Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಟಗರು' ನೋಡಲು ದುಬೈನಿಂದ ಬರ್ತಿದ್ದಾರೆ 'ಶಿವ' ಭಕ್ತರು.!
ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಅಂದ್ರೇನೇ ಒಂಥರಾ ಖದರ್. ಮನ ಮೆಚ್ಚಿದ ಹುಡುಗನಾಗಿ ಶಿವಣ್ಣ ಕೈಯಲ್ಲಿ ರೋಸ್ ಹಿಡಿಯೋಕೂ ಸೈ.. ತಂಟೆಗೆ ಬಂದೋರ ತಲೆ ತೆಗಿಯೋಕೆ ಕೈಯಲ್ಲಿ ಲಾಂಗ್ ಹಿಡಿಯೋಕೂ ಸೈ. ಕೈಯಲ್ಲಿ ಲಾಂಗ್ ಹಿಡಿದು, ಶಿವಣ್ಣ ನಡೆದು ಬರ್ತಿದ್ರೆ ಎದುರಿಗಿದ್ದೋರು ಖಲ್ಲಾಸ್.!
ಇಂತಹ 'ಮಾಸ್ ಅಪೀಲ್' ಇರುವ ಶಿವಣ್ಣಗೆ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ನಾಟ್ಯ ಸಾರ್ವಭೌಮ, ಕರುನಾಡ ಚಕ್ರವರ್ತಿ ಅಂತೆಲ್ಲ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ.
ಶಿವಣ್ಣನ ಸಿನಿಮಾ ಯಾವಾಗ ತೆರೆಗೆ ಬರುತ್ತೋ ಅಂತ ಕಾಯುವ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ, ವಿದೇಶಗಳಲ್ಲೂ ಶಿವಣ್ಣನ ಸಿನಿಮಾಗಳಿಗೆ ಬಕಪಕ್ಷಿಗಳಂತೆ ಕಾಯುವ 'ಭಕ್ತ'ರಿದ್ದಾರೆ. ಈಗ ಅದೇ ಶಿವ'ಭಕ್ತ'ರು 'ಟಗರು' ಚಿತ್ರವನ್ನ ಕಣ್ತುಂಬಿಕೊಳ್ಳಲು ದುಬೈನಿಂದ ಬೆಂಗಳೂರಿಗೆ ಬರ್ತಿದ್ದಾರೆ. ಮುಂದೆ ಓದಿರಿ....
'ಟಗರು' ನೋಡಲು ಬರ್ತಿದ್ದಾರೆ ಶಿವಣ್ಣನ ದುಬೈ ಫ್ಯಾನ್ಸ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಫೆಬ್ರವರಿ 23 ರಂದು ಬಿಡುಗಡೆ ಆಗಲಿದೆ. 'ಟಗರು' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಅಂತಲೇ ದುಬೈನಿಂದ ಬೆಂಗಳೂರಿಗೆ ಬರ್ತಿದ್ದಾರೆ ಶಿವಣ್ಣನ ಅಭಿಮಾನಿಗಳು.
'ಟಗರು' ಜೊತೆ ಕುಣಿಯಲಿದ್ದಾರೆ ಶಾನ್ವಿ, ಪಾರೂಲ್, ಮಾನ್ವಿತಾ
ಎಷ್ಟು ಜನ ಬರ್ತಿದ್ದಾರೆ.?
ಸುಮಾರು 25-30 ಮಂದಿ (ಶಿವಣ್ಣನ ಅಭಿಮಾನಿಗಳು) ದುಬೈನಿಂದ ಆಗಮಿಸುತ್ತಿದ್ದಾರೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ 'ಟಗರು' ವೀಕ್ಷಿಸಲಿದ್ದಾರೆ.
ವಿಶೇಷ ಬಸ್ ವ್ಯವಸ್ಥೆ ಇದೆ
ದುಬೈನಿಂದ ಅಭಿಮಾನಿಗಳು ಬರುತ್ತಿರುವ ಸುದ್ದಿಯನ್ನು ಕೇಳಿದ 'ಟಗರು' ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹರ್ಷ ವ್ಯಕ್ತಪಡಿಸಿದ್ದು, ದುಬೈ ಅಭಿಮಾನಿಗಳಿಗೆ ಸಹಕಾರಿ ಆಗಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಸಂತೋಷ್ ಚಿತ್ರಮಂದಿರದವರೆಗೆ ಬಸ್ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.
'ಟಗರು' ಚಿತ್ರದ ಕುರಿತು...
'ಟಗರು' ಮೈಯೆಲ್ಲ ಪೊಗರು... ಚಿತ್ರದಲ್ಲಿ ಶಿವರಾಜ್ ಕುಮಾರ್ ಖಡಕ್ ಆಗಿ ಕಾಣಿಸಿಕೊಂಡಿದ್ದರೆ, ವಿಲನ್ ಪಾತ್ರಗಳಲ್ಲಿ ಧನಂಜಯ್, ವಸಿಷ್ಟ ಸಿಂಹ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಸೂರಿ ಆಕ್ಷನ್ ಕಟ್ ಹೇಳಿದ್ದಾರೆ.