Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೋಟುಗಾಡು ತಮಿಳು ರಿಮೇಕ್ ನಲ್ಲಿ ಸಿಂಬು
ನಿರ್ದೇಶಕ ಪವನ್ ಒಡೆಯರ್ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ಕನ್ನಡದಲ್ಲಿ ಗೋವಿಂದಾಯ ನಮಃ ಹಾಗೂ ಗೂಗ್ಲಿ ಚಿತ್ರಗಳ ಯಶಸ್ಸಿನ ಜತೆಗೆ ತೆಲುಗಿನಲ್ಲಿ 'ಪೋಟುಗಾಡು' ಚಿತ್ರ ನಿರ್ದೇಶಿಸಿ ಗೆದ್ದಿದ್ದಾರೆ.
ಕೋಮಲ್ ಅಭಿನಯದ ಗೋವಿಂದಾಯ ನಮಃ ಚಿತ್ರ ತೆಲುಗಿನಲ್ಲಿ 'ಪೋಟುಗಾಡು' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಗೆದ್ದಿದೆ. ಮೋಹನ್ ಬಾಬು ಅವರ ಮಗ ಮಂಚು ಮನೋಜ್ ಅಭಿನಯದ ಚಿತ್ರ ಪೋಟುಗಾಡು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.
ಆದರೆ, ಪೋಟುಗಾಡು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದೆ ಎಂದು ನಿರ್ಮಾಪಕ ಲಗಡಪತಿ ಶ್ರೀಧರ್ ಹೇಳಿದ್ದಾರೆ. ಇದೇ ಖುಷಿಯಲ್ಲಿ ಈ ಚಿತ್ರವನ್ನು ಕಾಲಿವುಡ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಮೈ ಆಟೋಗ್ರಾಫ್ ಎಂಬ ಉತ್ತಮ ಚಿತ್ರ ನಿರ್ದೇಶಿಸಿದ್ದ ಚೇರನ್ ಅವರು ಪೋಟುಗಾಡು ತಮಿಳು ರಿಮೇಕ್ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಸಿಂಬು ನಾಯಕರಾಗಿದ್ದರೆ, ಸಂತಾನಂ ಕಾಮಿಡಿ ಟ್ರ್ಯಾಕ್ ನೋಡಿಕೊಳ್ಳಲಿದ್ದಾರಂತೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಮ್ಮ ಪವನ್ ಒಡೆಯರ್ ಅವರೇ ತಮಿಳಿನಲ್ಲೂ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ, 'ನನಗೆ ಭಾಷಾ ಸಮಸ್ಯೆ ಇರುವುದರಿಂದ ತಮಿಳು ಚಿತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೇ ನಾನು ಈಗಾಗಲೇ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದೇನೆ' ಎಂದು ಹ್ಯಾಟ್ರಿಕ್ ನಿರ್ದೇಶಕ ಪವನ್ ಹೇಳಿದ್ದಾರೆ.
ಪವನ್ ಅವರು ಸದ್ಯಕ್ಕೆ ನಾಯಕನಾಗಿ ಬಡ್ತಿ ಪಡೆದಿದ್ದು ಪ್ರೀತಿ ಗೀತಿ ಇತ್ಯಾದಿ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಗೂಗ್ಲಿ ಯಶಸ್ಸಿನ ನಂತರ ಗೂಗ್ಲಿ 2 ತೆರೆಗೆ ತರಲು ಕೂಡಾ ಉತ್ಸುಕರಾಗಿದ್ದಾರಂತೆ.