Don't Miss!
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರ್ವರ ವೀಕ್ಷಣೆಗೆ 'ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ' ಸಿದ್ಧ
16ನೇ ಶತಮಾನದ ಸರ್ವಜ್ಞನ ನೆನಪು ಬುಲ್ ಟೆಂಪಲ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಂಭವಾಗಿ ಹಲವಾರು ಚಾರಿತ್ರಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ ಚಿತ್ರ. ಅಂದು ಅಣ್ಣಾವ್ರು 'ಸರ್ವಜ್ಞ' ಆಗಿ ಅಭಿನಯಿಸಿದ್ದರು. ಇಂದು ಸಂತೋಷ್ ಎಂಬ ನವಯುವಕ ಮಾತೃಭೂಮಿ ಲಾಂಛನದಲ್ಲಿ ಶಿವಕುಮಾರ್ ಅವರ ನಿರ್ಮಾಣ ನಿರ್ದೇಶನದಲ್ಲಿ ಮುಖ್ಯ ಪಾತ್ರವನ್ನು 'ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ' ಸಿನೆಮಾದಲ್ಲಿ ಅಭಿನಯಿಸಿದ್ದಾರೆ.
ಬಾಲ ಸರ್ವಜ್ಞನಾಗಿ ಮಾಸ್ಟರ್ ಚಿರಾಗ್, ಸರ್ವಜ್ಞ ಆಗಿ ಸಂತೋಷ್, ಗುರುವಾಗಿ ಶ್ರೀನಿವಾಸಮೂರ್ತಿ. ಬಸವರಸ್ ಆಗಿ ರಾಮಕೃಷ್ಣ, ಮಾಲಿ ಆಗಿ ಪವಿತ್ರಾ ಲೋಕೇಶ್ ಹಾಗೂ ಇನ್ನಿತರರು ಅಭಿನಯಿಸಲಿದ್ದಾರೆ. ಡಾಕ್ಟರ್ ಬಿ ಎಸ್ ಸ್ವಾಮಿ ಅವರ ಸಂಭಾಷಣೆ, ರಾಜ್ ಭಾಸ್ಕರ್ ಅವರ ಸಂಗೀತ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
1969ರಿಂದ ಸಿನಿಮಾ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶಿವಕುಮಾರ್ ಅವರು ಉತ್ತಂಗಿ ಚನ್ನಬಸಪ್ಪ ಅವರ ದಾಖಲಿಸಿರುವ 2500 'ಶ್ರೀ ಸರ್ವಜ್ಞ' ವಚನಗಳನ್ನು ಓದಿ ತಿಳಿದು ಈ ಸಿನಿಮಾಕ್ಕೆ 250 ವಚನಗಳನ್ನು ಐದು ಹಾಡುಗೊಳೊಂದಿಗೆ ಮುದುಕುತೋರೈ, ತಲಕಾಡ್, ಅಂಬಾಲಾ, ಗದಗ್, ಕಾಶಿ, ಗಯ, ಹಿಮಾಲಯ ಹಾಗೂ ಮೈಸೂರಿನ ಆನೆಗುಂದಿ ಯಲ್ಲಿ ಇರುವ ಪ್ರಾಚೀನ ಮನೆಯೊಂದರಲ್ಲಿ 42 ದಿವಸಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)