Don't Miss!
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- News Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್-ಎಲ್ಲಿ?
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯಕ ರಾಜೇಶ್ ಕೃಷ್ಣನ್ ದಾಂಪತ್ಯದಲ್ಲಿ ಬಿರುಕು
ಇನ್ನೂ ಚಿಗುರು ಮೀಸೆ ಹುಡುಗನಂತೆ ಕಾಣುವ ಕನ್ನಡದ ಜನಪ್ರಿಯ ಹಿನ್ನೆಲೆ ಗಾಯಕ, ನಟ, ಸಂಗೀತ ನಿರ್ದೇಶಕ ರಾಜೇಶ್ ಕೃಷ್ಣನ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರ ಬಾಳಸಂಗಾತಿ ರಮ್ಯಾ ವಸಿಷ್ಠ್ ಅವರು ವಿವಾಹ ರದ್ದು (ವಿಚ್ಛೇದನ ಅಲ್ಲ) ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 12 (1) ಎ ಅಡಿ ಅವರು ರಾಜೇಶ್ ಕೃಷ್ಣನ್ ಅವರೊಂದಿಗೆ ವಿವಾಹ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಫೆ.5ರಂದೇ ಅವರು ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ಹಿಂದಷ್ಟೇ ರಾಜೇಶ್ ಅವರು ರಮ್ಯಾ ಅವರನ್ನು ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ವರಿಸಿದ್ದರು.
ರಮ್ಯಾ ವಸಿಷ್ಠ್ ಅವರೊಂದಿಗೆ ರಾಜೇಶ್ ದಾಂಪತ್ಯ ಜೀವನ ಸುಖವಾಗಿರುತ್ತದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಭಾವಿಸಿದ್ದರು. ಆದರೆ ವರ್ಷ ಕಳೆಯುವಷ್ಟರಲ್ಲಿ ಎಲ್ಲವೂ ಹುಸಿಯಾಗಿದೆ. ರಾಜೇಶ್ ಕೃಷ್ಣನ್ ದಾಂಪತ್ಯ ಜೀವನ ಮತ್ತೊಮ್ಮೆ ಹಳಿ ತಪ್ಪಿದೆ. (ರಾಜೇಶ್ ವಿವಾಹ ಮುರಿದು ಬೀಳಲು ಕಾರಣಗಳು)
ಈ ಹಿಂದೆ ರಾಜೇಶ್ ಅವರಿಗೆ ಸೌಮ್ಯಾ ರಾವ್ (ಬಿಕೆ ಸುಮಿತ್ರಾ ಅವರ ಪುತ್ರಿ) ವಿವಾಹವಾಗಿ ವಿಚ್ಛೇದನವಾಗಿದೆ. ಈಗ ರಮ್ಯಾ ಅವರು ವಿವಾಹ ರದ್ದು ಕೋರಲು ಬಲವಾದ ಕಾರಣವನ್ನೂ ನೀಡಿದ್ದಾರೆ. ಅದೇನೆಂದರೆ ಅವರಿಗೆ ಲೈಂಗಿಕಕ್ರಿಯೆ (ಪುರುಷತ್ವ ಇಲ್ಲ) ನಡೆಸುವ ಸಾಮರ್ಥ್ಯ ಇಲ್ಲ ಎಂಬುದು. ಹಾಗೇ ತಾವಿನ್ನೂ ಕನ್ಯೆ ಎಂದೂ ತಿಳಿಸಿದ್ದಾರೆ ಎನ್ನಲಾಗಿದೆ. ಏ.4ರಂದು ಕೋರ್ಟ್ ಗೆ ಹಾಜರಾಗುವಂತೆ ರಾಜೇಶ್ ಅವರಿಗೆ ಕೋರ್ಟ್ ಆದೇಶಿಸಿದೆ. [ಜೋಕ್ : ಗಂಡಸ್ತನ ಪ್ರಶ್ನಿಸಿದ ಹೆಂಡತಿಗೆ ಗಂಡನ ಉತ್ತರ] (ಏಜೆನ್ಸೀಸ್)