Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಚ್ಚಿಯಲ್ಲಿ ಗಲ್ಲಿ ಕ್ರಿಕೆಟ್ ಆಡಿದ ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್ ಯಾರಿಗ್ತಾನೆ ಗೊತ್ತಿಲ್ಲ ಹೇಳಿ..ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಯಶ್ ಗೆ ಅಭಿಮಾನಿ ಬಳಗ ದೊಡ್ಡದಿದೆ. ಆದ್ರೆ, ಕರ್ನಾಟಕದ ಆಚೆ..?? ಸ್ಯಾಂಡಲ್ ವುಡ್ ಗಡಿ ದಾಟಿದರೆ ಯಶ್ ಗೆ ಸಿಗುವ ಪ್ರತಿಕ್ರಿಯೆ ಏನು..? ಈ ಪ್ರಶ್ನೆ ಬಹುಶಃ ಯಶ್ ಗೆ ಕಾಡ್ತಿತ್ತೇನೋ...ಅದನ್ನ ತಿಳಿದುಕೊಳ್ಳುವುದಕ್ಕೆ ಒಂದು ಪ್ರಯೋಗ ಮಾಡಿದ್ದಾರೆ ಯಶ್.
ಮೊನ್ನೆಯಷ್ಟೇ ಕೆಲಸದ ಮೇಲೆ ಯಶ್ ಕೊಚ್ಚಿಗೆ ಹೋಗಿದ್ರಂತೆ. ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡೋಣ ಅಂತ ಅವರಿಗೆ ಅನಿಸಿಬಿಟ್ಟಿದೆ. ಅಲ್ಲೇ ಪಕ್ಕದಲ್ಲೇ ಇದ್ದ ಗ್ರೌಂಡ್ ಗೆ ತೆರಳಿ, ಆಟ ಆಡ್ತಿದ್ದ ಹುಡುಗರನ್ನ ಬ್ಯಾಟಿಂಗ್ ಚಾನ್ಸ್ ಕೇಳಿದ್ದಾರೆ. ಅವರು ಓಕೆ ಅಂದಿದ್ದಾರೆ.
ಕೊಚ್ಚಿ ಹುಡುಗರಿಗೆ ಯಶ್ ಹಿಂದೆ ಮುಂದೆ ಗೊತ್ತಿಲ್ಲದ ಕಾರಣ, ಸಾಮಾನ್ಯ ಹುಡುಗನಂತೆ ಟ್ರೀಟ್ ಮಾಡಿದ್ದಾರೆ. ಅಲ್ಲದೇ ಬ್ಯಾಟಿಂಗ್ ನಲ್ಲಿ ಕೊನೆಗೆ ಚಾನ್ಸ್ ಕೊಟ್ಟಿದ್ದಾರೆ.
'ಕೊಚ್ಚಿ ಹುಡುಗರಲ್ಲಿ ನಾನೂ ಒಬ್ಬ' ಅಂತ ಯಶ್ ಸನ್ನಿವೇಶವನ್ನ ಎಂಜಾಯ್ ಮಾಡುವಷ್ಟರಲ್ಲಿ ಒಂದು ಟ್ವಿಸ್ಟ್ ಸಿಕ್ಕಿದೆ. ಮ್ಯಾಚ್ ಮುಗಿಯುವ ಹೊತ್ತಿಗೆ, ಗ್ರೌಂಡ್ ಗೆ ಬಂದ ಕನ್ನಡಿಗರೊಬ್ಬರು ಯಶ್ ರನ್ನ ಕಂಡುಹಿಡಿದು ಬಿಟ್ಟಿದ್ದಾರೆ. [ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]
ಆಗ್ಲೇ ನೋಡಿ, ಗ್ರೌಂಡ್ ನಲ್ಲಿ 'ರಾಮಾಚಾರಿ' ಹವಾ ಶುರುವಾಗಿದ್ದು. ಯಶ್ ಹೀರೋ ಅಂತ ಗೊತ್ತಾಗ್ತಿದ್ದಂತೆ ಬ್ಯಾಟ್ ಬಿಸಾಕಿದ ಎಲ್ಲಾ ಕೊಚ್ಚಿ ಯುವಕರು ಸೆಲ್ಫಿ ತೆಗಿಸಿಕೊಳ್ಳುವುದಕ್ಕೆ ಮುಂದಾದರು.
ಈ ಬಗ್ಗೆ ಯಶ್, ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿದ್ದಾರೆ. ಅಲ್ಲದೇ ಈ ಘಟನೆಯಿಂದ ಅವರ ವೃತ್ತಿ ಮೇಲಿನ ಭಕ್ತಿ, ಗೌರವ ಮತ್ತು ಜವಾಬ್ದಾರಿ ಡಬಲ್ ಆಗಿದೆ ಅಂತ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.