬಿಚ್ಚಿಟ್ಟ ರಹಸ್ಯ]
ಉದಾಹರಣೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಏಕಾಂಗಿ' ಚಿತ್ರಕ್ಕೆ ಬಿಡುಗಡೆಯಾದ ಮೂರು ದಿನಗಳ ನಂತರ ಕೆಲವೊಂದು ಸೀನ್ ಗಳನ್ನು ಸೇರಿಸಲಾಗಿತ್ತು. ಜೊತೆಗೆ ಡಾ.ರಾಜ್ ಕುಮಾರ್ ಅವರ 'ಬಿಡುಗಡೆ' ಚಿತ್ರದ ಕ್ಲೈಮ್ಯಾಕ್ಸ್ ನ್ನು ಅಭಿಮಾನಿಗಳ ಒತ್ತಾಯದ ಮೇರೆಗೆ ಬದಲಾಯಿಸಲಾಗಿತ್ತು. ಆದರೆ ಇಂತಹ ಬದಲಾವಣೆ ಬಹಳ ವಿರಳ ಎಂದು 'ಉಪ್ಪಿ 2' ಚಿತ್ರದ ಸಂಕಲನಕಾರ ಶ್ರೀ ಕ್ರೇಜಿ ಅವರು ಸ್ಪಷ್ಟಪಡಿಸಿದ್ದಾರೆ.
ಒಟ್ನಲ್ಲಿ 'ಉಪ್ಪಿ 2' unknown ಅಂತ ಪ್ರೇಕ್ಷಕರ ತಲೆಗೆ ಹುಳ ಬಿಟ್ಟು ಇದು ಬುದ್ದಿವಂತರಿಗೆ ಮಾತ್ರ ಎಂದು ಸಾರಿ ಹೇಳಿದ ಉಪೇಂದ್ರ ಅವರ ಉಪ್ಪಿ-ಟ್ಟು ಬಿಡುಗಡೆಯಾದ ದಿನಗಳಲ್ಲಿ ಬಿಸಿ ಬಿಸಿ ಯಾಗಿ ಸೇಲ್ ಆಗಿದ್ದಂತೂ ನಿಜ.