Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಶಕಗಳು ಕಳೆದರೂ ಶಂಕ್ರಣ್ಣನ ಬಿಡದ ಆಟೋ ನಂಟು
ಈ ಸಾಕ್ಷ್ಯಚಿತ್ರ ಇಂದಿನ ಬೆಂಗಳೂರು ಬದುಕಿನೊಳಗೊಂದು ಇಣುಕು ನೋಟ ಬೀರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿರುವ ಜಾಗತೀಕರಣವು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಹೊಸಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಇದರ ಜೊತೆಗೆ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಈ ಸಾಕ್ಷ್ಯಚಿತ್ರ ಇಂತಹ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ.
ಬಸವೇಶ್ವರನಗರದ ಶಂಕರ್ ನಾಗ್ ಆಟೋ ಸ್ಟ್ಯಾಂಡ್ ನ ಆಟೋ ಚಾಲಕರ ಸುತ್ತ ಸುತ್ತುವ ಕಥೆ ಇದು. ತಮ್ಮ ಬದುಕು ಬವಣೆ, ಏಳುಬೀಳುಗಳ ಬಗ್ಗೆ ಕಥೆ ಸಾಗುತ್ತದೆ. ಗ್ಯಾಸ್ ಸಬ್ಸಿಡಿ ಸಮಸ್ಯೆ, ಅತಿಹೆಚ್ಚು ಬಡ್ಡಿಗೆ ಸಾಲ, ಸೂಕ್ತ ಸೌಲಭ್ಯಗಳಿಲ್ಲದೇ ಇರುವುದು, ತಮ್ಮ ಗೋಳು ಕಿವಿಗೆ ಹಾಕಿಕೊಳ್ಳದ ಸಂಘ ಸಂಸ್ಥೆಗಳ ಬಗ್ಗೆ ಬಿಚ್ಚಿಕೊಳ್ಳುತ್ತದೆ.
ಸುಷ್ಮಾ ವೀರಪ್ಪ ಅವರ ನಿರ್ದೇಶನ. ಕ್ಯಾಮೆರಾ: ವಿನೋದ್ ರಾಜ್. ಧ್ವನಿಗ್ರಹಣ: ಅರುಣ್ ರಾಮ ವರ್ಮ. ಸಂಕಲನ: ಸುಷ್ಮಾ ವೀರಪ್ಪ ಮತ್ತು ವಸಂತ್ ಕುಮಾರ್. ಅನಿಮೇಷನ್: ಅರ್ಚನಾ ಹಂದೆ. ನಿರ್ಮಾಣ: ಕೌದಿ.
ಸುಷ್ಮಾ ವೀರಪ್ಪ ಕುರಿತು: ಮುಂಬೈನ ಸೋಫಿಯಾ ಪಾಲಿಟೆಕ್ನಿಕ್ ನಲ್ಲಿ ಸೋಷಿಯಲ್ ಕಮ್ಯುನಿಕೇಷನ್ಸ್ ಮೀಡಿಯಾದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರುವ ಇವರು ಬಳಿಕ ಬೆಂಗಳೂರು ಫಿಲಂ ಸೊಸೈಟಿ ಸೇರಿದರು.
ಶಾಲಾ ಮಕ್ಕಳಿಗೆ ಶಿಕ್ಷಣ ಕಾರ್ಯಕ್ರಮ ಕುರಿತಾದ ಚಿತ್ರಗಳನ್ನು ಮಾಡಿದ್ದಾರೆ. 1998ರಿಂದ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಮಹಿಳೆ ಮತ್ತು ದೌರ್ಜನ್ಯ, ಮಳೆ ನೀರಿನ ಸಂಗ್ರಹ, ನಾಯಕತ್ವ ಸಮಸ್ಯೆಗಳು ಹೀಗೆ ಅವರು ಅನೇಕ ಕೋನಗಳಲ್ಲಿ ತಮ್ಮ ದೃಷ್ಟಿ ಬೀರಿದ್ದಾರೆ. ಬದಲಾಗುತ್ತಿರುವ ನಗರ ಜೀವನದ ಬಗ್ಗೆ ಈಗವರ ಆಸಕ್ತಿ. ಅದರ ಪರಿಣಾಮವೇ 'ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ'.