Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖಳನಟ ರವಿಶಂಕರ್ ಬಿಜೆಪಿ ಸೇರೋದು ನಿಜನಾ?
ಸ್ಯಾಂಡಲ್ ವುಡ್ ತಾರೆಗಳಿಗೂ ರಾಜಕೀಯಕ್ಕೂ ಕುಚಿಕು ಕುಚಿಕು ಸಂಬಂಧ. ಸಾಕಷ್ಟು ತಾರೆಗಳು ರಾಜಕೀಯ ಕ್ಷೇತ್ರಕ್ಕೆ ಬಂದು ಅಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ, ಮೂಡಿಸುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಖಳನಟರಿಗೂ ರಾಜಕೀಯಕ್ಕೂ ಬಿಡಿಸಲಾರದ ಬಂಧ. ಅದೇಕೋ ಏನೋ ಖಳನಟರನ್ನು ರಾಜಕೀಯ ಪಕ್ಷಗಳು ಗಕ್ಕನೆ ಸೆಳೆದುಕೊಂಡು ಬಿಡುತ್ತವೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ಪ್ರವರ್ಧಮಾನಕ್ಕೆ ಬಂದಂತಹ ಖಳನಟ ರವಿಶಂಕರ್ ರಾಜಕೀಯಕ್ಕೆ ಅಡಿಯಿಡಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಅವರು ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದು ಬಹಳಷ್ಟು ಚರ್ಚೆಗೆ ನಾಂದಿಹಾಡಿದೆ. ಇಷ್ಟಕ್ಕೂ ರವಿಶಂಕರ್ ರಾಜಕೀಯಕ್ಕೆ ಬರ್ತಾರಾ ಎಂದರೆ ಅದಕ್ಕೆ ಉತ್ತರ ಕಾಲವೇ ಹೇಳಬೇಕು. ಏಕೆಂದರೆ ಯಾವುದೂ ಇನ್ನೂ ಅಂತಿಮವಾಗಿಲ್ಲ. [ಅಭಿನೇತ್ರಿ ಚಿತ್ರ ವಿಮರ್ಶೆ]
ತಾನು ಮೊದಲಿಂದಲೂ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದೇನೆ. ಈ ಪಕ್ಷ ಸೇರಬೇಕೆಂದಿದ್ದೇನೆ ಎಂದಿದ್ದಾರೆ ರವಿಶಂಕರ್. ಈ ನಟನಿಗೆ ಅವರದೇ ಆದಂತಹ ಅಭಿಮಾನಿ ಬಳಗವಿದೆ. ನಾಯಕನಟನಷ್ಟೇ ತೂಕವುಳ್ಳ ಪಾತ್ರಗಳಲ್ಲಿ ರವಿಶಂಕರ್ ಮಿಂಚುತ್ತಿದ್ದಾರೆ.
ತೆಲುಗು, ತಮಿಳು ಚಿತ್ರಗಳಲ್ಲೂ ಬಿಜಿಯಾಗಿದ್ದು ಸಾಕಷ್ಟು ಕಲಾವಿದರಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ರವಿಶಂಕರ್ ಗುರುತಿಸಿಕೊಂಡವರು. ಇವರ ಸಹೋದರ ಸಾಯಿಕುಮಾರ್ ಅವರು ಈಗಾಗಲೆ ಬಿಜೆಪಿಯಲ್ಲಿದ್ದು, ಅಣ್ಣನ ಸಹಕಾರವೂ ರವಿಶಂಕರ್ ಅವರಿಗೆ ಇದ್ದೇ ಇದೆ. (ಏಜೆನ್ಸೀಸ್)