twitter
    For Quick Alerts
    ALLOW NOTIFICATIONS  
    For Daily Alerts

    'ಅಭಿಮಾನಿ ದೇವರು'ಗಳಿಗೆ ಶಿವಣ್ಣನ ಆದರದ ಆಮಂತ್ರಣ

    By Harshitha
    |

    ಅಣ್ಣಾವ್ರ ಮುದ್ದಿನ ಮೊಮ್ಮಗಳು, ಡಾ.ಶಿವರಾಜ್ ಕುಮಾರ್ ಸುಪುತ್ರಿ ನಿರುಪಮಾ ವಿವಾಹ ಮಹೋತ್ಸವಕ್ಕೆ ಇನ್ನು ಮೂರು ದಿನಗಳು ಬಾಕಿ. ಆಗಸ್ಟ್ 30-31 ರಂದು ಅರಮನೆ ಮೈದಾನದಲ್ಲಿ ಡಾ.ನಿರುಪಮಾ, ಡಾ.ದಿಲೀಪ್ ಅವರ ಕೈಹಿಡಿಯಲಿದ್ದಾರೆ.

    ವಧು-ವರರನ್ನ ಆಶೀರ್ವದಿಸುವುದಕ್ಕೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನ ದೊಡ್ಡ ದೊಡ್ಡ ಕಲಾವಿದರಿಗೆ ಆತ್ಮೀಯ ಆಮಂತ್ರಣ ನೀಡಲಾಗಿದೆ.

    nirupama marriage

    ಬಿಗ್ ಬಿ ಅಮಿತಾಬ್ ಬಚ್ಚನ್, ಸೂಪರ್ ಸ್ಟಾರ್ ರಜಿನಿಕಾಂತ್, ಸಕಲಕಲಾವಲ್ಲಭ ಕಮಲ್ ಹಾಸನ್ ಸೇರಿದಂತೆ ಭಾರತೀಯ ಚಿತ್ರರಂಗದ ಅತಿರಥ ಮಹಾರಥರೇ ಶಿವಣ್ಣನ ಮಗಳ ಮದುವೆಗೆ ಆಗಮಿಸುವ ನಿರೀಕ್ಷೆ ಇದೆ. [ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ!]

    ಇಂತಿಪ್ಪ ದೊಡ್ಡ ದೊಡ್ಡ ಕಲಾವಿದರ ಜೊತೆ ನೀವೂ ಸಹ ದೊಡ್ಮನೆ ಮೊಮ್ಮಗಳ ಮದುವೆಗೆ ಹೋಗಿ ಆಶೀರ್ವಾದ ಮಾಡಿ ಬರಬಹುದು. ಅಂತಹ ಸದಾವಕಾಶವನ್ನ ಡಾ.ಶಿವರಾಜ್ ಕುಮಾರ್ ಮತ್ತು ಅವರ ಆಪ್ತ ಕೆ.ಪಿ.ಶ್ರೀಕಾಂತ್ ಒದಗಿಸಿದ್ದಾರೆ.

    shivarajkumar

    ಯಾವುದೇ ರೀತಿಯ ಪಾಸ್ ಇಲ್ಲದೆ ಎಲ್ಲಾ 'ಅಭಿಮಾನಿ ದೇವರುಗಳು' ಅರಮನೆ ಮೈದಾನದಲ್ಲಿ ನಡೆಯುವ ಶಿವಣ್ಣನ ಮುದ್ದಿನ ಮಗಳ ವಿವಾಹಕ್ಕೆ ತೆರಳಬಹುದು. [ಶಿವರಾಜ್ ಕುಮಾರ್ ಮಗಳ ಮದುವೆ ಸಿದ್ಧತೆ ಚಿತ್ರಗಳು]

    ಹಾಗಾದ್ರೆ, ಇನ್ಯಾಕೆ ತಡ. ಇಂದ್ರ ಲೋಕವೇ ಧರೆಗಿಳಿದಂತೆ ವೈಭೋಗದಿಂದ ನಡೆಯಲಿರುವ ವಿವಾಹ ಮಹೋತ್ಸವಕ್ಕೆ ನೀವು ಸಾಕ್ಷಿಯಾಗೋಕೆ ತಯಾರಾಗಿ.

    English summary
    Kannada Actor Shivarajkumar has invited all his fans for his daughter's marriage. No pass or Invitation is required for the people to enter the Marriage Hall.
    Thursday, August 27, 2015, 15:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X