Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜತ ಪರದೆ ಮೇಲೆ 'ಹುಚ್ಚುಡುಗ್ರು' ಸಾಹಸಗಳು
ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ಪಡೆದ ಕನ್ನಡ ಸಿನೆಮಾ 'ಹುಚ್ಚುಡುಗ್ರು' ಫುಲ್ ಊಟ ಬೀದಿ ಬೆಂಕಿಪಟ್ನಾ... ಈ ವಾರ (ಏಪ್ರಿಲ್ 4) ರಜತ ಪರದೆಯ ಮೇಲೆ ರಾರಾಜಿಸಲಿದೆ. 'ಭಗವತಿ ಪಿಕ್ಚರ್ಸ್' ಚಿತ್ರದಲ್ಲಿ ನಾಲ್ಕು ನಾಯಕರುಗಳ ಒಳಗೊಂಡ ಚಿತ್ರವನ್ನು ವೇದಮೂರ್ತಿ ಹಾಗೂ ರೋಹಿಣಿ ನಿರ್ಮಿಸಿದ್ದಾರೆ.
ರೇಡಿಯೊ ಜಾಕಿ ಆರ್ ವಿ ಪ್ರದೀಪ ಈ 'ಹುಚ್ಚುಡುಗ್ರು' ಮೂಲಕ ನಿರ್ದೇಶನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಯಂಗ್ ಹುಡುಗರು ಯಂಗ್ ಯೆಂಗೋ ಆಡುವುದು ಈ ಚಿತ್ರದ ತಮಾಷೆ ವಿಚಾರ. ನಿರ್ದೇಶಕ ಪ್ರೇಮ್ ಅವರ ಬಳಿ 'ಕರಿಯ' ಸಿನೆಮಾದಿಂದ 'ರಾಜ್ ದಿ ಶೋಮನ್' ವರೆಗೆ ಸಹಾಯಕರಾಗಿ ದುಡಿದ ರಘು ಹಾಸನ್ ಅವರು ಚಿತ್ರದ ಕಥೆ, ಚಿತ್ರಕಥೆ, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. [ಶಿವ ಶಿವ ಪೋಲಿ ಹುಡುಗ್ರಲ್ಲ ಕನ್ನಡದ 'ಹುಚ್ಚುಡುಗ್ರು']
'ಹುಚ್ಚುಡುಗರು' ಚಿತ್ರದ ಶೀರ್ಷಿಕೆ ಗೀತೆಯನ್ನು ನಿರ್ದೇಶಕ ಪ್ರೇಮ್ ಹಾಡಿದ್ದು ಈಗಾಗಲೆ ಅದು ಜನಪ್ರಿಯ ಆಗಿದೆ. 'ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಡ್ಡ, ಲೂಸು ತಲೆ ಹುಚ್ಚುಡುಗರು...ಎಂಬ ಹಾಡಿನ ಮುಲಕವೇ ಹುಚ್ಚುಡುಗ್ರು ಚಿತ್ರ ಗಮನಸೆಳೆದಿರುವುದು ವಿಶೇಷ. ಚಿತ್ರದ ತಾರಾಗಣದಲ್ಲಿ ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ ನಾಲ್ಕು 'ಹುಚ್ಚು ಹುಡುಗ್ರು'. ಅದಿತಿ ರಾವ್ ಚಿತ್ರದ ನಾಯಕಿ, ರವಿಶಂಕರ್ ಚಿತ್ರದ ಖಳ ನಟ. (ಒನ್ಇಂಡಿಯಾ ಕನ್ನಡ)