Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ’ರಣವಿಕ್ರಮ’ ಚಿತ್ರಕ್ಕೆ ನಾಯಕಿ ಅಂತಿಮ
ಚಿತ್ರದ ಮಹೂರ್ತದಿಂದಲೇ ಕ್ರೇಜ್ ಹುಟ್ಟಿಸಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮುಂದಿನ ಚಿತ್ರ 'ಧೀರ ರಣವಿಕ್ರಮ' ಚಿತ್ರಕ್ಕೆ ನಾಯಕಿ ಯಾರು ಎನ್ನುವ ಊಹಾಪೋಹಗಳಿಗೆ ತೆರೆಬಿದ್ದಿದೆ.
ಚಿತ್ರಕ್ಕೆ ಪಕ್ಕದ ತಮಿಳು, ತೆಲುಗು ಚಿತ್ರೋದ್ಯಮದಿಂದ ತಮನ್ನಾ, ಶೃತಿ ಹಾಸನ್ ಹೀಗೆ ಹಲವು ನಾಯಕಿಯರುಗಳ ಹೆಸರು ಚಾಲ್ತಿಯಲ್ಲಿತ್ತು. ಈಗ ಚಿತ್ರದಲ್ಲಿನ ಇಬ್ಬರು ಹಿರೋಯಿನ್ ಗಳ ಪೈಕಿ ಒಬ್ಬರ ಹೆಸರನ್ನು ಚಿತ್ರದ ನಿರ್ಮಾಪಕ ಜಯಣ್ಣ ಫೈನಲ್ ಮಾಡಿದ್ದಾರೆ.
ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ರಚಿತಾ ರಾಮ್ 'ಧೀರ ರಣವಿಕ್ರಮ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. [ರಣವಿಕ್ರಮ ಪವರ್ ಫುಲ್ ಸ್ಟಾರ್ಟ್]
ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡವಿದ್ದು ಯುಗಾದಿ ಹಬ್ಬದ ವೇಳೆಗೆ ಚಿತ್ರದ ಸಂಪೂರ್ಣ ತಾರಾಗಣ ಅಂತಿಮವಾಗಲಿದೆ ಎಂದು ಜಯಣ್ಣ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ನಿರ್ದೇಶಕರ ಪ್ರಕಾರ
ಪುನೀತ್ ಈ ಚಿತ್ರದಲ್ಲಿ ವಿದ್ಯಾರ್ಥಿ ಮತ್ತು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾ. ಚಿತ್ರದಲ್ಲಿ ಇಬ್ಬರು ನಾಯಕಿಯರುಗಳು ಇದ್ದು, ಇದರಲ್ಲಿ ಒಬ್ಬರಾಗಿ ರುಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರದ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.
ಪಾರ್ವತಿ ಮೆನನ್ ಎನ್ನಲಾಗುತ್ತಿತ್ತು
ಮಿಲನ ಮತ್ತು ಪೃಥ್ವಿ ಚಿತ್ರದ ಮೂಲಕ ಪುನೀತ್ ಗೆ ಫೆವರೇಟ್ ಜೋಡಿಯಾಗಿದ್ದ ಪಾರ್ವತಿ ಮೆನನ್ ಅವರದ್ದು ಚಿತ್ರದಲ್ಲಿ ಗಮನಾರ್ಹ ಪಾತ್ರವಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ರುಚಿತಾ ರಾಮ್
ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ರುಚಿತಾ ರಾಮ್, ನಂತರ ಗಣೇಶ್ ಅಭಿನಯದ ದಿಲ್ ರಂಗೀಲಾ ಚಿತ್ರದಲ್ಲೂ ನಾಯಕಿಯಾಗಿದ್ದರು. ಈಗ ದರ್ಶನ್, ಅಂಬರೀಶ್ ಪ್ರಮುಖ ಭೂಮಿಕೆಯಲ್ಲಿರುವ 'ಅಂಬರೀಷ್' ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.
ಅಪ್ಪು ಜನ್ಮದಿನದಂದು ಮಹೂರ್ತ
ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು (ಮಾ 17) ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತ್ತು. ಸಾಧಾರಣವಾಗಿ ಪುನೀತ್ ಚಿತ್ರಗಳಿಗೆ ಕ್ಲಾಪ್ ಮಾಡುತ್ತಿದ್ದ ರವಿಚಂದ್ರನ್ ಅಂದು ಗೈರುಹಾಜರಾಗಿದ್ದರು. ಬದಲಿಗೆ ಶಿವರಾಜ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು.
ಖಡಕ್ ಪೊಲೀಸ್ ಆಫೀಸರ್
ಪವರ್ ಸ್ಟಾರ್ ಎಂತಹಾ ಪಾತ್ರಗಳನ್ನ ಮಾಡಿದ್ರೂ ಲೀಲಾಜಾಲವಾದ ಅಭಿನಯ ನೀಡಿರೋ ನಟ. ಆದ್ರೆ ಪುನೀತ್ 'ಧೀರ ರಣವಿಕ್ರಮ' ಚಿತ್ರದಲ್ಲಿ ಮೊದಲ ಬಾರಿಗೆ ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡ್ತಿದ್ದಾರೆ.