Don't Miss!
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- News BREAKING: ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮೂವರು ಸಾವು
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪರಮಾತ್ಮ' ಆಯ್ತು ಈಗ 'ಪರಬ್ರಹ್ಮ' ಚಿತ್ರದ ಜಪ
ಚಿತ್ರದ ನಾಯಕ 'ಚಂದ್ರ ಚಕೋರಿ' ಚಿತ್ರದಿಂದ ಮನೆಮಾತಾದ ನಟ ಶ್ರೀಮುರಳಿ. ಸತತ ಸೋಲುಗಳಿಂದ ಕಂಗೆಟ್ಟಿರುವ ಅವರು ಇತ್ತೀಚೆಗೆ ಅವರು ಹಲವಾರು ವಿಭಿನ್ನ ಚಿತ್ರಗಳನ್ನು ಒಪ್ಪಿಕೊಂಡಿರುವುದು ಗೊತ್ತೇ ಇದೆ. ಅವುಗಳಲ್ಲಿ 'ಲೂಸುಗಳು' ಚಿತ್ರವೂ ಒಂದು.
ಶಂಭು, ಗೋಪಿ, ಮಿಂಚಿನ ಓಟ, ಶಿವಮಣಿ, ಯಜ್ಞ, ಶ್ರೀಹರಿಕಥೆ ಚಿತ್ರಗಳು ಬಾಕ್ಸಾಫೀಸಲ್ಲಿ ನಿರಾಸೆ ಮೂಡಿಸಿದ್ದವು. ಈಗವರು 'ಪರಬ್ರಹ್ಮ' ಚಿತ್ರಕ್ಕೆ ಹಲವು ರೀತಿಯಲ್ಲಿ ತಯಾರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಈ ಚಿತ್ರ ಮತ್ತೊಂದು ತಿರುವು ನೀಡಲಿದೆ ಎಂಬ ನಿರೀಕ್ಷೆ ಅವರದು.
ಏನಿದು 'ಪರಬ್ರಹ್ಮ' ಎಂಬ ಬಗ್ಗೆ ಕುತೂಹಲ ಸಹಜ. ಇದೊಂದು ಸಾಹಸ ಹಾಗೂ ಸೆಂಟಿಮೆಂಟ್ ಪ್ರಧಾನ ಚಿತ್ರವಂತೆ. ಫ್ರೆಂಡ್ಸ್ ಸಿನಿ ಕ್ರಿಯೇಷನ್ಸ್ ಲಾಂಛನದ ಚಿತ್ರಕ್ಕೆ ಸುಂದರ್ ಪಾಟೀಲ್ ಹಾಗೂ ಉದಯ ಚಂದ್ರ ನಿರ್ಮಾಪಕರು.
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ, ಕೃಷ್ಣ ಸಾರಥಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಥ್ರಿಲ್ಲರ್ ಮಂಜು ಹಾಗೂ ರವಿವರ್ಮ ಅವರ ಮೈನವಿರೇಳಿಸುವ ಸಾಹಸಗಳು ಚಿತ್ರದಲ್ಲಿರುತ್ತವೆ.
ಶ್ರೀಮುರಳಿ ಅವರಿಗೆ ನಾಯಕಿಯಾಗಿ ಆಕಾಂಕ್ಷಾ ಅವರು ಆಯ್ಕೆಯಾಗಿದ್ದಾರೆ. ಪಾರ್ವತಿ ನಾಯರ್, ಗುರುರಾಜ್ ಹೊಸಕೋಟೆ, ಸಾಧು ಕೋಕಿಲ, ಟೆನ್ನಿಸ್ ಕೃಷ್ಣ, ಕಿಲ್ಲರ್ ವೆಂಕಟೇಶ್, ಶೀಲ ಪ್ರಸಾದ್ ಮುಂತಾದವರ ತಾರಾಗಣ ಚಿತ್ರಕ್ಕಿದೆ. (ಏಜೆನ್ಸೀಸ್)