Don't Miss!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸತ್ಯಾನಂದ' ಚಿತ್ರಕ್ಕೆ ಹೊಸ ಹೆಸರು 'ಯಾರಿವನು'
ಕಡೆಗೂ 'ಸತ್ಯಾನಂದ' ಚಿತ್ರಕ್ಕೆ ಟೈಟಲ್ ಬದಲಾಗಿದೆ. ಹೊಸ ಟೈಟಲ್ ಕ್ಯಾಚಿಯಾಗಿದ್ದು ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಸಖತ್ ಖುಷಿಯಾಗಿದ್ದಾರೆ. 'ಸತ್ಯಾನಂದ' ಎಂಬ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಪಟೇಲ್ ಕಾರ್ಯಮಗ್ನರಾಗಿದ್ದರು.
ತಮ್ಮ 'ಸತ್ಯಾನಂದ' ಚಿತ್ರಕ್ಕೆ ಹೊಸ ಟೈಟಲ್ ಸೂಚಿಸಿ ಎಂದು ಅವರು ಕರೆಕೊಟ್ಟಿದ್ದರು. ಸೂಕ್ತ ಶೀರ್ಷಿಕೆ ಸೂಚಿಸಿ ಆಯ್ಕೆಯಾದವರಿಗೆ ರು.5 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಮದನ್ ಪಟೇಲ್ ಅವರ ಕರೆಗೆ ಓಗೊಟ್ಟ ಸಾವಿರಾರು ಎಸ್ಎಂಎಸ್ ಗಳು ಬಂದಿವೆ.
ಆಯ್ಕೆಯಾಗಿರುವ ಅದೃಷ್ಟಶಾಲಿ ಹೆಸರು ಮಂಡ್ಯದ ರಾಜೇಶ್. ಈ ಟೈಟಲ್ ಸಮಸ್ಯೆಯೂ ಪರಿಹಾರವಾಗಿದೆ. ಇನ್ನೇನಿದ್ದರೂ ಚಿತ್ರ ಬಿಡುಗಡೆಯಾಗುವುದೊಂದು ಬಾಕಿ ಇದೆ. ಈ ಹಿಂದೆ ವರನಟ ಡಾ.ರಾಜ್ ಕುಮಾರ್ ಅವರು ಅಭಿನಯದಲ್ಲಿ 'ಯಾರಿವನು' ಎಂಬ ಚಿತ್ರ ಮೂಡಿಬಂದಿತ್ತು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಪ್ರೇಮಲೋಕ' ಚಿತ್ರದಲ್ಲಿ "ಯಾರಿವನು ಈ ಮನ್ಮಥನು..." ಎಂಬ ಹಾಡು ನೆನಪಿರಬೇಕಲ್ಲ. ಬಹುಶಃ 'ಯಾರಿವನು' ಚಿತ್ರದ ನಾಯಕನು ಮನ್ಮಥನೇ ಇರಬೇಕು? (ಒನ್ಇಂಡಿಯಾ ಕನ್ನಡ)