Don't Miss!
- News karnataka Rain: ಕರ್ನಾಟಕದಲ್ಲಿ ಮುಂದಿನ ಮೂರು ದಿನ ದಾರಕಾರ ಮಳೆ: ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಅರ್ಭಟ!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೋಟೋ ಆಲ್ಬಂ: ತಮಿಳು ಸ್ಟಾರ್ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ-ಶಿವಣ್ಣ ಭಾಗಿ
ದಕ್ಷಿಣ ಭಾರತದ ಕಲಾವಿದರ ಸಂಘದ ಸ್ವಂತ ಕಟ್ಟಡ ನಿರ್ಮಿಸುವ ಸಲುವಾಗಿ ದಕ್ಷಿಣ ಭಾರತದ ಎಲ್ಲಾ ನಟರು ಒಗ್ಗೂಡಿದ್ದಾರೆ. ಈ ಕಟ್ಟಡ ನಿರ್ಮಾಣದ ಅಂಗವಾಗಿ ಒಂದು ದಿನದ ಸ್ಟಾರ್ಸ್ ಕ್ರಿಕೆಟ್ ಲೀಗ್ ಅನ್ನು ಹಮ್ಮಿಕೊಳ್ಳಲಾಗಿತ್ತು.
ಹೌದು ಏಪ್ರಿಲ್ 17, ಭಾನುವಾರದಂದು ಎಲ್ಲಾ ತಮಿಳು ಸ್ಟಾರ್ ನಟ-ನಟಿಯರು ಚಿದಂಬರಂ ಕ್ರಿಕೆಟ್ ಸ್ಟೇಡಿಯಂ ಚೆನ್ನೈ ನಲ್ಲಿ ಒಂದಾಗಿದ್ದರು. 'ನಡಿಗರ ಸಂಘ'ದ ವತಿಯಿಂದ 'ನಚ್ಚತ್ತಿರ (ನಕ್ಷತ್ರ) ಕ್ರಿಕೆಟ್' ಅಂತ ತಮಿಳು ಸ್ಟಾರ್ ನಟರಿಗಾಗಿಯೇ ಈ ಕ್ರಿಕೆಟ್ ಲೀಗ್ ಹಮ್ಮಿಕೊಳ್ಳಲಾಗಿತ್ತು.[ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]
ಈ ಸ್ಟಾರ್ ಕ್ರಿಕೆಟ್ ಲೀಗ್ ಅನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲ್ ಹಾಸನ್ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ನಟರೊಂದಿಗೆ 'ನಡಿಗರ ಸಂಘ'ದ ಪದಾದಿಕಾರಿಗಳು, ಅಧ್ಯಕ್ಷ ನಾಸಿರ್, ಪ್ರಧಾನ ಕಾರ್ಯದರ್ಶಿ ವಿಶಾಲ್ ರೆಡ್ಡಿ ಮುಂತಾದವರು ಭಾಗವಹಿಸಿದ್ದರು.
ಇನ್ನು ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ಮತ್ತು ಮಾಲಿವುಡ್ ನ ಸ್ಟಾರ್ ನಟರೂ ಪಾಲ್ಗೊಂಡಿದ್ದರು. ಕನ್ನಡ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟ ಅಂಬರೀಶ್ ದಂಪತಿಗಳು, ತೆಲುಗು ನಟ ಬಾಲಕೃಷ್ಣ, ವಿಕ್ಟರಿ ವೆಂಕಟೇಶ್, ಮಲಯಾಳಂ ನಟ ಮಮ್ಮೂಟ್ಟಿ, ನಿವಿನ್ ಪೌಲ್ ಸೇರಿದಂತೆ ಅನೇಕ ನಟರು ಭಾಗವಹಿಸಿದ್ದರು.
ಲೀಗ್ ಪಂದ್ಯ ನಡೆದ ಬಳಿಕ ನಟ ಸೂರ್ಯ ನೇತೃತ್ವದ 'ಸಿಂಗಮ್ಸ್' ತಂಡ ಹಾಗೂ ಜೀವಾ ನೇತೃತ್ವದ 'ತಂಜಾವೂರ್' ತಂಡದ ನಡುವೆ ಅಂತಿಮ ಪಂದ್ಯ ನಡೆದು ಸೂರ್ಯ ಅವರ ತಂಡ ಜಯಗಳಿಸಿತು. ಇನ್ನು ಏಪ್ರಿಲ್ 17ರಂದು ನಟ ಚಿಯಾನ್ ವಿಕ್ರಂ ಅವರ ಹುಟ್ಟುಹಬ್ಬವಿದ್ದು, ಇದೇ ಸಂದರ್ಭದಲ್ಲಿ ಅವರ ಹುಟ್ಟುಹಬ್ಬ ಕೂಡ ಆಚರಿಸಲಾಯಿತು.[ರಜನಿ ಬಗ್ಗೆ ವರ್ಮಾ ಕಾಮೆಂಟ್.! ಟ್ವಿಟ್ಟರ್ ನಲ್ಲಿ ಸಿಟ್ಟಿಗೆದ್ದ ರಜನಿ ಫ್ಯಾನ್ಸ್.!]
ಚೆನ್ನೈನ ಟಿ.ನಗರ್ ನಲ್ಲಿ ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ಕ್ರಿಕೆಟ್ ಲೀಗ್ ಪಂದ್ಯಾಟದ ಫೋಟೋ ಆಲ್ಬಂ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...(ಚಿತ್ರಕೃಪೆ: ಫೇಸ್ ಬುಕ್, ಟ್ವಿಟ್ಟರ್)