Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಂದ್ರಲೇಖ'ಗೆ ಬೆನ್ನುತಟ್ಟಿದ ಸ್ಯಾಂಡಲ್ ವುಡ್ ಸ್ಟಾರ್ಸ್
ಜನ ಮನ್ನಣೆ ಗಳಿಸಿ ಮುನ್ನುಗುತ್ತಿರುವ ಹಾಸ್ಯ ರಂಜನೆಯ ಜೊತೆಗೆ ಹಾರರ್ ಅಂಶ ಇಟ್ಟುಕೊಂಡಿರುವ 'ಫನ್ ಫಿಯರ್ ರೊಮಾನ್ಸ್' ಚಿತ್ರ 'ಚಂದ್ರಲೇಖ'. ಇತ್ತೀಚಿಗೆ ಒಂದು ವಿಶೇಷ ಪ್ರದರ್ಶನವನ್ನು ಮಲ್ಲೇಶ್ವರದ ಮಂತ್ರಿ ಮಾಲ್ ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು.
ಚಿತ್ರ ತಂಡದ ಜೊತೆಗೆ 'ಚಂದ್ರಲೇಖ' ಸಿನೆಮವನ್ನು ವೀಕ್ಷಿಸಲು ನಾಯಕಿ ರಾಧಿಕಾ ಪಂಡಿತ್, ಮೇಘನಾ, ಅಜಯ್ ರಾವ್, ಶ್ರೀಮುರಳಿ, ವಿಜಯ ರಾಘವೇಂದ್ರ, ನಿರ್ಮಾಪಕ ರಾಮು, ಶ್ರೀನಿವಾಸಮೂರ್ತಿ, ಲೋಕನಾಥ್, ನಿರ್ದೇಶಕ ಸುನಿ, ಶಶಾಂಕ್ ಹಾಗೂ ಇನ್ನಿತರರು ಆಗಮಿಸಿದ್ದರು. [ಚಂದ್ರಲೇಖ ಚಿತ್ರವಿಮರ್ಶೆ]
ಇದಿಷ್ಟೇ ಅಲ್ಲದೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಚಾಕಚಕ್ಯತೆ, ಸುಮಧುರ ಹಾಡುಗಳು, ನಾಯಕ ಚಿರಂಜೀವಿ ಸಾರ್ಜಾ ಹಾಗೂ ಸಾನ್ವಿ ಶ್ರೀವತ್ಸ ಅವರ ಅಭಿನಯವನ್ನು ಪ್ರಶಂಸಿದರು.
ತೆಲುಗಿನ ಯಶಸ್ವಿ ಚಿತ್ರ 'ಪ್ರೇಮ ಕಥಾ ಚಿತ್ರಂ' ರೀಮೇಕ್ 'ಚಂದ್ರಲೇಖ'. ರೀಮೇಕ್ ಚಿತ್ರಗಳನ್ನು ಮಾಡುವುದರಲ್ಲಿ ಬಹಳಷ್ಟು ನುರಿತಿರುವ ಓಂ ಪ್ರಕಾಶ್ ರಾವ್ ಅವರು ಈ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ. ಒಂದೇ ಮನೆಯಲ್ಲಿ ನಡೆಯುವ ಚಿತ್ರದ ಬಹುತೇಕ ಕಥೆ ಪ್ರೇಕ್ಷಕರನ್ನು ಸೀಟಿಗೆ ಅಂಟಿಕುಳಿತುಕೊಳ್ಳುವಂತೆ ಮಾಡುತ್ತದೆ. (ಒನ್ಇಂಡಿಯಾ ಕನ್ನಡ)