Don't Miss!
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Automobiles ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೈಲಿನಲ್ಲಿ ಸಂಜಯ್ ದತ್ ದಿನಗೂಲಿ 25 ರೂ!
ಮುಂಬಯಿ ಸರಣಿ ಬಾಂಬ್ ಸ್ಫೋಟದಲ್ಲಿ ಶಿಕ್ಷೆಗೆ ಗುರಿಯಾಗಿ 42 ತಿಂಗಳ ಜೈಲು ವಾಸ ಅನುಭವಿಸಿತ್ತಾ, ಯೆರವಾಡ ಜೈಲಿನಲ್ಲಿ ಸಂಜಯ್ ದತ್ ಕಾಲ ಕಳೆಯ ಬೇಕಾಗಿದೆ. ಮುನ್ನಾಭಾಯಿ ಜೈಲಿನಲ್ಲಿ ಸುಮ್ಮನೆ ಕೂರುವಂತಿಲ್ಲ. ಇತರ ಕೈದಿಗಳ ಜೊತೆ ಸೇರಿ ಕೆಲಸ ಮಾಡಬೇಕು.
ಕಳೆದ ವಾರ ಪುಣೆಯ ಜೈಲಿಗೆ ಆಗಮಿಸಿದ ಸಂಜು ಬಾಬಾಗೆ ಏನು ಕೆಲಸ ಕೊಡಬೇಕು ಎಂದು ಜೈಲಿನ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು. ಕೊನೆಗೂ ಪೇಪರ್ ಬ್ಯಾಗ್ ತಯಾರಿಸುವ ಕೆಲಸವನ್ನು ಸಂಜಯ್ ದತ್ ಗೆ ವಹಿಸಲಾಗಿದೆ.
ಸಂಜು ಬಾಬಾಗೆ ಸದ್ಯ ಬ್ಯಾಗ್ ತಯಾರಿಸುವ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ದತ್ 6 ರಿಂದ 8 ಕೆಜಿ ತೂಕ ಹೊರಬಲ್ಲ ಉತ್ತಮ ಗುಣಮಟ್ಟದ ಪೇಪರ್ ಚೀಲಗಳನ್ನು ತಯಾರಿಸಬೇಕು. ಅದಕ್ಕಾಗಿ ಅವರಿಗೆ ಸದ್ಯ 25 ರೂ. ವೇತನ ನೀಡಲಾಗುತ್ತದೆ.
ಮುನ್ನಾಭಾಯಿ ಆಸಕ್ತಿಯಿಂದ ಕೆಲಸ ಕಲಿತು, ಕುಶಲತೆಯಿಂದ ಬ್ಯಾಗ್ ತಯಾರಿಸಿದರೆ, ಅವರಿಗೆ 40 ರೂ. ಸಂಬಳ ನೀಡಲಾಗುವುದು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ದಿನವೊಂದಕ್ಕೆ ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಈಗ ರೂಪಾಯಿ ಲೆಕ್ಕದಲ್ಲಿ ಸಂಬಳ ಪಡೆಯಲಿದ್ದಾರೆ.
ಜೈಲಿನ ಇತರ ಕೈದಿಗಳಂತೆ ಸಂಜುಬಾಬಾಗೂ ದಿನಚರಿ ಇರುತ್ತದೆ. ಆದರಂತೆ ಅವರು ಕೆಲಸ ನಿರ್ವಹಿಸಿ, ಸಂಬಳ ಪಡೆಯಬೇಕು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಹೇಳಿಕೊಟ್ಟ ಕೆಲಸವನ್ನು ದತ್ ಶ್ರದ್ಧೆಯಿಂದ ಕಲಿಯುತ್ತಿದ್ದಾರಂತೆ.
ಕಠಿಣ ಕೆಲಸದ ಬೇಡಿಕೆ : ಕಠಿಣ ಪರಿಶ್ರಮವಿರುವ ಕೆಲಸ ನೀಡಿ, ಮೈ ಮುರಿದು ಕೆಲಸ ಮಾಡಿದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಸಂಜುಬಾಬಾ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಸದ್ಯ ಸಂಜಯ್ ದತ್ ಕೆಲಸವನ್ನು ಬದಲಾವಣೆ ಮಾಡಲು ನಿರಾಕರಿಸಿರುವ ಅಧಿಕಾರಿಗಳು ಪೇಪರ್ ಬ್ಯಾಗ್ ಕೆಲಸವನ್ನು ಮುಂದುವರೆಸುವಂತೆ ಸಲಹೆ ನೀಡಿದ್ದಾರೆ.