Don't Miss!
- News ಹಿಂದೂ ಯುವತಿ ಬರ್ಬರ ಹತ್ಯೆ ಪ್ರಕರಣ; ಇದೊಂದು ಲಬ್ ಜಿಹಾದ್ ಎಂದ ಜೋಶಿ: ಸಿದ್ದರಾಮಯ್ಯ ಹೇಳಿದ್ದೇನು?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರಂಜೀವಿಗೆ ಆಕ್ಷನ್ ಕಟ್ ಹೇಳ್ತಾರಾ ಉಪೇಂದ್ರ?
ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಲಿರುವ 150ನೇ ಚಿತ್ರದ ಬಗ್ಗೆ ಟಾಲಿವುಡ್ ನಲ್ಲಿ ಹೈ ಎಕ್ಸ್ ಪೆಕ್ಟೇಷನ್ಸ್ ಇದೆ. ಎಲ್ಲರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಬೇಕು ಅನ್ನುವ ಕಾರಣಕ್ಕೆ ಚಿರಂಜೀವಿ ಕೂಡ ಉತ್ತಮ ಸ್ಕ್ರಿಪ್ಟ್ ಹುಡುಕಾಟದಲ್ಲಿದ್ದಾರೆ.
ಪೂರಿ ಜಗನ್ನಾಥ್, ವಿ.ವಿ.ವಿನಾಯಕ್, ಎಸ್.ಎಸ್.ರಾಜಮೌಳಿ ಸೇರಿದಂತೆ ಟಾಲಿವುಡ್ ನ ಖ್ಯಾತ ನಿರ್ದೇಶಕರ ಹೆಸರು ಚಿರಂಜೀವಿ 150ನೇ ಸಿನಿಮಾದೊಂದಿಗೆ ತಳುಕು ಹಾಕಿಕೊಂಡಿತ್ತು. ಇದೀಗ ಇದೇ ನಿರ್ದೇಶಕರ ಪಟ್ಟಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೆಸರು ಕೂಡ ಸೇರ್ಪಡೆಯಾಗಿದೆ. [ಚಿರಂಜೀವಿ 150ನೇ ಚಿತ್ರಕ್ಕೆ ತಮಿಳಿನ ಶಂಕರ್ ಆಕ್ಷನ್ ಕಟ್]
ತಮ್ಮ ಚಿತ್ರಕ್ಕೆ ನಿರ್ದೇಶನ ಮಾಡುವಂತೆ ಮೆಗಾ ಸ್ಟಾರ್ ಚಿರಂಜೀವಿ, ರಿಯಲ್ ಸ್ಟಾರ್ ಉಪೇಂದ್ರಗೆ ಆಫರ್ ನೀಡಿದ್ದರಂತೆ. ಹಾಗಂತ ಖುದ್ದು ಉಪೇಂದ್ರ ಬಹಿರಂಗ ಪಡಿಸಿದ್ದಾರೆ.
'ಉಪೇಂದ್ರ 2' ಚಿತ್ರದ ಕುರಿತು ತೆಲುಗಿನ ಖಾಸಗಿ ವಾಹಿನಿಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಈ ವಿಚಾರವನ್ನ ಬಾಯ್ಬಿಟ್ಟಿದ್ದಾರೆ. ''ಹಲವು ವರ್ಷಗಳ ಹಿಂದೆಯೇ ಚಿರಂಜೀವಿ ಅವರ ಸಿನಿಮಾವನ್ನ ನಿರ್ದೇಶಿಸುವ ಚಾನ್ಸ್ ಸಿಕ್ಕಿತ್ತು. ನಾನು ಹಲವು ಕಥೆಗಳನ್ನ ಚಿರಂಜೀವಿ ಅವರಿಗೆ ಹೇಳಿದ್ದೆ. ಆದ್ರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಸೆಟ್ಟೇರಲಿಲ್ಲ. 150ನೇ ಚಿತ್ರ ನಿರ್ದೇಶಿಸುವ ಚಾನ್ಸ್ ಸಿಕ್ಕರೆ, ಅದು ನನ್ನ ಅದೃಷ್ಟ'' ಅಂತ ಉಪೇಂದ್ರ ಹೇಳಿದ್ದಾರೆ.
ಟಾಲಿವುಡ್ ನಲ್ಲಿ 'ಉಪೇಂದ್ರ-2' ಹಿಟ್ ಆಗಿದೆ. ಸಿನಿಮಾ ನೋಡಿ ಚಿರಂಜೀವಿ ಇಂಪ್ರೆಸ್ ಅಗಿದ್ದರೆ, ಅವರ 150ನೇ ಸಿನಿಮಾ ಉಪೇಂದ್ರ ಪಾಲಾದರೂ ಅಚ್ಚರಿ ಇಲ್ಲ. [ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]
ಬರೀ ನಟನಾಗಿ ಮಾತ್ರ ಅಲ್ಲ, ರಿಯಲಿಸ್ಟಿಕ್ ಡೈರೆಕ್ಟರ್ ಆಗಿ ಉಪೇಂದ್ರ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಮಂದಿಯನ್ನೂ ಮೋಡಿ ಮಾಡಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಾ?